ಪುಟ:ಚೆನ್ನ ಬಸವೇಶವಿಜಯಂ.djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿನ್ನ ಖಸಬೇಕಏಜಯಂ (೪ಾಂಡ ೫) [ಅಧ್ಯಾಯ ರಾಜ್ಯವನ್ನಾಳುತ್ತಿದ್ದು , ಕಡೆಗೆ ಕೌರವನೊಡನೆ ಜೂಜಾಡಿ, ರಾಜ್ಯವ ಸೃಲ್ಲ ಸೋತು, ಮತ್ತೆ ೧೨ ವರ್ಷಗಳವರೆಗೆ ಅರಣ್ಯವಾಸವನ್ನೂ ೧ವರ್ಷ ಅಜ್ಞಾತವಾಸವನ್ನೂ ಮಾಡಿ, ಅವರಲ್ಲಿ ಆನೆಯವನಾದ ಅರ್ಜುನನೇ ಶತ್ರು ವಿಜಯಕ್ಕಾಗಿ ಶಿವನನ್ನು ಕುರಿತು ತಪಸ್ಸು ಮಾಡಿ ಪಾಶುಪತಾಸ್ತ್ರವ ನ್ನು ಪಡೆದನು. ಬಳಿಕ ಪಾಂಡವರು ಕೌರವರಮೇಲೆ ಯುದ್ಧ ಮಾಡಿದರು. ದುಷ್ಯನಿಗ್ರಹವನ್ನು ಮಾಡಿ ಭೂಭಾರವನ್ನು ತಪ್ಪಿಸುವುದಕ್ಕಾಗಿ ದಾರಕಿ ಯಲ್ಲಿ ಮನುಜಾಕಾರದಿಂದ ಅವತರಿಸಿದ ವಿಷ್ಣುವೇತಾನಾದ ಕೃಷ್ಣನು ಅ ರ್ಜುನನಿಗೆಸಾರಥಿಯಾಗಿ ನಿಂತನು. ಆಮಹಾಯುದ್ಧದಲ್ಲಿ ಪಾಂಡವರುತನ್ನು ಅಣ್ಣ ಗುರು ತಾತ ಮೊದಲಾದ ಹಿರಿಯರನ್ನೆಲ್ಲ ಕೊಂದು ಗೆದ್ದರು, (ಲೋ ಕದಲ್ಲಿ ಹೊನ್ನು ಹೆಣ್ಣು ಮಣ್ಣಿನ ಆಸೆಯು ಯಾವ ಕೃತ್ಯವನ್ನು ತಾನೇ ಮಾಡಿಸುವುದಿಲ್ಲ ?) ಹೀಗೆ ಭೂಮಿಯಾಸೆಗಾಗಿ ಪಾಂಡವರು ಕಮ್ಮಪಟ್ಟ ರು, ಇನ್ನು ಹೆಣ್ಣಿನಾಸೆಗಾಗಿ ಕಷ್ಟಪಟ್ಟವರ ಕಥೆಯನ್ನು ಕೇಳು ಬ್ರ ಹೃನ ಪುತ್ರನಾದ ಮರೀಚಿಬಕ್ಕನಿಂದ ಕಶ್ಯಪನು ಹುಟ್ಟಿದನಷ್ಮೆ, ಅವನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೊಳಗೆ ವಿನಸ್ಸತನೆಂಬುವನೊಬ್ಬನಿದ್ದನು. ಅವನಿಗೆ ಹುಟ್ಟಿದ ೪ ಮಂದಿ ಮಕ್ಕಳಲ್ಲಿ ವೈವಸ್ವತಮನುವು ಹಿರಿಯನು. ಅವನಿಗೆ ಇಕ್ಷಾಕು ಮೊದಲಾದ ೯ ಮಂದಿ ಮಕ್ಕಳು, ಹಿರಿಯ ಇಕ್ಷ ಕುವಿಗೆ ನಿಮಿ ವಿಕುಕ್ಷಿಗಳೆಂಬ ಮಕ್ಕಳಾದರು, ವಿಕುಕಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಲ್ಲಿ ಕಕುನು ಹಿರಿಯನು. ಅವನಿಗೆ ಸುಯೋಧನನೆಂ ಬ ಮಗನು. ಅವನಿಗೆ ಪೃಥುವೆಂಬ ಸುತನು, ಅವನಿಗೆ ವಿಶ್ರಕನು, ಅವ ನಿಂದ ಆರ್ದಕನು, ಅವನಿಂದ ಯುವನಾಶನು, ಅವನಿಂ ಶ್ವಾವಸ್ತಿಯು, ಅವನಿಂದ ಬೃಹದನು, ಅವನಿಂ ಕುವಲಾಶನು, ಅವನಿಂ ದಂಧುಮಾ ರನು, ಅವನಿಂ ದೃಢಾಶ್ರನು, ಅವನಿಗೆ ಪ್ರಮೋದನು, ಅವನಿಂದ ಹಗ್ಗ ಶನು, ಅವನಿಗೆ ನಿಕುಂಭನು, ಅವನಿಂ ಸಂಹತಾಶನು, ಅವನಿಂದ ಕೃಶಾಶ ರಣಾಶರು, ರಣಾಶನಿಗೆ ಯುವನಾಶನು, ಅವನಿಂದ ಮಾಂ ಧಾತನು, ಅವನಿಂದ ಅಂಬರೀಷ, ಪುರುಕುತ್ಪ, ಮುಚುಕುಂದ, ಎಂ ಬ ಮೂವರು ಮಕ್ಕಳಾಗಿ ಹುಟ್ಟಿದರು. ಪುರುಕುತ್ಸನ ಸಂತತಿಯಲ್ಲಿ ಸೆ. ತ್ಯವ್ರತನು ಹುಟ್ಟಿದನು. ಅವನಿಗೆ ತ್ರಿಶಂಕುವು ಜನಿಸಿದನು, ಅವನಿಂದ