ಪುಟ:ಜ್ವರ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩ ಶುಂಠಿ, ಮೆಣಸು, ಹಿಪ್ಪಲಿ ಇವುಗಳ ಸೋಸಿದ ಚೂರ್ಣವನ್ನು ಮುಗಿ ನಲ್ಲಿ ಊದಿದರೆ ರೋಗಿಯು ಸಾವಧನಾಗುತ್ತಾನೆ, ೪ ಆವತಬಳ್ಳಿ, ಕಹಿಪಡುವಲ, ಅಡಸಾಲ, ಶುಂಠಿ, ಮೆಣಸು, ಹಿಪ್ಪಲಿ ಇವುಗಳ ಕಷಾಯ ಕೊಡಬೇಕು, ೫ ರಾಸನೆಯ ಕಷಾಯದಲ್ಲಿ ಮನಶಿಲ ಮತ್ತು ಎಳ್ಳೆಣ್ಣೆ ಹಾಕಿ ಕುದಿಸಿ, ಬಾಕಿ ಉಳಿದ ಎಣ್ಣೆಯಿಂದ ಆಂಜನ ಮಾಡಬೇಕು. ಇದು ಚಂದ್ರಿಕ ಸನ್ನಿಪಾತ ವನ್ನು ನಾಶಮಾಡುತ್ತದೆ. ೬ ಕಷ್ಟ, ಕಕ್ಕೆಕಾಯಿ ಶು೦ಠಿ, ಅರಿಷಿಣ, ಮರಅರಿಷಿಣ, ಮೆಣಸು, ಹಿಪ್ಪಲಿ, ಬಜಿ ಇವನ್ನು ಕುರಿಯ ಉಚ್ಚಿಯಲ್ಲಿ ಅರೆದು ಮುಗಿನಲ್ಲಿ ಹಿಂಡಬೇಕು, ಇದರಿಂದ ತಂತ್ರಿಕ ಸನ್ನಿಪಾತವು ಗುಣವಾಗುತ್ತದೆ, (೭) ಕಂಠಕುಬ್ಬ ಸನ್ನಿಪಾತಜ್ವರ. ಲಕ್ಷಣ:- ಹನುಸ್ತಂಭ, ದಾಹ, ಅರುಚಿ, ಶ್ವಾಸ, ನಡುಗು, ತಲೆ ನೋವು, ಎಚ್ಚರದಪ್ಪೋಣ, ಬಹಳ ಜ್ವರ, ರಕ್ತದ ಬಗ್ಗೆ ವ್ಯಥೆ, ದನಿಕುಗ್ಗುವದು, ಬಡಬಡಿಕೆ ಸಂತಾಪ ಈ ಲಕ್ಷಣಗಳಾಗುತ್ತವೆ. ಕಂಠಕುಬ್ಬ ಸನ್ನಿಪಾತಕ್ಕೆ ಉಪಾಯಗಳು, ೧ ಉತ್ತರಾಣಿ ಸೊಪ್ಪಿನ ರಸದಲ್ಲಿ ಹಿಪ್ಪಲೇ ತೆಯು ನುಂಗಿನಲ್ಲಿ ಹಾಕಬೇಕು. ೨ ತ್ರಿಫಳ, ಕಟುಕರೆ, ಬೆಕಿನಗ, ಕಟು, ಕಡಮುರುಕನ ತೊಗಟೆ, ಅಡಸಾಲ ಮತ) ಅರಿಷಿಣಗಳ ಕಷಾಯವು ಈ ಸನ್ನಿಪಾತಕ್ಕೆ ಗುಣ ಕಾರಿಯಾಗಿರುತ್ತದೆ, ೩ ದುಷ್ಟಸಹಿಟ್ಟು, ಕೊಡುಮುರುಕ, ಅಳಲೇಕಾಯಿ, ಜೀಕಿನಗಡೆ, ಕಳೂರ, ನೆಲಬೇವು, ಗಂಟುಭಾರಂಗಿ, ಅರಿಷಿಣ, ಕಟುಕರಣಿ, ತಾವರೆ ಗಡ್ಡೆ, ಚಿತ್ರಮಲ, ಮೆಣಸು, ನೆಲಗುಳ್ಳ ಬೇರು, ಅಡಸಾಲ, ನೆಲ್ಲಿಚೆಟ್ಟು, ದೇವದಾರು, ತಾರೀಕಾಯಿ, ಕಾಡವೆಣಸಿನ ಬೇಕು, ಶುಂಠಿ, ಹಿಪ್ಪಲಿ, ಕಿರಿಶಿಣಿ ಇವುಗಳ ಮುಂದೊಡ್ಡ ಕವಾಯ ಕೆಡುವದು, ೪ ಕಟು, ಕಡುಮುರುಕನ ಬೀಜ, ಕಟುಕರಣಿ, ತ್ರಿಫಳ, ಮರ ಅರಿಷಿಣ, ಅರಿಷಿಣ ಇವುಗಳ ಕವಾಯು ಕೊಡತಕ್ಕದ್ದು.