ಪುಟ:ಚೆನ್ನ ಬಸವೇಶವಿಜಯಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸವೇಶವಿಜಯಕಿ. [ಅಧ್ಯಾಯ ವ್ಯ ನಾಟಕ ಶಾಸ್ತ್ರವೇದಾಗಮಪುರಾಣಾದಿಗಳಲ್ಲೆಲ್ಲ ಪರಿಣತಪಾಂಡಿತ್ಯ ವನ್ನು ಸಂಪಾದಿಸಿದನು, ಅದರಿಂದ ಸಕಲ ವಿದ್ಯೆಗಳೂ ಈ ಮಹಾಮಹಿ ಮನ ಪಾದಸೇವೆಯನ್ನು ಮಾಡುವುದಕ್ಕಾಗಿ ಬಂದು ಸೇರಿಕೊಂಡಿರು ವಂತೆ ರಂಜಿಸುತ್ತಿದ್ದನು. ಯಾವನಕಾಲದಲ್ಲಿ ಆ ಚೆನ್ನಬಸವೇಶನ ಅಲಗವು ಅತ್ಯಂತ ಸೌಂದ ಪರಿಪೂರ್ಣವಾಯಿತು. ಆತನ ಕಣ್ಣುಗಳು ಕಮಲದ ದಳಗಳನ್ನೂ, ಹುಬ್ಬುಗಳು ಮನ್ಮಥನ ಬಿಲ್ಲಿನಾಕೃತಿಯನ್ನೂ, ಮುಖವು ಕನ್ನಡಿಯಂದವನ್ನೂ, ತೋಳುಗಳು ಆನೆಯ ಸುಂಡಿಲ ರೀತಿಯನ್ನೂ, ತೊ ಡೆಗಳು ಬಾಳೆಗಂಬದ ಚೆಂದವನ್ನೂ ಹಿಂದುಮಾಡಿದುವು. ಆತನ ಸೇವೆ ಗಾಗಿ ಹತಪದವರು, ಬೀಸಣಿಗೆಯವರು, ಹಾವುಗೆ ಹಿಡಿಯುವವರು, ಕಾ ಆಂಜಿಯವರು ಮೊದಲಾದ ಸೇವಕರನ್ನೆಲ್ಲ ಬಸನೇ ಶನು ನಿಯಮಿಸಿಕೆ ಟ್ಟನು. ಮತ್ತೂ ಬಸವೇಂದ್ರನು ಆತನ ವಿದ್ಯಾಘಢಿಮೆಯನ್ನೂ, ತತ್ತ್ವ ಜ್ಞಾನಾತಿಶಯವನ್ನೂ, ಅನುಪಮವಾದ ಶೈವತೇಜಸ್ಸನ್ನೂ, ಘನತರವಾದ ಶೀಲವನ್ನೂ ನೋಡಿ, ಒಗಿ, ಈತನೇ ತನಗೆ ಗುರುವೆಂದು ಮನಸ್ಸಿನಲ್ಲಿ ಪರಿಭಾವಿಸಿ, ಆ ಮಹಿಮನ ವಾಸಕ್ಕೆ ಯೋಗ್ಯವಾದ ಭವ್ಯವಾದ ಮಂದಿರ ವೊಂದನ್ನು ತನ್ನ ಮನೆಯ ಮಗ್ಗು ಎಲ್ಲೆ: ಕಟ್ಟಿಸಬೇಕೆಂದು ಶಿಲ್ಪಿಗಳಿಗೆ ಅಪ್ಪಣೆ ಮಾಡಿದರು. ಅವರು ದೇವೆಂದ್ರಭವನದಂತೆ ಮುತ್ತು ಹವಳ ವಸ್ತು ಗೋಮೇಧಿಕ ಮೊದಲಾದುವುಗಳನ್ನು ಕೆತ್ತಿ ಚಿನ್ನ ಬೆಳ್ಳಿಗಳ ಕೆಲ ಸವನ್ನು ಮಾಡಿ ತೋಭಾ ಮಯವಾದ ಭವನವನ್ನು ವಿರಚಿಸಿದರು, ಅದರಲ್ಲಿ ಶಿಲ್ಪಶಾಸಕ ಕೈವಾನುಸಾರವಾಗಿ ಸ್ವಾನ, ಪಾಕ, ಭೋಜನ, ಮಂತ್ರ, ನದನ, ವಸ್ತ್ರ, ಹಯ, ಗಜ, ಸಭಾ, ಗೀತ, ಶಯನ ಮೊದ ಲಾದ ಸಕಲ ವಿಧವ ಶಾಲೆಗಳ ಮೇಲುಪ್ಪರಿಗೆಗಳ ಇರುವಂತೆ ಮಾಡಿ ದ್ದರು. ಧಾನ್ಯ ತೈಲ ಶರಾಬಿ ಸಕಲ ವಸ್ತುಗಳನ್ನೂ ತುಂಬತಕ್ಕ ಉ ಗ್ರಾಣಗಳಿದ್ದುವು. ಅಲ್ಲಲ್ಲಿ ಕಾವಲುಗಾರರು ಕುಳಿತುಕೊಳ್ಳುವ ಚಾವಡಿ ಗಳ, ಲತಾಗೃಹ ಸರೆವರ ತರು ಗುಲ್ಕ ಲತಾದಿಗಳಿಂದ ಅಂದವಾದ ಉಸನನ, ಚಂದ್ರಕಾಂತಸ್ಸಟಕಾದಿಗಳ ಜಗತಿಗಳೂ ಮೆರೆಯುತ್ತಿ ದುವು, ಸಾರಣೆ Fರ.ಸ.ಗದ ಮಂದಿರವು ಮಂಗಳಮಯವಾ: ಶೋಭಿ ಸದ್ದಿತು. ವೈಶಾಲ್ಯದಲ್ಲಿ ಎತ್ತರದಲ್ಲಿ ಒಟ್ಟಂದದಲ್ಲಿ ಅಭೂತಪೂ