ಪುಟ:ಚೆನ್ನ ಬಸವೇಶವಿಜಯಂ.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦೦ ಚನ್ನಬಸವೇಜನವಿಯಂ (ಕಾಂಡ ೪) [ಅಧ್ಯಾಯ ನನ್ನತ್ತಿ, ದೈತ್ಯನ ಎದೆಗೆ ತಿವಿದನು. ಅದು ನಟ್ಟು ಬೆನ್ನಿನಿಂದ ಮೂಡಲು, ದೈತ್ಯನ ದೇಹದಸಮೇತವಾಗಿ ಶೂಲವನ್ನು ಶಂಕರನು ಮೇಲಕ್ಕೆತ್ತಿದನು. ರಕ್ತವು ಧಾರೆಯಾಗಿ ಮೇಲಿನಿಂದ ಸುರಿಯುತ್ತಿದ್ದಿತು, ರಕ್ಕಸನು ಹಮ್ಮು ಡುಗಿದನು, ಗಡಗಡನೆ ನಡುಗಿದನು. ಜ್ಞಾನೋದಯಗೊಂಡು, ಪ್ರಜ್ಞಾ ದನ ಮಾತನ್ನು ಸ್ಮರಿಸಿ, ಶಿವಧ್ಯಾನ ಮಾಡತೊಡಗಿ, ಜಯಕಾಲಕಾಮಾ ರಿ! ಜಯಭಕ್ಕರುಪಕಾರಿ ! ಜಯಭುಜಂಗಾಭರಣ ! ಜಯ ಪದಾನತ ಕರುಣ ! ಜಯ ದುಖ್ಯಶಿಕ್ಷಕಾ ! ಜಯ ಶಿಷ್ಯರಕ್ಷಕಾ ! ಜಯ ಪರ ತೀರಮಣ ! ಜಯ ಜಯ ನಮಸ್ತೇ ನಮಸ್ತೇ ನಮೋನಮಃ ” ಎಂದು ಕೊಂಡಾಡಿದನು. ಶಿವನು ಅಂತ್ಯಕಾಲದಲ್ಲಿ ಅಂಧಕನಿಗೆ ಹುಟ್ಟಿದ ಶಿವಭ ಕಿಯನ್ನು ಕಂಡು ಸಂತೋಷಿಸಿ, ಅವನ ದೀನದ್ಧನಿಗೆ ಮರುಗಿ, ಪ್ರಸನ್ನ ನಾಗಿ, “ ನಿನ್ನಿಷ್ಟ್ಯವೇನು ? ಬೇಡು ” ಎಂದನು. ಅದನ್ನು ಕೇಳಿ ದೈ ತೃನು ಹರ್ಷಗೊಂಡು, ಸ್ವಾಮಿಾ ! ನನ್ನ ಈ ದೇಹವನ್ನು ತಮ್ಮ ಪಾದ ಸ್ಪರ್ಶದಿಂದ ಪರಿಶುದ್ಧಿಗೊಳಿಸುವುದಕ್ಕಾಗಿ, ಇದರಮೇಲೆ ನಿಂತು ನಾಟ್ಯ ವಾಡಿ, ಕೊನೆಗೆ ನನಗೆ ಸ್ಥಿರವಾದ ಗಣಪದವಿಯನ್ನು ದಯಪಾಲಿಸಬೇ ಕು; ಎಂದು ಬೇಡಿದನು. ಭಕ್ಕೆ ಪದನೆಂದು ಬಿರುದಾಂಕಿತನಾದ ಶಿವನು ( ಹಾಗೆಯೇ ಆಗಲಿ ೨” ಎಂದು ವರವಿತ್ತು, ನಾಟ್ಲಕ್ಕೆ ಅನುಗುಣ ವಾದ ವೇಷವನ್ನು ಧರಿಸಿದನು. ಹುಲಿಯ ಚನ್ನವನ್ನು ಟ್ಟು ಆನೆಯ ಚರ ವನ್ನು ಹೊದೆದು, ಮರಿಹಾವುಗಳನ್ನು ಮುಡಿಗೆ ಕಟ್ಟಿ, ಅವುಗಳಾಭರಣ ವನ್ನೇ ಸಲ್ವಾಂಗದಲ್ಲೂ ಧರಿಸಿ, ವಿಭೂತಿಯನ್ನು ಉದ್ರೂ ೪ನಿ, ತ್ರಿಶೂಲ ದಮೇಲಿದ್ದ ರಕ್ಕಸನ ದೇಹವನ್ನು ನೆಲದಮೇಲಿಳುಹಿ," ಅವನ ದೇಹ ವೆಂಬ ರಂಗಸ್ಥಲವನ್ನು ಮೆಟ್ಟಲನುವಾದನು. ಆಗ ನಂದೀಶನು ಮದ್ದಳೆ ಯನ್ನೂ, ಬ್ರಹ್ಮನು ತಾಳವನ್ನೂ, ಹರಿಯು ಮುಖವೀಣೆಯನ್ನೂ, ಇಂ ದ್ರನು ಉಪ್ಪಂಗವನ್ನೂ, ನಾರದನು ವೀಣೆಯನ್ನೂ, ತುಂಬುರನು ಗೆಜ್ಜೆ ಗೋಲನ್ನೂ ಹಿಡಿದು ಶಿವನ ಸುತ್ತಲೂ ನಿಂತು ಬಾಜಿಸುತ್ತಿದ್ದರು. ಅವು ಗಳ ಲಯಕ್ಕೆ ಸರಿಯಾಗಿ ಶಿವನು ಕುಣಿಯಲಾರಂಭಿಸಿದನು, ಆ ರಣಾಂಗ ಣದಲ್ಲಿದ್ದ ಸುರಾಸುರರೆಲ್ಲರೂ ಶಿವನ ಮಹಾನವನ್ನು ಪರಮಾಶ್ಚಗ್ಯದಿಂದ ನೋಡುತ್ತಿದ್ದರು. ಶಿವನು ಮೊದಲು ಪುಪ್ಪಾಂಜಲಿಗರೆದು, ಧುತ್ತ ವಿಧುತ