ಪುಟ:ಚೆನ್ನ ಬಸವೇಶವಿಜಯಂ.djvu/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೨ ಚನ್ನ ಬಸವೇಶವಿಜಯಂ(ಕಾಂಡ ೫) [ಅಧ್ಯಾಯ ಮೈನಾದ ಪಾರ್ಶನಾಥಪಂಡಿತನೆಂಬುವನಿಗೆ ಉದರಶೂಲರೋಗವು ಪ್ರಾ ಪ್ರವಾಗಿದ್ದಾಗ್ಗೆ, ಶಿವಭಕ್ತಿಮಾರ್ಗವನ್ನು ಹೇಳಿ, ವಿಭೂತಿರುದ್ರಾಕ್ಷಧಾರ ಣಗಳಿಂದ ಆ ರೋಗವನ್ನು ಹೋಗಲಾಡಿಸಿ, ತನ್ನ ಗುರುವಾದ ವಾಗೀಶ ನೈನಾರಿಗೆ ತಮ್ಮನನ್ನು ಶಿಷ್ಯನನ್ನಾಗಿ ಮಾಡಿ, ಶಿವದೀಕ್ಷೆಗೊಳಿಸಿದಳು. ಆ ತನು ತಿರುವಾಕರೀಶ್ವರನೆಂಬ ಹೆಸರಿನಿಂದ ಶಿವಭಕ್ಷ್ಯನಾಗಿದ್ದು ಕಡೆಗೆ ಅಕ್ಕ ನೊಡನೆ ಕೈಲಾಸವನ್ನು ಹೊಂದಿದನು. ಸೌಂದರನಂಬ್ಬಣ್ಣನು ಭಕ್ತರಲ್ಲಿ ಅಹಂಕಾರವನ್ನು ತೋರಿಸಿದಕಾ ರಣ, ಮೆರೆಮಿಂಡದೇವನು ಆತನಿಗೆ ಬಹಿಷ್ಕಾರವನ್ನು ಕೊಟ್ಟನು. ಶಿವನ ಉಪದೇಶದಿಂದ ನಂಬೈಣ್ಣನು ಶಿವಶರಣರನ್ನು ಸ್ತೋತ್ರಮಾಡಲು, ಅವರಿ ಬ್ಬರನ್ನೂ ಶಿವನು ತನ್ನ ಲೋಕಕ್ಕೆ ಕರೆದೊಯ್ದನು. ನಂಬೈನು ಸೂಳೆಯ ಮನೆಗೆ ಶಿವನನ್ನು ದೂತನನ್ನಾಗಿ ಮಾಡಿ ಕಳುಹಿಕೊಟ್ಟಿದ್ದ ಕಾರಣ, ಅವ ನು ಪರಮಪಾತಕಿಯೆಂದು ಅವನ ದರ್ಶನವನ್ನು ಮಾಡದೆಯಿದ್ದ ಕಲಿ ಕಾಮರು, ಶಿವನು ಬೋಧನೆಯನ್ನು ಮಾಡಿದರೂ ತನ್ನ ಶೂಲರೊಗಚಿ ಕಿತ್ಸೆಗಾಗಿ ಸುಂದರನನ್ನು ಬರಮಾಡಿಕೊಳ್ಳದೆ ಪ್ರಾಣವನ್ನೇ ಕಳೆದುಕೊಂ ಡು ಕೈಲಾಸವನ್ನು ಪಡೆದರು. ತಿರುನೀಲಕಂಠರು ತಮ್ಮ ಪತ್ನಿಯೊಡನೆ v೦ ವರ್ಷಗಳ ವರೆಗೆ ಮಾ ತನಾಡದಿರಲು, ಶಿವನು ಜಂಗಮವೇಷದಿಂದ ಬಂದು, ಒಂದು ಕ್ಷಾಪಾತ್ರೆ ಯನ್ನು ಕೊಟ್ಟು ಹೋಗಿ, ಅದನ್ನಿಲ್ಲದಂತೆ ಮಾಡಿ, ಮತ್ತೆ ಬಂದು ಕೆ೪, ಕಡೆಗೆ ಗಂಡಹೆಂಡಿರನ್ನು ಒಂದುಗೂಡಿಸಿ, ಅಂತ್ಯದಲ್ಲಿ ಶಿವಲೋಕವನ್ನಿತ್ಯ ನು, ಒಂದು ಕೌಪೀನವನ್ನು ಜಂಗಮವೇಷದ ಶಿವನು ತನ್ನಲ್ಲಿ ಇಟ್ಟು ಹೋ ಗಿದ್ದು , ಅದು ಮಾಯವಾಗಲು, ಅವರನೀತಿಗಳು ಕೌಪೀನದ ತೂಕಕ್ಕೆ ತನ್ನನ್ನೂ ತನ್ನ ಸತೀಸುತಾದಿಗಳನ್ನೂ ತೂಗಿ ಕೊಟ್ಟು ಶಿವನ ಮೆಚ್ಚಿಗೆಯ ನ್ನು ಪಡೆದರು.' ಕರವೂರಿನ ಇರಿವತ್ರನೆಂಬ ಶರಣನು ಭಕ್ತನನ್ನು ವಧಿಸಿ ದ ಆನೆಯನ್ನು ಕೊಂದು, ಮರಳಿ ಪ್ರಾಣವನ್ನು ಕೊಟ್ಟು ಶಿವಲೋಕವನ್ನೆ ದಿದನು, ಅಹಃಪಗೆಯನಾರು ಕೇಳಿದ ಜಂಗಮನಿಗೆ ತನ್ನ ಹೆಂಡತಿಯನ್ನು ಕೊಟ್ಟು, ಶಿವಾನುಗ್ರಹವನ್ನು ಪಡೆದರು, ತಿರುಕುರುಪೆತೊಂಡರೆಂಬಶರ ಇರು ಜಂಗಮವೇಷದ ಶಿವನಬಟ್ಟೆಯನ್ನು ಸಂಧ್ಯಾಕಾಲದೊಳಗೇ ಒಗೆದು