ಪುಟ:ಚೆನ್ನ ಬಸವೇಶವಿಜಯಂ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩ8ܩ ಚನ್ನ ಬಸವೇಕವಿಜಯಂ (ಕಾಂಡ ೪) ಅಧ್ಯಾಯ ಗಳನ್ನೆಲ್ಲ ಬಿಗಿಮಾಡಿ ಸರಿಗೊಳಿಸಿದನು, ವೃಷಭಾಕಾರದ ಹರಿಯು ರಥದ ಮಹಾಭಾರವನ್ನೆತ್ತಿದುದರಿಂದ ತರಹರಿಸಿ ಕಣ್ಣು ತಿರುಗಿ ರಕ್ತವನ್ನು ಕಕ್ಕಿ ವಿಚೇತನನಾದನು. ಆಗ ಶಂಕರನು ಕರುಣಾಕಟಾಕ್ಷದಿಂದ ನೋಡಿ ಚೈತ ನೃವನ್ನು ಕೊಟ್ಟು, ಹರಿಯೆ ! ನಿನ್ನ ಸಾಹಸಕ್ಕೆ ಮೆಚ್ಚೆದೆನು, ಇಪ್ಯಾ ರ್ಥವನ್ನು ಕೇಳು ಎನಲು, ಹರಿಯು ಸಾ ಮಾ ನಾನು ಶಕ್ತಿಯೊಳಗೆ ಆ ಮೂಲಶಕ್ತಿಯಾಗಿ ನಿನ್ನಲ್ಲಿ ಹೇಗೆ ಇರುವೆನೊ, ಹಾಗೆಯೇ ವೃಷಭ ನಲ್ಲಿ ಮಹಾವೃಸಭನಾಗಿ ನಾನಿರುವಂತೆಯೂ ನಿನ್ನ ಮೇಲಣ ಭಕ್ತಿಯು ನನ್ನಲ್ಲಿ ಸಂಪೂರ್ಣವಾಗಿರುವಂತೆಯೂ ಅನುಗ್ರಹಿಸು, ಎಂದು ಬೇಡಿದ ನು, ಶಿವನು ತಥಾಸ್ತು ಎಂದನು. ಸಕಲ ದೇವತೆಗಳೂ ಮತ್ತೆ ಜಯ ಘೋಪವನ್ನು ಮಾಡಿದರು, ಸ್ವಾಮಿಯು ಪತ್ನಿ ಸಮೇತನಾಗಿ ರಥದಲ್ಲಿ ಮೂರಿಗೊಂಡನು, ಸರರಿಗೂ ಅವರವರ ವಾಹನವನ್ನೇರುವಂತೆ ಅಪ್ಪಣೆ ಮಾಡಿದನು, ದೇವತಾಸ್ತೋಮವು ಗಣಪತಿಯ ಸ್ತೋತ್ರವನ್ನು ಮಾಡ ಲು, ಆತನು ಸಂತುಷ್ಯನಾಗಿ ನಿರೀಕ್ಷತೆಯ ವರವನ್ನಿತ್ತು ದೇವದುಂದುಭಿ ಯನ್ನು ತಾಡಿಸಿದನು, ಮಹಾವಾದ್ಯಗಳ ವಿಜೃಂಭಣೆಯ ಬ್ರಹ್ಮಾಂಡಕ ಟಾಹವನ್ನು ಒಡೆಯುವಂತೆ ಮಾಡಿತು. ಸಕಲ ಚತುರಂಗ'ವೂ ಆ ಯತ್ತವಾಗಿ ಹೊರಟಿತು. ರಥದ ಮುಂಗಡೆಯಲ್ಲಿ ನಂದೀಶನು ಬೆತ್ತವನ್ನು ಹಿಡಿದು ನಡೆದನು, ಎಡಬಲದಲ್ಲಿ ಗಣಪತಿ ಪ್ರಣಖರ ಆಲಿ ನವಿಲುಗಳ ನ್ನು ಹತ್ತಿ ನಡೆದರು. ಹರಿಬ್ರಹ್ಮರು ಗರುಡಹಂಸಗಳನ್ನು ಹತ್ತಿ ಅವರ ಪಕ್ಕದಲ್ಲಿ ನಡೆದರು. ದಿಕ್ಷಾಲಕರುಗಳು ರಥದ ಸುತ್ತಲೂ ಅವರವರ ವಾ ಹನಗಳನ್ನೇರಿ ತಮ್ಮ ತಮ್ಮ ದಿಕ್ಕಿನಲ್ಲಿ ನಿಂತು ಹೊರಟರು. ಇಂಥ ವ ಹಾವಿಜೃಂಭಣೆಯ ಪ್ರಯಾಣವನ್ನು ನೋಡಿದ ಮನುಮುನಿಸಿದ್ದ ಸಾಧ್ಯಾ ದಿಗಳೆಲ್ಲರೂ ಇಂದು ನಮ್ಮ ಕಣ್ಣಿನ ಹಬ್ಬವಾಯ್ತಿಂದು ಧನ್ಯವಾದವನ್ನು ಮಾಡುತ್ತಿದ್ದರು, ಗಣನಾತೀತವಾದ ಹಸ್ಯಶರಥಪದಾತಿಗಳಿ೦ದಲೂ, ಛತ್ರಚಾಮರಾಜಪಟಗಳಿಂದಲೂ, ನಿಬಿಡವಾದ ಈ ಮಹಾದೇವಸೇನೆ ಯು ತ್ರಿಪುರದ ದಾರಿಯನ್ನು ಹಿಡಿದು ನಡೆದು, ಪಟ್ಟಣಕ್ಕೆ ಸಮಿಾಪವಾದ ಒಂದು ದೊಡ್ಡ ಬಯಲಿನಲ್ಲಿ ಬೀಡನ್ನು ಬಿಟ್ಟು ಮಾರ್ಗಾಯಾಸದಿಂದ ವಿ ಶ್ರಮಿಸಿಕೊಂಡಿತು, ಈ ಸೈನ್ಯದ ಒಟ್ಟು ಕಾವಲು ಭೈರವನಿಗೆ ನೇಮಿಸ