ಪುಟ:ಚೆನ್ನ ಬಸವೇಶವಿಜಯಂ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜರುಪತಿಪಟ್ಟವು ೨೩೫ ರಾಕ್ಷಸರ ಪಲ್ಲಕ್ಕಿಗಳೇ ಕಾಣುವಂತಾದುವು. ಇವರ ಪ್ರಾಬಲ್ಯವನ್ನು ದೇ ವತೆಗಳು ಕೇಳಿ, ಇನ್ನು ನಮ್ಮ ಗತಿಯೇನಾಗುವುದೋ ಎಂದು ಚಿಂತಿಸಿದ ರು. ಅವರು ಭಯಪಡುತ್ತಿದ್ದಂತೆಯೇ ತಾರಕಾಕ್ಷಾದಿಗಳು ದಿಗ್ವಿಜಯ ಕ್ಕೆ ಹೊರಟು ಸ್ವರ್ಗಮರ್ತ್ಯಪಾತಾಳಗಳನ್ನೆಲ್ಲ ಲಗ್ಗೆ ಹತ್ತಿ ಸರವನ್ನೂ ತ ಮೈ ವಶಮಾಡಿಕೊಳ್ಳುತ್ತ ಬಂದರು, ದಿಕ್ಷಾಲಕರ ಪಟ್ಟಣಗಳನ್ನೆಲ್ಲ ನುಗ್ಗಿ ಸಿಕ್ಕಿದ ವಸ್ತುಗಳನ್ನು ಕೊಳ್ಳೆ ಹೊಡೆದು ಕೈಗೆ ಸಿಕ್ಕಿದವರನ್ನು ಸೆರೆಹಿಡಿ ದು ತಮ್ಮ ನಗರಗಳಿಗೆ ಕಳುಹುತ್ತ ಬಂದರು, ದೇವರಾಜನಾದ ಇಂದ್ರನು ವೇಷಾಂತರದಿಂದ ತಲೆತಪ್ಪಿಸಿಕೊಂಡು ಓಡಿಹೋಗಿ ಮೇರುಪರತದ ಗು ಹೆಯಲ್ಲಿ ಹೊಕ್ಕಿಕೊಂಡನು. ಉಳಿದ ದೇವತೆಗಳೂ ಅವನನ್ನೇ ಅನುಸರಿ ಸಿದರು. ಒಂದುದಿನ ಎಲ್ಲರೂ ಕುಳಿತುಕೊಂಡು ರಾಕ್ಷಸರ ವಧೆಗೆ ಈ ಸಾಯನೇನೆಂದು ಆಲೋಚಿಸಿದರು. ತಮ್ಮಿಂದ ಹರಿಯದೆ ಹೋಗಲು, ರಾಕ್ಷಸರಿಗೆ ವರವನ್ನು ಕೊಟ್ಟು ಇದಕ್ಕೆಲ್ಲ ಮೂಲಭೂತನಾದ ಬ್ರಹ್ಮನಿಂ ದಲೆ: ಇದಕ್ಕೆ ಪರಿಹಾರವನ್ನು ಮಾಡಿಸಬೇಕೆಂದು ಯೋಚಿಸಿ, ಅವನಲ್ಲಿಗೆ ಹೊದರು. ಅವನು ಇವರು ಬಂದ ಕಾರಣವನ್ನೆಲ್ಲ ಕೇಳಿ, ವಿಷ್ಣುವಿನ ಬ ಆಗೆ ಎಲ್ಲರನ್ನೂ ಕರೆದುಕೊಂಡುಹೋದನು. - ತಾರಕಾಕ್ಷಾದಿ ರೈತರ ದಾವ° ಯನ್ನ ಸಾಂಗವಾಗಿ ಹರಿಯೊಡನೆ ಬಿನ್ನೆ ಸಿಕೊಂಡು ನಮ್ಮ ಈ ದ್ವಾರಕ್ಕೆ ಉಪಾಯವನ್ನು ಬೆಸಸಬೆಕೆಂದು ಬೇಡಿದರು. ವಿಷ್ಣು ವಾದ ರೊ – “ ಎಲೆ ದೇವತೆಗಳಿರಾ ! ಈಗ ನಾವು ಆ ರಾಕ್ಷಸರನ್ನು ಗೆಲ್ಲುವು ದು ಸುಲಭವಲ್ಲ ; ಅವರೆಲ್ಲರೂ ಮಹಾಶಿವಭಕ್ತರಾಗಿ ಲಿಂಗಾರ್ಚನೆಯನ್ನು ಮಾಡುತ್ತಿ ದ್ದಾರೆ ; ಆ ಶಿವಭಕ್ತಿಸಾತಿವ್ರತೃಗಳ ಬಲವು ಅವರಲ್ಲಿರುವವರೆ ಗೂ ನಾವು ಅವರನ್ನು ಜೈಸಲಾರೆವು ” ಎಂದನು. ದೇವತೆಗಳಾದರೋರಾಕ್ಷಸರು ಮಯನ ಮಾತಿನಮೇರೆ ಶಿವಾರಾಧನೆಯನ್ನು ಮಾಡುತ್ತಿದ್ದಾರೆ ಯೇ ಹೊರತು, ಅಂಥ ಕೇವಲಭತತ್ಪರರಲ್ಲ ; ಎಂದು ನುಡಿಯಲು, ವಿಷ್ಣುವು- ಅವರು ಭಕ್ತಿಯಲ್ಲಿ ಕಡಿಮೆಯಾದವರಲ್ಲ ; ಸಾಮಾನರೆಂದು ನೀವು ತಿಳಿಯಬೇಡಿರಿ ; ಎಂದು ಹೇಳಿದನು. ಕಡೆಗೆ “ ನಾವೆಲ್ಲರೂ ಶಿವ ನನ್ನು ಧ್ಯಾನಿಸಿ, ಅವನಾಜ್ಞೆಯಿಂದ ಅಗಣಿತವಾದ ಭೂತಪ್ರೇತಾದಿಗಳನ್ನು ಹುಟ್ಟಿಸಿ, ಅವುಗಳನ್ನು ದೈತ್ಯರಮೇಲೆ ನುಗ್ಗಿಸಿ ಕೊಲ್ಲಿಸಬೇಕು ” ಎಂ ) ಈ