ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಎರಡನೇ ಅಧ್ಯಾಯ. ನಮ್ಮ ಹಡಗುಗಳನ್ನು ನಡೆಸುವುದಕ್ಕೆ ಸದರಿ ವಿದ್ಯೆಯಲ್ಲಿ ಸಮರ್ಥರಾದ ಕೆಲವು ಜನ ಸಿನೀಮಿಯಾ ದೇಶೀಯರ ಸಹಾಯವು ನಮಗೆ ಕೊಡಲ್ಪಟ್ಟಿತು. ಗ್ರೀರ್ಪೈರನ್ನು ಕಳುಹಿಸಿ ಕೊಟ್ಟರೆ, ಅವರು ನಮಗೆ ಅಪಾಯ ಮಾಡಿಯಾರೆಂಬ ಭಯದಿಂದ ಅಸೆಸನು ಅವರ ಸಹಾಯವನ್ನು ನಮಗೆ ಕೊಡಲಿಲ್ಲ. ವಿನೀತಿ ಯಾದವರನ್ನು ನಂಬಬಹುದೆಂದು ಅವರ ಸಹಾಯವು ನಮಗೆ ಕೊಡಲ್ಪಟ್ಟಿತು. ನಮ್ಮ ಕ್ಷೇಮಕ್ಕಾಗಿ ಮಾಡಲ್ಪಟ್ಟ ಕೆಲಸವು ನಮಗೆ ಪ್ರತಿಕೂಲವಾಗಿ ಪರಿಣಮಿ ಸಿತು. ಈ ಕಾಲದಲ್ಲಿ ಈಜಿಪ್ಟ್ ದೇಶದಲ್ಲಿ ಸಸಾಟ್ರಿಸ್ ಎಂಬ ದೊರೆಯು ಆಳು ಆದ್ದನು. ಅವನು ಅನೇಕ ರಾಜ್ಯಗಳನ್ನು ಗೆದ್ದು , ತನ್ನ ದೇಶಕ್ಕೆ ಸೇರಿಸಿಕೊಂಡಿ ಧ್ವನು, ವಿನೀಮಿಯಾ ದೇಶೀಯರಿಗೂ, ಇವನಿಗೂ ಆಗುತ್ತಿರಲಿಲ್ಲ, ವಿನೀಷಿ ಯನರು ವ್ಯಾಪಾರ ಶಾಸ್ತ್ರದಲ್ಲಿ ಬಹಳ ಸಮರ್ಥರಾಗಿದ್ದರು, ವ್ಯಾಪಾರ ದಿಂದ ಬಹು ದ್ರವ್ಯವನ್ನು ಸಂಪಾದಿಸಿಕೊಂಡಿದ್ದ ರು. ಸಮುದ್ರ ತೀರದಲ್ಲಿ ಅವರು ಅನೇಕ ದುರ್ಗಗಳನ್ನು ಕಟ್ಟಿ ಕೊಂಡಿದ್ದರು. ಅನೇಕ ರೇವು ಪಟ್ಟಿ ಣಗಳು ಸಕಲ ಸಂಪತ್ತುಗಳಿಗೂ ತೌರುಮನೆಯಾಗಿದ್ದವು. ಈ ಪಟ್ಟಣಗಳೆಲ್ಲಾ ಅವರಿಗೆ ಸೇರಿದ್ದವು. ಈ ಜನಗಳು ಮಿತಿಯಿಲ್ಲದ ದ್ರವ ಬಲದಿಂದ ಉನ್ಮತ್ತರಾಗಿ ದ್ದರು. ಸಸಾಟ್ರಿಸ್ ಎಂಬುವನು ಈಜಿಪ್ಟ್ ದೇಶದಲ್ಲಿ ಇವರು ಮಾಡುತ್ತಿದ್ದ ವ್ಯಾಪಾರಕ್ಕೆ ತೆರಿಗೆಯನ್ನು ಹಾಕಿದ್ದನು. ಇವರು ಅದನ್ನು ಕೊಡುವುದಿಲ್ಲವೆಂದು ತಿರಸ್ಕರಿಸಿದ್ದ ರು. ಅವರು ಇವನ ಸಹೋದರನನ್ನು ಎತ್ತಿಕಟ್ಟಿ, ಅವನಿಂದ ನಸಾ ಟ್ರಸನನ್ನು ಒಂದು ಸಂತೋಷ ಕೂಟವು ನಡೆಯುವಾಗೈ, ಕೊಲ್ಲಿ ಸಬೇಕೆಂದು ಪ್ರಯತ್ನ ಮಾಡಿದ್ದರು. ಈ ವಿಷಯಗಳೆಲ್ಲಾ ಸೂಕ್ಷ್ಮವಾಗಿ ಸಸಾಟಿಸ್ಸನಿಗೆ ಗೊತ್ತಾಯಿತು. ಫಿನೀಷಿರ್ಯರ ಮೇಲೆ ಇವನ ದ್ವೇಷವು ಹೆಚ್ಚಿತು. ಅವರನ್ನು ಮಲೋತ್ಸಾ ಟನ ಮಾಡಬೇಕೆಂಬ ಸಂಕಲ್ಪವು ಮಾಡಲ್ಪಟ್ಟಿತು, ಏನೀಷಿಯಾ ದೇಶದ ಹಡ ಗುಗಳು ಎಲ್ಲಿ ಸಿಕ್ಕಿದರೂ ಹಿಡಿಯಲ್ಪಡಲ, ಅಧವಾ ಮುಳುಗಿಸಲ್ಪಗಲಿ ಎಂದು ಇವನು ಆಜ್ಞೆ ಮಾಡಿದ್ದನು, ನಾವು ಸಿಸಿಲ ಪಟ್ಟಣದ ಸಮಿಾಪಕ್ಕೆ ಬರುತ್ತಿ ದ್ದಾಗ, ನಮ್ಮ ಹಡಗುಗಳು ಈಜಿಪ್ಟ್ ದೇಶದವರ ಗೋಚರಕ್ಕೆ ಬಂದವು. ನಮ್ಮ ಹಡಗಿನ ಕಡೆಗೆ ಅವರು ಬಂದರು, ದೊಡ್ಡ ಪಟ್ಟಣವೇ ತೇಲಿಕೊಂಡು ಬರುತ್ತಲಿದೆಯೋ ಎಂಬಂತೆ ಅವರ ಹಡಗುಗಳ ಸಮೂಹವು ಕಾಣಬಂತು. ನಮ್ಮ ಹಡಗಿನ ನಾವಿಕರು ಭಯಗ್ರಸ್ತರಾದರು, ಅವರಿಂದ ತಪ್ಪಿಸಿಕೊಂಡು ಹೋಗು