ಪುಟ:ನನ್ನ ಸಂಸಾರ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ಾ ವ ನೆ. ಮಹನೀಯರೇ,

         ಮಹಾಪುರುಷರ ಚರಿತ್ರೆಯನ್ನು ಬರೆಯಬೇಕಾದರೆ ಮಹಾಪಂಡಿತರಿಂದ ಲ್ಲದೇ ಸಾಮಾನ್ಯರಿಂದಾಗಲಾರದೆಂಬ ವಿಷಯವು ಸರ್ವರಿಗೂ ತಿಳಿದೇಯಿರುವುದು;"ಲೋಕೋಭಿನ್ನ ರುಚಿಃ" ಎಂಬ ನಾಣ್ನುಡಿಯಂತೆ, ಸರ್ವಜನರಿಗೂ ಸಮಾಧಾನ ವಾಗಿರುವಂತೆ ಗ್ರಂಥವನ್ನು ರಚಿಸುವುದು ಬಹಳ ಕಷ್ಟವಾದ ಕೆಲಸವಾಗಿರುವುದು,

ಹೀಗಿರುವಲ್ಲಿ ಮಹಾಪುರುಷರಾದ ಶ್ರೀ ಶಂಕರಾಚಾರ್ಯರ ಚರಿತ್ರೆಯನ್ನು ಬರೆ ಯುವುದು ಸಾಮಾನ್ಯವಾದುದಲ್ಲ. ಅದರಲ್ಲಿಯೂ "ಶಂಕರಕಥಾಸಾರ" ವೆಂಬ ಈ ಗ್ರಂಥರಚನೆಯು ಅತ್ಯಧಿಕವಾದ ಪ್ರಯತ್ನದಿಂದ ರಸಭರಿತವಾಗಿ ಮಾಡಲ್ಪ ಟ್ಟಿದೆ. ಈ ಗ್ರಂಥಕರ್ತರಾಧ ಮ|| ರಾ|| ಡಿ. ಎಸ್. ಶಂಕರನಾರಾಯಣಶಾಸ್ತ್ರೀಯ ವರು ಇನ್ನೂ ಚಿಕ್ಕ ವಯಸ್ಸಿನವರು, ಇದೇ ಇವರ ಮೊದಲನೆಯ ಗ್ರಂಥರಚನೆಯು, ಈ ಬಾಲ್ಯದಲ್ಲಿಯೇ ಗ್ರಂಥರಚನೆಯಲ್ಲಿ ಇವರಿಗೆ ಉತ್ಸಾಹಹುಟ್ಟಿ, ತಮ್ಮ ಆಶಾಪೂರ್ಣತೆಯನ್ನು ಮಾಡಿಕೊಳ್ಳಲು, ಸಾಮಾನ್ಯವಾದ ಕಟ್ಟು ಕಥೆಗಳನ್ನು ಬರೆಯಲುಪಕ್ರಮಿಸದೇ ಶ್ರೀ ಆಚಾರ್ಯರವರ ಚರಿತ್ರೆಯ ಸಾರವನ್ನು ಸಂಗ್ರಹಿಸಿ ಬರೆಯಲುಪಕ್ರಮಿಸಿ ಮುಗಿಸಿದುದು ಆಚಾರ್ಯರ ಮಹಿಮೆಯಿಂದಲ್ಲದೇ ಬೇರೆಯಲ್ಲ. ಈ ಗ್ರಂಥಕರ್ತರು ಪುಸ್ತಕವನ್ನು ಪ್ರಚಾರಕ್ಕೆ ತರಲು "ಶ್ರೇಯಾಂಸಿಬಹು ವಿಘ್ನಾನಿ" ಎಂಬಂತೆ ನಾನಾ ಕಷ್ಟಗಳನ್ನು ಅನುಭವಿಸಿದ್ದರಿಂದ ಇಂತಹ ಸತ್ಕಾರ್ಯದಲ್ಲಿ ಹತಾಶರಾಗಿ ಧೈರಗುಂದಿದವರಾಗಿದ್ದರು, ಆಗಾಗ್ಯೆ ಇವರಿಗೆ ಉತ್ಸಾಹ ಕೊಟ್ಟಿದುದ ರಿಂದ ಈ ಪುಸ್ತಕವು ಪ್ರಚಾರಕ್ಕೆ ಬರಲು ಅವಕಾಶವಾಯಿತು. ಮಹನೀಯರು ತಮ್ಮ ಉದಾರವಾದ ಮನಸ್ಸಿನಿಂದ ಈ ಗ್ರಂಥಕರ್ತರಿಗೆ ಪ್ರೋತ್ಸಾಹಕೊಟ್ಟು ಇವರ ಗ್ರಂಥರಚನೆಯಲ್ಲಿನ ಉತ್ಸಾಹವನ್ನು ಅಭಿವೃದ್ಧಿಗೊಳಿ ಸುವರೆಂದು ಕೋರುತ್ತೇವೆ. ಇತಿ ಮೈಸೂರು | 15-3-1916 ) ಬಿ. ವಿ. ನರಸಿಂಹೈಯ್ಯಂಗಾ.