ಪುಟ:ನನ್ನ ಸಂಸಾರ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ಕಾದಂಬರೀ ಸಂಗ್ರಹ ಆ ಹುಡುಗನ ತಲೆಯಲ್ಲಿ ಚಂದ್ರರೇಖೆಯೂ, ಹಣೆಯಲ್ಲಿ ಫಾಲನೇತ್ರಚಿ ಹ್ನವೂ, ಭುಜಗಳಲ್ಲಿ ತ್ರಿಶೂಲರೇಖೆಯೂ, ಕೈಗಳಲ್ಲಿ, ಚಕ್ರ, ಡಮರುಕ, ಕಮಲಕಲ ಶಾದಿಗುರುತುಗಳೂ, ಉರಸ್ಸಿ ನಲ್ಲಿ ನಾಗರೇಖೆಯೂ, ಕತ್ತಿನಲ್ಲಿ ಕಪ್ಪು ಮಚ್ಚೆಯೂ ಇದ್ದವು; ಮತ್ತು ದೇಹವು ಸುವರ್ಣದಕಾಂತಿಗಿಂತಲೂ ಅತಿಶಯವಾದ ಕಾಂತಿಯು ಳ್ಳದ್ದಾಗಿತ್ತು. ಶಿವಗುರುವು ಹನ್ನೊಂದನೆಯ ದಿನದಲ್ಲಿ ಶಿವಪ್ರಸಾದದಿಂದ ಹುಟ್ಟಿದ ಆ ಶಿಶು ವಿಗೆ ಶ್ರೀ ಶಂಕರನೆಂದು ನಾಮಕರಣಮಾಡಿದನು. ಹೀಗೆ ಬಾಲಮೃಗಾಂಕಶೇಖರನು ಭೂಲೋಕದಲ್ಲಿ ಅವತಾರಮಾಡಲಾಗಿ, ಸುರಶ್ರೇಷ್ಠರು ಆತನನ್ನು ಸೇವಿಸಲು ಶಾಸ್ತ್ರಜ್ಞರಾದ ಬ್ರಾಹ್ಮಣರಿಗೆ ಪುತ್ರರಾಗಿ ಅವ ತರಿಸಿದರು. ಅವರಲ್ಲಿ ವಿಷ್ಣುವು ವಿಮಲನೆಂಬ ವಿಪ್ರಶ್ರೇಷ್ಠನಿಗೆ ಸನಂದನಾಭಿಧಾನದಿಂದ ಮಗನಾಗಿ ಹುಟ್ಟಿ, ಅನಂತರ ಪದ್ಮ ಪಾದರೆಂಬ ಹೆಸರನ್ನು ವಹಿಸಿದನು. ವಾಯುವು ಪ್ರಭಾಕರನೆಂಬ ಬ್ರಾಹ್ಮಣನಿಗೆ ಮಗನಾಗಿ ಅವತರಿಸಿದನು. ಇವನನ್ನೇ ಹಸ್ತಾಮಲಕ ರೆನ್ನು ತ್ತಾರೆ. ಅಗ್ನ್ಯಂಶದಿಂದ ತೋಟಕಾಚಾರ್ಯರು ಅವತರಿಸಿದರು. ಬ್ರಹ್ಮನು ಹಿಮಮಿತ್ರಭಟ್ಟಾಚಾರ್ಯನಿಗೆ ಮಂಡನಮಿಶ್ರನೆಂಬ ಹೆಸರಿನಿಂದ ಮಗನಾದನು. ಆತನನ್ನೇ ಸುರೇಶ್ವರಾಚಾರ್ಯರೆನ್ನು ತ್ತಾರೆ. ನಂದೀಶ್ವರ, ವೀರಭದ್ರ, ಗಣೇಶಾಂಶಗಳಿಂದ ಉದಂಕ ಮುನಿ ಹುಟ್ಟಿದನು. ಬೃಹಸ್ಪತಿಯು ಆನಂದಗಿರಿಯಾದನು. (ಬೃಹಸ್ಪತಿಯೇ ಮಂಡನ ಮಿಶ್ರನಾಗಿಯೂ, ನಂದೀಶ್ವರನೇ ಆನಂದಗಿರಿಯಾಗಿಯೂ, ಅವತರಿಸಿದರೆಂದು ಕೆಲ ವರು ಹೇಳುತ್ತಾರೆ.) ವರುಣನು ಚಿತ್ಸುಖಾಚಾರ್ಯನಾದನು. ಯಮನು ಕಾಲಾನಲ ನೆಂಬ ವಾದಿಯಾಗಿ ಹುಟ್ಟಿದನು. ನಿರೃತಿಯು ಶಾಕ್ತಮಂತ್ರವಾದಿಯಾದನು. ದೂರ್ವಾಸಮಹರ್ಷಿಗಳು ವೇದಪಾರಾಯಣಮಾಡುತ್ತಿದ್ದ ಸಮಯದಲ್ಲಿ ಎ ಲ್ಲೋ ಒಂದು ಸ್ವರವನ್ನು ತಪ್ಪಲು ಸರಸವಾಣಿಯು ನಕ್ಕಳು. ಆಗ ದೂರ್ವಾಸರು ಕೋಪಾರುಣನೇತ್ರರಾಗಿ “ ಎಲೈ ಶಾರದೆಯೇ ! ನನ್ನ ಅವಮಾನವನ್ನು ನೋಡಿ ನೀನು ನಕ್ಕವಳಾದಕಾರಣ ನೀನು ಮನುಷ್ಯ ಜನ್ಮ ವಂ ಪಡೆ ” ಎಂದು ಶಪಿಸಿದರು. ಅದನ್ನು ಕೇಳಿ ಶಾರದೆಯು ನಡುಗುತ್ತಾ, ಭೂಸುರೇಂದ್ರನ ಪಾದಾರವಿಂದಕ್ಕೆರಗಿ ತನ್ನ ತಪ್ಪನ್ನು ಕ್ಷಮಿಸಬೇಕೆಂದು ಪ್ರಾರ್ಥಿಸಿದಳು. ದೂರ್ವಾಸರು ಅವಳ ಪ್ರಾರ್ಥನೆಯಿಂದ ಸ್ವಲ್ಪ ಕರುಣೆಯಂ ಪೊಂದಿ “ ಧರ್ಮ ಸಂಸ್ಥಾಪನೆಗಾಗಿ ಅವತರಿಸುವ ಶಂಕರಾಚಾರ್ಯರ ದರ್ಶನದಿಂದ ನಿನಗೆ ಶಾಪವಿಮೋಚನೆ ಯಾಗುತ್ತದೆ” ಎಂದರು. ಅದರಂತೆ ಶಾರದೆಯು ವಿಷ್ಣು ಮಿತ್ರಭಟ್ಟಾಚಾರ್ಯನೆಂಬ