ಪುಟ:ಚೆಲುವು.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಮಂದಿ ಎಲ್ಲವೂ ಮಮ್ಮಲ ಮರುಗಿತು ; ಬೆಂದು ಹೋಯ್ತವಳು ಹೇಸಿದ ಮೆಯ್ಯ ನಿಂದುದೆಂದಿಗೂ ಮಾಸದ ಕೀರ್ತಿ; ಹೆಸರ ನಿಲ್ಲಿಸಲು ಪ್ರತಿಮೆ ಕೆತ್ತಿದರು ಉಸುರುವೆಸೀಗಳು ಕತೆಯನು ನಾನು. ಮಲ್ಲಮ್ಮಾ ಮಲ್ಲಮ್ಮಾ ಇಲ್ಲೇ ಇರುವೆಯ ಮಲ್ಲಮ್ಮಾ. ಕನ್ನಡ ನಾಡಿನ ಹಿರಿಮೆಯ ಕತೆಯು ಅಣ್ಣ ಇಂದು ನಾ ಹೇಳಿದೆ ನಿನಗೆ; ಇನ್ನು ಮೇಲೆ ಬಹ ಎಳೆಯರಿಗಿದನು ನಿನ್ನ ಮಾತಿನಲಿ ಹೇಳೋ ನೀನು ; ಕನ್ನಡ ನಾಡಿನ ಮಕ್ಕಳು ಎಂದಿಗು ಮನ್ನಣೆ ಎಂದರೆ ಇಂತೇ ನಡೆಯಲಿ; ಚಿನ್ನದ ನಾಡಿದು ಲೋಕಕೆ ನಡತೆಯ ಕನ್ನಡಿಯಾಗಲಿ, ಉನ್ನತಿ ಪಡೆಯಲಿ; ಸತ್ಯವುಳ್ಳವ ಬನ್ನ ಕೆ ಸಿಲುಕದೆ ಎತ್ತ ಎತ್ತಲೂ ಸುಖದಲಿ ಬೆಳೆಯಲಿ; ವೆಂಕಟರಮಣನು ಸಿರಿಮಲ್ಲೇಶನು ಶಂಕೆಯು ಹರಿಸಿ ಸಲಹಲಿ ಜಗವ; ಮಲ್ಲಮ್ಮಾ ಮಲ್ಲಮ್ಮ ಇಲ್ಲೇ ನಿಂದಿರು ಮಲ್ಲಮ್ಮಾ.