ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 ಮದಲ್ಲಿ ಧರ್ಮವು 23ಯಿಸುವುದೆಂಬ ನಂಬಿಕೆಯು ಉಂಟಾಯಿತು, ನಿನ್ನ ಉಪ ದೇಶದಿಂದ ನನ್ನ ಶರ್ಮಚಕ್ಷು ಸ್ಥಿಗೂ, ಜ್ಞಾನಚಕ್ಷು ಸ್ಥಿಗೂ ಉಂಟಾಗಿದ್ದ ಸರೆ ಯು ಕರಗಿಹೋಯಿತು. ಈ ದೇಶದ ರಮಣೀಯತೆಯು ಈಗ ನನ್ನ ದೃಷ್ಟಿಗೆ ಬೀಳುತ್ತಲಿದೆ. ಈ ದೇಶವೆಲ್ಲಾ ಅತ್ಯಂತ ರಮಣೀಯವಾಗಿದೆ, ಈ ರಮಣೀ ಯತೆಗೆ ಕಾರಣಭೂತರಾದವರು ಮಹಾಜನಗಳೆಂದು ಗೊತ್ತಾಗುತ್ತದೆ. ಸಂಪದ ಭಿವೃದ್ಧಿ ಕೆಲಸಗಳಲ್ಲಿ ಅವರು ಮಾಡುತ್ತಲಿರುವ ಮೆಹನತ್ತು ಹೊಲಗಳಲ್ಲಿಯೂ, ಗದ್ದೆ ಗಳಲ್ಲಿಯೂ, ಆರಾಮಗಳಲ್ಲಿಯೂ, ಕಲ್ಪವೃಕ್ಷಗಳಲ್ಲಿಯೂ ಸ್ಪಷ್ಟವಾಗಿ ಕಾಣು ತಲದೆ, ಇಲ್ಲಿನ ಸ್ತ್ರೀ ಪುರುಷರು ಅನಂದವಳಗಿರುವುದನ್ನೂ, ದನಕರುಗಳು ಚೆ ಸ್ನಾಗಿ ಬೆಳೆದಿರುವುದನ್ನೂ ನೋಡಿದರೆ, ಈ ದೇಶದ ಪ್ರಭುವು ಪ್ರಜೆಗಳ ಸೇವೆಯಲ್ಲಿ ಎಷ್ಟು ಪರಾಯಣನಾಗಿರುವನೋ ಅದು ಗೊತ್ತಾಗುತ್ತದೆ. ಪ್ರಭುವು ವಾಸ ಮಾಡತಕ್ಕ ಅರಮನೆಗೂ, ಉಪಪನ್ನರಾದ ಜನಗಳು ವಾಸ ಮಾಡತಕ್ಕ ಪ್ರಾಸಾದ ಗಳಿಗೂ, ಪ್ರಜೆಗಳು ವಾಸ ಮಾಡತಕ್ಕ ಮನೆಗಳಿಗೂ, ಮುನಿಗಳು ವಾಸ ಮಾ ಡತಕ್ಕ ಪರ್ಣಶಾಲೆಗಳಿಗೂ ಜಗಚ್ಚಕ್ಷುವಾದ ಸೂಗ್ಯನೂ, ಜಗತ್ತಿಗೆ ಪ್ರಾಣಭೂತ ವಾದ ವಾಯುವೂ ಸರೈ ಸಮದೃಷ್ಟಿಯಿಂದ ಹಗೆ ಅನುಗ್ರಮಾಡುತ್ತಲಿರುವರೋ ಅದು ಗೊತ್ತಾಗುತ್ತದೆ, ಅಶ್ವಿನೀ ದೇವತೆಗಳೂ ಕೂಡ ಪ್ರಜೆಗಳ ಆರೋಗ್ಯಭಾ ಗ್ಯದ ವಿಷಯಗಳಲ್ಲಿ ಈ ಪ್ರಭುವಿನಲ್ಲಿ ಕೃಪೆಯಿಟ್ಟು, ಎರ್ಣಾಯುರಾರೋಗ್ಯಗಳಿಗೆ ಸಹಕಾರಿಗಳಾಗ ಉಪದೇಶಗಳನ್ನು ಮಾಡಿರಬೇಕೆಂದು ತೋರುತ್ತದೆ. ಮುಂಗೆ ನಾನು ಇಥಾಕಾ ದ್ವೀಪಕ್ಕೆ ಪ್ರಭುವಾದ ಪಕ್ಷದಲ್ಲಿ, ನನ್ನ ದೇಶವನ್ನು ಹೇಗೆ ಇಟ್ಟು ಕೊಳ್ಳ ಬೇಕೊ, ನನ್ನ ಪ್ರಜೆಗಳ ಸೇವೆಯನ್ನು ಹೇಗೆ ಮಾಡಬೇಕೋ ಅದಕ್ಕೆ ಮೇಲ್ಬಂಗ್ರಿಯು ಇಲ್ಲಿ ಇರುವುದೆಂದು ನೀನು ಹೇಳಿದೆ, ನನ್ನ ದೇಶದಲ್ಲಿ ಪ್ರಭು ತ್ವವನ್ನು ಮಾಡುವ ಸಂಪತ್ತು ನನಗೆ ಲಭ್ಯವಾಗುವುದೋ ಇಲ್ಲವೋ ಎಂಬ ಸಂ ದೇಹವು ನನಗೆ ಇದುವರೆಗೂ ಇದ್ದಿತು ಈಗ ನಿವೃತ್ತವಾಯಿತು. ನಾವು ಅಪ ರಾಧಿಗಳಲ್ಲ. ನನ್ನನ್ನು ನಿಮಿ ರ್ಯರೆಂದು ತಿಳಿದುಕೊಂಡು, ಮರಣದಂಡ ನೆಗೆ ಗುರಿಮಾಡಬೇಕೆಂಬ ಉದ್ದೇಶವು ಈ ದೇಶೀಯರಿಗೆ ಉಂಟಾಗಿರುವುದು. ಜಗದೀಶ್ವರನಿಗೆ • ಭಯಕೃದ್ಭಯನಾಶನಃ ' ಎಂಬ ಬಿರುದು ಇರುವುದು. ನನ್ನ ಅತ್ತಾನದಿಂದ ಭಯವು ಉಂಟಾಗಿರುವುದು, ದೇವರು ಸತ್ಯಸಂಧನಾದ D೦ದಲೂ, ನಾವು ನಿರಪರಾಧಿಗಳಾದದ್ದರಿ೦ದಲೂ ನಮಗೆ ಯಾವ ಅನರ್ಧನ್ ಉಂಟಾಗಲಾರದೆಂದು ನಂಬಬಹುದು.” ಈ ರೀತಿಯಲ್ಲಿ ನಾನು ಹೇಳಲು, ಮೆಂಟ ಗನು ಹೇಳಿದ್ದೇ ನಂದರೆ - 14 ಈ ರಾಟ್ಟದ ಚನಗಳು ಕೇವಲ ಸುಖವಾಗಿರುವರು, ಇದರಿಂದಲೇ ಈ