ಪುಟ:ಚೆನ್ನ ಬಸವೇಶವಿಜಯಂ.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ov &da ಸುಖಾವಹಮಲೀಲೆ ೧೨ ನೆ ಅಧ್ಯಾಯವು. ಸು ಖಾ ವ ಹ ಮ ರಿ ಲಿ ಲಿ , - ಎಲೈ ಸಿದ್ದರಾಮೇಶನೆ, ಪೂರದಲ್ಲಿ ಒಂದುವೇಳೆ ಕಾಲಯೋಗದಿಂ ದ ೧೨ ವರ್ಷಗಳ ಅನಾವೃಷ್ಟಿಯು ಸಂಭವಿಸಿತು, ಅದನ್ನು ಮುಂದಾಗಿ ಯೇ ಶಾಸ್ತ್ರಶೋಧನಮುಖದಿಂದ ತಿಳಿದಿದ್ದ ಗಣತಮಮಹರ್ಷಿಯು ನಿ ವಾರಣೋಪಾಯಕ್ಕಾಗಿ ದಂಡಕಾರಣ್ಯದಲ್ಲಿ ಶಿವನನ್ನು ಕುರಿತು ಘೋರತ ಪಸ್ಸನ್ನಾಚರಿಸಿದನು, ಅದನ್ನು ಶಂಕರನು ತಿಳಿದು, ಗೌತಮನ ಮನೋಭ ಮೈದಾರ್ಥವನ್ನು ಜಗತ್ತಿಗೆ ತೋರ್ಪಡಿಸಬೇಕೆಂದು ಯೋಚಿಸಿ, ವಿಷ್ಣು ವನ್ನು ಕರೆದು- “ ನೀನು ಹೋಗಿ ಗೌತಮನ ಮುಂದೆ ನಿಂತು, ನಿನ್ನನ್ನೇ (ವಿಷ್ಯವನ್ನೇ) ಜಗತ್ರ್ತವೆಂದು ವಾದಿಸಿ, ಸಾಧಿಸಿಕೊಂಡು ಬಾ ?” ಎಂ ದನು. ಹಾಗೆಮಾಡುವುದು ನನ್ನಿಂದ ಅಸಾಧ್ಯವೆಂದು ಹರಿಯು ನುಡಿಯ ಲು, ಅದಕ್ಕೆ ಶಿವನು ನಕ್ಕು, ಹರಿಬ್ರಹ್ಮರೊಡನೆ ತಾನೂ ವೈವವೇಷ ವನ್ನು ಧರಿಸಿಕೊಂಡು, ದಂಡಕಾರಣ್ಯದ ತ್ರಿಯಂಬಕ ಪರತಕ್ಕೆ ಬಂದ ನು, ಕಪಟರೂಮಿನ ಹರನು ಗಾತಮನ ಇದಿರಿಗೆ ನಿಂತು, ಮುನಿನಾಥನೆ, ನೀನು ಯಾರನ್ನು ಕುರಿರು ತಪಸ್ಸನ್ನಾಚರಿಸುವೆ ? ಎಂದು ಕೇಳಲು, ನಾ ನು, ಪರಶಿವನನ್ನು ಕುರಿತು ತಪಸ್ಸನ್ನು ಮಾಡುವೆನೆಂದನು. ಅದಕ್ಕೆ ಕಪ ವೈಷ್ಯವನು ನಕ್ಕು, ಓಹೋ ! ಋಷಿಯೆ, ನಿನಗೆ ಶಿವನು ವರವನ್ನು ಕೊಡುವನೆ ? ಚೆನ್ನಾಯಿತು ! ನಿನಗೇಕೆ ಇಂತಹ ಅಜ್ಞಾನ ? ದಿಗಂಬರ ನೂ ಬೂದಿಬಡ ಕನೂ ಮಸಣಗಾಹಿಯ ತಿರಿಕನೂ ವಳಮಾಲೆಯವ ನೂ ಆದ ಅವನು ತನಗೇ ಇಲ್ಲದುದನ್ನು ಇತರರಿಗೆ ಹೇಗೆ ಕೊಟ್ಟಾನು ? ಏ ಈುವಾದರೆ ಜಗದ ಕ್ಷಣಕರ, ಲಕ್ಷ್ಮೀಪತಿ, ವೀತಾಂಬರಧಾರಿ, ಜ್ಞಾನ ರೂಪ, ಅಚ್ಯುತ, ಪರಮಪುರುಷ, ಸಾತ್ವಿಕ, ಕೌಸ್ತುಭಧಾರಿ, ಬ್ರಹ್ಮಾ ದಿಸುರಾಧಿಪ; ಮತ್ತೂ ಲೋಕವೆಲ್ಲವೂ ವಿಷ್ಣುಮಯವಾದುದು ; ಹರನು ರಾಮಮಂತ್ರವನ್ನು ಮಾತಿಗುಪದೇಶಿಸಲು, ಆಕೆಯು ಕಾಶಿಯಲ್ಲಿ ಸಾ ಯುವವರ ಕಿವಿಯಲ್ಲೆಲ್ಲ ಅದನ್ನು ಪ್ರವೇಶಿಸಿ ಎಲ್ಲರನ್ನೂ ಮುಕ್ತರಾಗುವಂತೆ 49