ಪುಟ:ಜ್ವರ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-{ ೧೩೫ ]ಕಷಾಯ ಮಾಡಿ ಇಲ್ಲವೆ ಸಕ್ಕರೆ ಹಾಕಿ ಕೊಟ್ಟರೆ ಜೈರಾತಿಸಾರವು ನಾಶ ಹೊಂ ದುತ್ತದೆ. (೬) ಸಕ್ಕರೆ, ರಾಳ, ನೆಲ್ಲಿಚೆಟ್ಟು, ಧಾತಕಕುಸುಮ, ಬೆಲವತ್ರಿ ಕಾಯಿ ಇವುಗಳ ಚೂರ್ಣವನ್ನು ಪೋಸ್ತಕಾಯಿಯ ಕಷಾಯದಲ್ಲಿ ಕೂಡ ತಕ್ಕದ್ದು, (೨) ಕಣಗಿಲ ಬೇರು, ಧತ್ತರದ ಬೀಜ, ನೆಲಗುಳ ಹೂ, ಇಂಗ ೪ಕ, ಕಲ್ಲಕಡಲೆ, ಅಳಲೇಕಾಯಿ, ತುರಿಕಾಯಿ, ನೆಲ್ಲಿಚೆಟ್ಟು, ನೇಪಾಳದ ಬೇರು, ಕರ್ಪೂರ, ಕಶಕ, ಲವಂಗ, ಆಕಳ ಕರಿ, ಅಘ, ಮೆಣಸು, ಸುರಗೀ ಗಿಡದ ಅಂಟು, ಜಾಜಿಕಾಯಿ, ಪತ್ರಿ ಇವುಗಳನ್ನು ಸಮಭಾಗ ತಕೊ೦ಡು ಕೂಡಿಸಿ ಚೂರ್ಣಮಾಡಿ, ಅದನ್ನು ಜೇನತುಪ್ಪದಲ್ಲಿ ಇಲ್ಲವೆ ವೀಳೆದೆಲೆಯ ರಸ ದಲ್ಲಿ ಅರೆದು ೧|| ಮಾಸಿ ತೂಕದ ಗುಳಿಗೆ ಮಾಡಿಡಬೇಕು, ಅಂಥದೊಂದು ಗುಳಿಗೆ ಯನ್ನು ಚೇನತುಪ್ಪದೊಡನೆ ಕೊಟ್ಟರೆ, ಜೈರಾತಿಸಾರವು ಖಾತ್ರಿಯಿಂದ ನಿಲ್ಲು ಇದೆ; ಮುಖದ ಮೇಲೆ ಕಾಂತಿ ಬರುತ್ತದೆ; ಅಗ್ನಿ, ಬಲಗಳು ಸೃದ್ಧಿ೦ಗತವಾ ಗುತ್ತವೆ. ೭ ಮಲಾವರೋಧಕ್ಕೆ:-(೧) ಜ್ವರದೊಳಗೆ ಮಲಾವರೋಧವಾದರೆ, ತೀವ್ರ ಸಾರಕವಾದ ಔಷಧಿಗಳ ಬತ್ತಿಯನ್ನು ಮಾಡಿ ಗುದದ್ವಾರದಲ್ಲಿ ಸೇರಿಸಿ, ಚೆನ್ನಾಗಿ ಮಿ ಕ್ಸರ್ಗವಾಗುವಂತೆ ಮಾಡತಕ್ಕದ್ದು. (೨) ಬಟ್ಟೆಗೆ ಹಚ್ಚುವ ಸಬ ಕಾರ ಇಲ್ಲವೆ ಸೀಗೀಕಾಯಿಗಳನ್ನು ನೀರಲ್ಲಿ ಕದರಿ, ಅದನ್ನು ಅರಿವೆಗೆ ಹಚ್ಚಿ ಅದರ ಬತ್ತಿ ಮಾಡಿ ಅದನ್ನು ಕಲಹೊತ್ತು ಗುದದ್ವಾರದಲ್ಲಿರಬೇಕು. ಅದರಿಂದ ಮತ್ಸರ್ಗವು ಚೆನ್ನಾಗಿ ಆಗುತ್ತದೆ. (೩) ಬಾಳಹಿರಡಾ, ಕಕ್ಕೆಕಾಯಂ ಆಗಿನ ತಿಳು), ಕಟುಕರೋಣ, ತಿಗಡಿ, ನೆಲ್ಲಿಚೆಟ್ಟು ಇವುಗಳ ಕಷಾಯವನ್ನು ಜೇನುತುಪ್ಪದೊಡನೆ ಕೊಟ್ಟರೆ ಮಲಾವರೋಧ ಮತ್ತು ಜೀರ್ಣಜ್ವರಗಳ ನಾಶ ವಾಗುತ್ತದೆ. ೮ ಬಿಕ್ಕಿಗೆ;-(೧) ಕದಲ್ಲಿ ಬಿಕ್ಕ ಹತ್ತಿದರೆ ಸೈಂಧಲವಣವನ್ನು ನೀರಲ್ಲಿ ಕರಗಿಸಿ ಮುಗಿನಲ್ಲಿ ಹಾಕಬೇಕು. (೨) ಇಂಗನ್ನು ಹಂಗೆಯಿಲ್ಲದ ನಿಗಿನಿಗಿ ಕೆಂಡದ ಮೇಲೆ ಹಾಕಿ ಅದರ ಹೊಗೆಯನ್ನು ಬಾಯೊಳಗೆ ತೆಗೆದು ಬೇಕು. (೩) ಕುದುರೆಯ ಒಣಗಿದ ಲದ್ದಿಯ ಹೊಗೆಯನ್ನು ನುಂಗಿದರೆ ಮಹಾ ಸನ್ನಿಪಾತಾತ್ಮಕ ಬಿಕ್ಕಿನ ನಾಶವಾಗುತ್ತದೆ, ೯ ಕಮ್ಮಿಗೆ:-(೧) ಜ್ವರದೊಳಗೆ ಕಡು ಬಂದರೆ, ಹಿಪ್ಪಲಿ, ಹಿಪ್ಪಲಿ ಬೇರು, ತಾರೀಕಾಯಿತೊಗಟೆ, ಕಲ್ಲುಸಬ್ಬಸಿಗಿ, ಶುಂಠಿ ಇವುಗಳ ಚೂರ್ಣದ ಲೇಹವನ್ನು ಅಡಸಾಲದ ರಸ ಮತ್ತು ಜೇನತುಪ್ಪ ಹಾಕಿ ಕೊಡಬೇಕು, (೨) ಕಳಂಜನ, ಶುಂಠಿ, ಹಿಪ್ಪಲಿ, ಮೆಣಸು, ದುಷ್ಟಪುಚಟ್ಟು, ಕಿರಿವಣಿ, ಲಿಂಗ,