ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾತ್ರ ತತ್ವಗಳನ್ನು ತಿಳಿಸುವ ಪ್ರಯತ್ನ ಮಾಡಲ್ಪಟ್ಟಿದೆ. ಅದು ತುಸು ಬಿಗಿಯಾಗಿದ್ದರೂ ಅಪರಿಹಾರ್ಯವಾಗಿದೆ. ಮಿಕ್ಕವುಗಳು ಮನೋರಂಜಕ ವಾಗಿವೆ. ಜಿಜ್ಞಾಸೆಯು ಜ್ಞಾನದ ಮೂಲವು, ಜ್ಞಾನದಿಂದ ಪ್ರಗತಿಯು, ಪ್ರಗತಿಯಿಂದ ಸೌಖ್ಯವುಂಟಾಗುವುದು. ಈ ಗ್ರಂಧವು ಹೀಗೆ ಸೌಖ್ಯ ಸಾಧನದ ಒಂದು ಮಾರ್ಗವಾಗಲೆಂಬುದಿಷ್ಟೆ ನನ್ನ ಬೇಡಿಕೆ. ಧಾರವಾಡ, ೧- ೯೩೧, ಪಾಟೀಲ ತಿರುಮಲರಾಯ,