ಪುಟ:ಚೆನ್ನ ಬಸವೇಶವಿಜಯಂ.djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

the ಚನ್ನ ಬಸವೇಶವಿಜಯಂ (Fಂಡಳ) [ಅಧ್ಯಾಯ ಮತ್ತೊಂದು ಬಲಗೈಯಿಂದ ಶೂಲವನ್ನು ಮೇಲಕ್ಕೆತ್ತಿದನು. ಆ ಮಹಾ ತೇಜೋಮರಿಯನ್ನು ಕಂಡಮಾತ್ರದಿಂದಲೇ ಯಮನು ಕಣ್ಣನ್ನು ಮು ಜೈ ಗಡಗಡನೆ ನಡುಗಿಹೋದನು, ಶಿವನು ಕೋಪದಿಂದ ಅಗ್ನಿನೇತ್ರವನ್ನು ಸ್ವಲ್ಪಮಾತ್ರವೇ ತೆರೆದು ಯಮನನ್ನು ನೋಡಿದ ಕೂಡಲೇ ಧಗ್ಗನೆ ಉರಿ ದು ಕ್ಷಣಕಾಲದಲ್ಲಿ ಕರಿಗೊರಡಾಗಿ ನಿಂತನು. ಆಗ ಶಂಕರನು ಸಕಲ ದೇ ವತೆಗಳನ್ನೂ ಕುರಿತು- “ ನನ್ನ ಭಕ್ತರೇ ನನಗೆ ಪ್ರಣವು, ಅಂಥವರ ಮೇಲೆ ಈ ಯಮನು ಕೈಮಾಡಿದುದರಿಂದ ಆ ದ್ರೋಹವೇ ಇವನನ್ನು ಕೊಂದಿತು, ಇದನ್ನು ನೋಡಿ ಎಲ್ಲರೂ ಎಚ್ಚತ್ತು ನಡೆಯಬೇಕು ಎಂ ದು ಅಪ್ಪಣೆಮಾಡಿ, ರಂಭೆಯನ್ನು ಕರೆದು, ನೀನೇ ಸಧ್ಯಕ್ಕೆಯೆಂದು ನುಡಿದು ಅನುಗ್ರಹಿಸಿದನು. ಆಗ ಬಳಿಯಲ್ಲಿದ್ದ ಬ್ರಹ್ಮನು ಶಿವನ ಮುಂಗ ಡೆಗೆ ಬಂದು ವಂದಿಸಿ, ದೇವಾಧಿದೇವನೆ ! ಯಮಧಮ್ಮನು ಭಕ್ಷದ್ರೋಹ ದಿಂದ ಅಳಿದುಹೋದಬಳಿಕ ಇನ್ನು ಜಗತ್ತಿನಲ್ಲಿ ಪಾಪಾಚಾರಿಗಳನ್ನು ಶಿಕ್ಷೆ ಸುವವರಿಲ್ಲದಂತಾಯಿತು; ಪಾಸಕ್ಕೆ ಜನರು ಹೆದರದಂತೆಯೇ ಆಗುವುದು; ಅದು ಕಾರಣ ಯಮನು ಮಾಡಿದ ತಪ್ಪನ್ನು ಈಬಾರಿಗೆ ಕ್ಷಮಿಸಿ, ದುಷ್ಯ ಶಿಕ್ಷಣೆಗಾಗಿ ಆತನನ್ನು ಪುನಃ ಉದ್ದರಿಸಿ, ಮತ್ತೆ ಇಂತಹ ಭಕ್ಕದ್ರೋಹ ವನ್ನು ಎಂದಿಗೂ ಮಾಡದಂತೆ ಎಷ್ಣರಿಸಿ ಬುದ್ದಿ ಗಲಿಸಿ ಕಾಪಾಡಬೇಕೆಂ ದು ಬೇಡಿದನು. ಶಂಕರನು ದಯಗೊಂಡು ಯಮನಿಗೆ ಪ್ರಾಣದಾನವನ್ನು ಮಾಡಿದನು ಮಲಗಿದ್ದವರೇಳ್ತಂತೆ ಅಂತಕನು ಎದ್ದು , ಶಿವನ ಪಾದಕ್ಕೆ ನಮಸ್ಕರಿಸಿ,– ಪ್ರಭುವೆ ! ಮೂರ್ಖನಾದ ನನ್ನ ಸರಾಪರಾಧವನ್ನೂ ಕ್ಷಮಿಸಬೇಕೆಂದು ಬೇಡಿದನು. ಪರಶಿವನಾದರೂ- ಮುಂದೆ ಇನ್ನೆಂದೂ ನನ್ನ ಲಾಂಛನವನ್ನು ಧರಿಸಿದ ಭಕ್ತರಮೇಲೆ ನೀನು ಕೈವಾಡಕೂಡದು, ಎಂದು ಬುದ್ದಿ ಹೇಳಿ, ಅವನ ಪಟ್ಟಣಕ್ಕೆ ಹೋಗುವುದಕ್ಕೆ ಅಪ್ಪಣೆಯಿ ತು, ಶೈತನನ್ನು ಜತೆಯಲ್ಲಿ ಕರೆದುಕೊಂಡು ಸಕಲಪರಿವಾರದೊಡನೆ ಕೈ ಲಾಸಕ್ಕೆ ದಯಮಾಡಿದನೆಂದು ಚೆನ್ನಬಸವೇಶನು ನುಡಿದನೆಂಬಿಲ್ಲಿಗೆ ೧೧ ನೆ ಅಧ್ಯಾಯವು ಸಂಪೂರ್ಣವು. ---