ಪುಟ:ತಿಲೋತ್ತಮೆ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yo ತಿಲೋತ್ತಮೆ. ಆದರೆ ಅಂಥದೊಂದು ಉದಾತ್ತವಾದ ಉದ್ದೇಶದ ಕಾರ್ಯಕ್ಕಾಗಿಯೇ ಬಂ। ದಿದ್ದ ಆಯೇಷೆಯ ಕಾರ್ಯವು ಇನ್ನೂ ಕೊನೆಗಂಡಿರುವದಿಲ್ಲ; ಅದರಿಂದಲೇ ನಿಮ್ಮ ದರ್ಶನಕ್ಕೆ ಬರುವದು ಆಕೆಯಿಂದಾಗಲೊಲ್ಲದು, ಆ ಕಾರ್ಯವಾದ ಕೂಡಲೆ ನಿಂತಕಾಲಲ್ಲಿ ಆಯೇಷೆಯು ತಮ್ಮ ಬಳಿಗೆ ಬರುವಳು. ಆಕೆಯು ಎಂದು ಬರುವಳೆಂಬದು ಇನ್ನೊಂದು ಪತ್ರದಿಂದ ತಮಗೆ ಗೊತ್ತಾಗ ಬಹುದು. ಪ್ರಿಯಬಂಧೂ, ಹೆಚ್ಚಿಗೆ ನಾನೇನು ಬರೆಯಲಿ? ವಿಪದ್ಧಸ್ತರಾದ ನಿಮಗೆ ಧೈರ್ಯ ಹೇಳುವದಕ್ಕಾಗಿಯೂ, ದುಃಖದ ಸಮುದ್ರದಲ್ಲಿ ನೀವು ಹೇಗೆ ಈಸುತ್ತಿರುವಿರೆಂಬದನ್ನು ನೋಡುವದಕ್ಕಾಗಿಯೂ, ಸಂಕಟಗಳ ಪರ್ವತಗ ಳನ್ನು ತಲೆಯ ಮೇಲೆ ಹೇಗೆ ಹೊತ್ತುಕೊಂಡಿರುವಿರೆಂಬದನ್ನು ಅವ ಲೋಕಿಸುವದಕ್ಕಾಗಿಯೂ, ಪ )ಸಂಗವಶಾತ" ನಿಮಗೆ ಸಹಾಯ ಮಾಡು ವದಕ್ಕಾಗಿಯೂ, ನಿಮ್ಮ ದುಃಖದಪಾಲುಗಾರಳಾಗುವದಕಾಗಿಯೂ, ನಿರುತ್ಸಾಹಿಗಳಾಗಿರುವ ನಿಮ್ಮನ್ನು ಕಾರ್ಯತತ್ಪರರನ್ನಾಗಿ ಮಾಡುವ ದಕ್ಕಾಗಿಯೂ ನಾನು ಆದಷ್ಟು ಬೇಗನೆ ಬರುವೆನೆಂಬದನ್ನು ಇನ್ನೊಮ್ಮೆ ಹೇಳುವನು. ನೀವು ನನ್ನ ಅನಂತ ಅಪರಾಧಗಳನ್ನು ಈವರೆಗೆ ಕಮಿ ಸುತ್ತ ಬಂದಂತ, ಈಗಾದರೂ ನನ್ನ ಅಪರಾಧವನ್ನು ಕ್ಷಮಿಸಿ, ನನ್ನ ಮೇಲೆ ಎಂದಿನಂತೆ ಪ್ರೇಮಮಾಡಿರಿ, ಇದೇ ನನ್ನ ಪ್ರಾರ್ಥನೆಯು, ದುರ್ದೈವಿಯಾದ, ಆಯಷಯು.