ಪುಟ:ಚೆನ್ನ ಬಸವೇಶವಿಜಯಂ.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

«nಳ ಅಧ್ಯಾಯ ಚೆನ್ನಬಸವೇಕವಿಜಯಂ (ಕಾಂಡ ೪) ಮಾಡುತ್ತಿರುವಳು. ವೇದವ್ಯಾಸನು ಕಾಶಿಯಲ್ಲಿ ಕೈಯೆತ್ತಿ ಕೇಶವನಿಗಿಂ ತಲೂ ದೊಡ್ಡ ದೈವವಿಲ್ಲವೆಂದು ಸಾರಿ ನುಡಿದಿರುವನು. ಹರಿಯು ತನ್ನ ನಾ ಭಿಕಮಲದಿಂದ ಬ್ರಹ್ಮನನ್ನು ಹಡೆದನು. ಶೂರರಾಕ್ಷಸರನ್ನೆಲ್ಲ ಕೊಂದಿ ರುವನು, ದುಷ್ಟನಿಗ್ರಹಶಿಷ್ಟ ಪರಿಪಾಲನಸಮರ್ಥನು, ಇಂಥ ವಿಷ್ಣುವನ್ನು ಭಜಿಸಿದರೆ ನಿನ್ನ ಇಷ್ಟಾರ್ಥಸಿದ್ದಿಯಾಗುವುದು, ಹರನನ್ನು ಭಜಿಸುವು ದು ಹುಚ್ಚುತನವೇ ಸರಿ, ಬಿಡು ; ಎಂದು ಜರೆದನು. ಆ ಶಿವದೂಷಣೆಯ ನ್ನು ಮುನಿಯು ಕೇಳಿ, ಮನದಲ್ಲಿ ನೊಂದು, ಕೋಪವೇರಿ, (ಎಲೊ ಮೂ ಢಬುದ್ದಿಯ ವೈಷ್ಯವನೆ ! ಶಿವನ ಮಾಹಾತ್ಮವನ್ನು ತಿಳಿಯದ ನೀನು ಅಜ್ಞನೂ ? ನಾನು ಅಜ್ಞನೋ ? ಕೇಳು-ಹರನು ಸಕಲದೇವಾಧಿದೇವ ನು, ಅತ್ಯತಿಷ್ಠದ್ದಶಾಂಗುಲನು, “ ಏಕಮೇವಾದ್ವಿತೀಯಂಬ್ರಹ್ಮ, ಏಕ ಏವರುದ್ರೇನತಿಯಾಯತಸ್ಥೆ ” ಎಂಬ ಶ್ರುತಿವಚನಗಳಿಂದ ಅವನೊ ಬೃನೇ ಬ್ರಹ್ಮನೆಂದು ಪ್ರತಿಪಾದಿತನಾಗಿರುವನು, ಅವನಿಗೆ ಹರಿಯು ಸನು ನ ಅಲ್ಲದಿರುವಾಗ್ಗೆ, ಅಧಿಕನೆಂಬ ಮಾತು ಮೊಲದ ಕೊಡಿನಂತೆಯೆ ಸ ರಿ, ಅದು ಹಾಗಿರಲಿ, ನಿನ್ನ ಮಾತಿನಂತೆ ಹರಿಯ, ಜ್ಞಾನರೂಪನಾದರೆ, ಬೃಗುಮುನಿಯ ಪತ್ನಿಯನ್ನು ಅಸ್ಥಾನದಿಂದ ಅದೇತಕ್ಕೆ ಕೊಂದನು ? ಅವ ನು ಅಚ್ಚುತನಾದರೆ ಹತ್ಯಾವೃತ್ತಿ ಹುಟ್ಟಿ ಸತ್ತುದೇಕೆ ? ಪುರುಷೋತ್ರ ಮನಾಗಿದ್ದರೆ ಕಳ್ಳತನದಿಂದ ಅನೃಸ್ತಿ ಯನ್ನು ಬಯಸಿದುದೇಕೆ ? ಜ ಗ; ವಿಸ್ಯಮಯವಾಗಿದ್ದರೆ ಅವನ ಹೆಂಡತಿಯನ್ನು ರಾಕ್ಷಸನು ಕದ್ದು ಹೋದಾಗ ಅವನೇನು ಮಾಡುತ್ತಿದ್ದನು? ಅವನು ರಕ್ಷಾಕರನಾಗಿದ್ದರೆ, ಅ ವನ ಮಗನನ್ನೇ ಶಿವನು ಸುಟ್ಟಾಗ ಅದೇಕೆ ಉಳುಹಿಕೊಳ್ಳಲಿಲ್ಲ ? ಲಕ್ಷ್ಮಿ ಯು ಅವನಿಗೆ ಹೆಂಡತಿಯಾಗಿದ್ದರೆ, ಅವಳು ಜಗತ್ತಿನ ದೊರೆಗಳನ್ನೆಲ್ಲ. ಸೇರಿರುವುದಕ್ಕೆ ಕಾರಣವೇನು ? ಅವನೇ ಜಗತ್ತಿಗೆ ಕನಾಗಿದ್ದರೆ ಆತ ನೇ * ವಮುಕರಾಮಹೇಶ್ವರಃ ?” ಎಂದು ಅದು ಹೇಗೆ ನುಡಿದನು ? ರಾ ಮಮಂತ್ರವು ಶಿವನ ನಾಮವು, ಆ ಹೆಸರನ್ನೇ ಪ್ರೇಮಕ್ಕಾಗಿ ಜಮದಗ್ನಿ ಯ ದಶರಥನೂ ತಮ್ಮ ತಮ್ಮ ಮಕ್ಕಳಿಗೆ ಪರುಶುರಾಮ, ರಾಮ, ಎಂ ದು ಕರೆದುಕೊಂಡು, ಆ ರಾಮಮಂತ್ರವನ್ನು ಕಾಶಿಯಲ್ಲಿ ಸರತಿಯು ಮೃತರಾಗುವವರ ಕಿವಿಯಲ್ಲಿ ಉಪದೇಶಿಸುವುದರಿಂದ ಅವರೆಲ್ಲರೂ ಶಿವ