ಪುಟ:ಚೆನ್ನ ಬಸವೇಶವಿಜಯಂ.djvu/೪೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಳ ಚನ್ನಬಸವೇಶವಿಜಯಂ (ಕಾಂಡ) [ಅಧ್ಯಾಯ ಜಗತ್ತಿಗೆ ತಿಳಿಯಪಡಿಸುವುದಕ್ಕಾಗಿ ಅನುಭವಸೂತ್ರ ಮೊದಲಾದ ಗ್ರಂಥ ಗಳನ್ನು ಬರೆದು ಪಢರಾಯನಿಂದ ಪೂಜ್ಞನಾಗಿದ್ದು ಶಿವಯೋಗಸವಾ ಧಿಯಿಂದ ಮುಕ್ತನಾಗುವನು. ಬಳಿಕ ಪ್ರೌಢದೇವೇಂದ್ರನು ಅವನು. ಅವನ ವಂಶೋದ್ಧವನಾದ ವಿರೂಪಾಕ್ಷರಾಯನೆಂಬುವನು ದೇಶವನ್ನಾಳು ತಿರುವಲ್ಲಿ ನರಸಣ್ಣರಾಯನೆಂಬುವನು ಅವನನ್ನು ಸೋಲಿಸಿ, ವಿದ್ಯಾನಗರಿ ಯನ್ನು ತಾನು ಹಿಡಿದುಕೊಳ್ಳುವನು. ಅವನ ಮಗನು ೫೧ ವರ್ಷಗಳವರೆಗೆ * ರಾಜ್ಯವನ್ನಾಳುವನು. ಅವನ ವಂಶಕ್ಕೆ ಅಚ್ಚುತರಾಜನೇ ಕಡೆಯವ ನು, ಚಿಢರಾಯನು ಅಳಿದ ಬಳಿಕ ರಾಜ್ಯದಲ್ಲಿ ಅನಾಚಾರವು ಹೆಜ್ಜೆ, ವೀರಶೈವಾಚಾರವು ಕುಗ್ಗಿ , ಪರಮತವಾದಿಗಳು ಪ್ರಬಲಿಸುವರು, ಆಗ ನಾರದನು ಕೈಲಾಸಕ್ಕೆ ಹೋಗಿ, ಶಿವನಿಗೆ ಭಕ್ತಿಯಿಂದ ನಮಸ್ಕರಿಸಿ, ಭೂ ಲೋಕದಲ್ಲಿ ಶಿವಾಚಾರವು ತಗ್ಗಿ, ಅನಾಚಾರವು ಹೆಚ್ಚಿಕೊಂಡಿರುವುದ ರಿಂದ ನೀನೇ ಭೂಮಿಯಲ್ಲವತರಿಸಿ ಪಟ್ಟಲಾಚಾರವನ್ನುದ್ಧರಿಸಬೇಕೆಂದು ಬಿಸುವನು. ಆಗ ಶಂಕರನು ನಿರಂಜನಗಣೇಶನನ್ನು ಕರೆದು, ನೀನು ಏಳೂರುಮಂದಿ ಗಣೇಶ್ವರರನ್ನು ಕರೆದುಕೊಂಡು ಭೂಲೋಕಕ್ಕೆ ಹೋ ಗಿ, ಜಂಗಮಸ್ಥಲವನ್ನಾಶಿನಿ, ಪಟ್ನಲಾಚಾರವನ್ನುದ್ಧರಿಸಿ ಬಾರೆಂದು ಅಪ್ಪಣೆ ಮಾಡುವನು. ಅದರಂತೆಯೇ ನಿರಂಜನಗಣೇಶ್ಚರನು ನಿದ್ದೆ ನೆಂಬ ಹೆಸರಿನಿಂದ ಗೋಸಲಚೆನ್ನಬಸವೇಶ್ವರನ ಶಿಷ್ಯನಾಗಿ ಅವತರಿಸಿ, ಕಗ್ಗೆರೆಯ ಗ್ರಾಮದ ಒ೪ಯಣ ತೋಟಕ್ಕೆ ಹೋಗಿರುವನು. ಆ ವೂರಿನ ಲ್ಲಿದ್ದ ನಂಬಿಯಣ್ಣನೆಂಬ ಭಕ್ತನು ತೋಟಕ್ಕೆ ಬಂದು ನಿದ್ದೆ ಶನನ್ನು ಕಂ ಡು ಭಕ್ತಿಯಿಂದ ನಮಸ್ಕರಿಸಿ, ತನ್ನ ಮನೆಯ ಭಿಕ್ಷೆಯನ್ನು ಕೈಕೊಂಡು ಧನ್ಯನಂ ಮಾಡಬೇಕೆಂದು ಬಿನ್ನೆಸಿ, ಮನೆಗೆ ಹೋಗಿ ಮತ್ತೆ ಬರುವೆ ನೆಂದು ಹೇಳಿ ತೆರಳುವನು. ಅವನು ಹೋದ ಬಳಿಕ ಊರಿನೊಳಗೆ ದೊಡ್ಡ ಜಗಳವು ಹುಟ್ಟಿ, ಕೆಲವು ದಿನಗಳವರೆಗೂ ಅವನು ಹಿಂತಿರುಗಿ ಬರುವುದ ಈವಕಾಶವಿಲ್ಲದ ಹೋಗಲು, ಅನಂತರ ತೋಟಕ್ಕೆ ಬಂದು ನೋಡುವಲ್ಲಿ, ಸಿದ್ದೇಶನು ಶಿವಧ್ಯಾನಪರವಶನಾಗಿ ಕುಳಿತಲ್ಲಿಂದ ಕದಲದೆ ಇರಲು, ಆತನ ಮೇಲೆ ಗೆದ್ದಲು ಹುತ್ತುವನ್ನು ಕಟ್ಟಿರುವುದು, ಜನವೆಲ್ಲವೂ ಇದನ್ನು ನೋ ಡಿ ಅತ್ಯಾಗಪಟ್ಟು, ಈ ಸಿದ್ಧಲಿಂಗೇಶನು ಮಹಾಮಹಿಮನೆಂದು ಭಯ ?