ಪುಟ:ಚೆನ್ನ ಬಸವೇಶವಿಜಯಂ.djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ಟ ಚನ್ನಬಸಬೇಕುಜಯಂ (vಡ ೫) [ಅಧ್ಯಾಯ ರಿನಂತೆಯೂ ಗೋಪುರದಂತೆಯೂ ತನ್ನನೂಲಿನಿಂದ ನೇದು ಅಲಂಕರಿಸುತ್ತಿ ದ್ವಿತು. ಆನೆಯು ನುಗ್ಗಿ ಅದೆಲ್ಲವನ್ನೂ ಕಿತ್ತು ಹಾಕುತ್ತಿದ್ದಿತು. ಇದರಿಂದ ಜೇಡನು ಕೋಪಿಸಿ, ಆನೆಯಸುಂಡಿಲಿನಲ್ಲಿ ನುಗ್ಗಿ, ಮಿದುಳನ್ನು ಕೆರೆದುಹಾ ಕಲು, ಆನೆಯೂ ಸತ್ತಿತು ; ಜೇಡನೂ ಸತ್ತಿತು. ಆಗ ಶಿವನು ಅವೆರಡರ ಭಕ್ತಿಗೂ ಮೆಜ್ಞೆ ಪ್ರತ್ಯಕ್ಷನಾಗಿ, ನಿಮ್ಮಿಷ್ಟವೇನೆಂದು ಕೇಳಲು, ಸಾಂ ಮಿಾ ! ನಮ್ಮ ಹೆಸರಿನ ಜ್ಞಾಪಕಾರ್ಥವಾಗಿ ನೀನು “ ತಿರುಕಾಳಹಸ್ತೀಶ ರ , ನೆಂಬ ಹೆಸರಿನಿಂದ ವಿಖ್ಯಾತನಾಗಿ, ನಮಗೆ ಮೋಕ್ಷವನ್ನು ಕೊಡಬೇ ಕೆಂದು ಬೇಡಿದುವು. ಆಗ ಶಂಕರನು-ಎಲೈ ಕರಿಯೆ ! ನೀನು ಕರಿಕಾಲ ಚೋಳನಾಗಿ ಹುಟ್ಟು; ಎಲೈ ಕಾಳನೆ ! ನೀನು ಕಳಚಂಗನಾಗಿ ಹುಟ್ಟು, ಆಜನ್ಮದಲ್ಲಿ ನಿಮ್ಮಿಬ್ಬರಿಗೂ ಮೋಕ್ಷವನ್ನು ಕೊಡುತ್ತೇನೆ, ಎಂದು ಅವೆರ ಡಕ್ಕೂ ಅಪ್ಪಣೆಮಾಡಿದನು, ಅದರಂತೆಯೇ ಅವೆರಡೂ ಹುಟ್ಟಿದುವು. ಶಿ ವಾರ್ಚನೆಗಾಗಿ ಎತ್ತಿಟ್ಟಿದ್ದ ಹೂವನ್ನು ಮೂಸಲಾಗಿ, ನಾಗಕನೈಯರ ಶಾ ಪದಿಂದ ಸುರಿದ ಮಣ್ಣಿನ ಮಳೆಯಿಂದ ಸತ್ತ ಕೋಳರಾಜನ ಪತ್ನಿಯ ಹೊಟ್ಟೆಯಲ್ಲಿ ಕರಿಕಾಲಚೋಳನು ಹುಟ್ಟಿದನು. ಯಾವನದಶೆಯಲ್ಲಿ ಅ ತ್ಯಂತಪ್ರಬಲನಾಗಿ ಸಕಲರಾಜರನ್ನೂ ಬರಮಾಡಿಕೊಂಡು, ಉಕ್ಕಿಬ ರುತ್ತಿದ್ದ ಕಾವೇರಿನದಿಗೆ ಕಟ್ಟೆಯನ್ನು ಕಟ್ಟಿಸುವ ಕಾಠ್ಯವನ್ನು ಜರು ಗಿಸುತ್ತಿದ್ದನು. ಆಗ ಮುಕ್ಕಣ್ಣ ಜೋಳನೆಂಬ ಅರಸು ಮಾತ್ರ ಅಲ್ಲಿಗೆ ಬರದಿ ರಲು, ಅವನಭಾವಚಿತ್ರವನ್ನು ಬರೆಯಿಸಿ, ಅದರೊಳಗಣ ಕಣ್ಣನ್ನು ತಿವಿಯ ಲಾಗಿ, ಆ ರಾಜನ ಕಣ್ಣುಗುಡ್ಡೆಯು ಇದ್ದ ಕಡೆಯಲ್ಲೆ ಒಡೆದುಹೋಯಿ ತು, ಇದರಿಂದ ಆತನು ಭೀತನಾಗಿ, ಕರಿಕಾಲಚೋಳನ ಬಳಿಗೆ ಬಂದು, ತನ್ನ ಪರಾಧಕ್ಕೆ ಕ್ಷಮೆಯನ್ನು ಕೇಳಿಕೊಳ್ಳಲು, ಮುನ್ನಿನಂತೆ ಅವನಿಗೆ ಕಣ್ಣನ್ನು ಕೊಟ್ಟು ಕಟ್ಟೆಯಕೆಲಸವನ್ನು ಮಾಡಿಸುತ್ತಿದ್ದನು. ಅತ್ತ ಪ್ರಭಾ ಕರಮೀಳನೆಂಬ ರಾಜನು ಪ್ರತಿದಿನ ಈ ಭಂಗಾರದ ಸಾವಿನ ಬಟ್ಟಲುಗಳ ಹೈ ಷಡ್ರಸಾನ್ನಗಳನ್ನು ತುಂಬಿ ಸೂನ ಬಳಿಗೆ ಕಳುಹಿಕೊಡುತ್ತಿದ್ದನು. ಆತನು ಅದನ್ನೆಲ್ಲ ಉಂಡು ಬಟ್ಟಲುಗಳನ್ನು ಹಿಂದಕ್ಕೆ ಕಳುಹಿಕೊಡುತ್ತಿದ್ದ ನು.ಅಂತಹ ಪ್ರಭಾಕರಜೋಳನನ್ನು ಕಟ್ಟೆಯಕೆಲಸದ ಬಳಿಗೆ ಬರಮಾಡು ವುದಕ್ಕಾಗಿ ಕರಿಕಾಲಚೋಳನು ಹೇಳಿ ಕಳುಹಿಸಲಾಗಿ, ಅವನು ತಿರಸ್ಕರಿ