ಪುಟ:ನನ್ನ ಸಂಸಾರ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ಶಂಕರಕಥಾಸರ ಬ್ರಾಹ್ಮಣನಿಗೆ ಮಗಳಾಗಿ “ ಉಭಯಭಾರತೀ ” ಎ:ಬ ಹೆಸರಂಪೊಂದಿ ಹಿಮಕರ ಭಟ್ಟಾಚಾರ್ಯನ ಮಗನೂ, ಬ್ರಹ್ಮಾವತಾರಿಯೂ ಆದ ಮಂಡನಮಿಶ್ರನನ್ನು ವಿವಾಹ ಮಾಡಿಕೊಂಡು ಸುಖವಾಗಿದ್ದಳು. ಶಂಕರಾವತಾರಕ್ಕಿಂತ ಮುಂಚೆ ಈಶಾನ, ವಿಷ್ಣು, ಕಮಲಾಸನ, ಕಾರ್ತವೀ ರ್ಯಾಂಶಗಳಿಂದ ಕೂಡಿದ ಆದಿಶೇಷನು ಸ್ವಾಮಿಸೇವೆಗಾಗಿ ಗೋವಿಂದಭಗವತ್ಪಾದ ರೆಂಬ ಹೆಸರಿನಿಂದ ಅವತರಿಸಿ, ಶುಕಶಿಷ್ಯರಾದ ಗೌಡಪಾದರಲ್ಲಿ ಬ್ರಹ್ಮೋಪದೇಶವಂ ಪಡೆದು, ಪತಂಜಲಿಯ ಬಳಿಯಲ್ಲಿ ವ್ಯಾಕರಣಾದಿ ಶಾಸ್ತ್ರಗಳಂ ಅಧ್ಯಯನಮಾಡಿ, ನರ್ಮದಾತೀರದಲ್ಲಿ ತಪಸ್ಸು ಮಾಡಿಕೊಂಡಿದ್ದರು. ಕಲಿ, ಕಾಮೋಭಯಾಂಶಗಳಿಂದ ಅಮರುಕರಾಯನು ಹುಟ್ಟಿ ಕಾಮಶಾಸ್ತ್ರಪ್ರ ವೀಣನಾದನು. ಕಾಲಭೈರವಾಂಶವು ಅಥರ್ವಣಾಂಶದಿಂದೊಡಗೂಡಿ ಉಗ್ರಭೈರವನೆಂಬ ವಾದಿಯಾಗಿ ಹುಟ್ಟಿತು. ತಂತ್ರಾಗಮಶಾಬರ ದೇವತಾಂಶಗಳು ಕಾಪಾಲಿಕರಾಗಿ ಹುಟ್ಟಿ ದರು. ಕುಬೇರನು ಕೇರಳಾಧಿಪನಾದನು. ವೀರಾವಳ್ಯಂಶಗಳು ಶಾಕ್ತರಾದರು. ರಾಕ್ಷ ಸರು ಚಾರ್ವಾಕರಾದರು. ದಾನವರು ದೈತದುರ್ಮತವಾದಿಗಳಾದರು. ದೈತ್ಯರು ಕ್ಷಪಣಕರಾದರು. ಗೌತಮ, ದಧೀಚಿ ಮೊದಲಾದವರು ನೀಲಕಂಠಭಟ್ಟ, ಅಭಿನವ ಗುಪ್ತ, ಭಾಸ್ಕರ, ಶ್ರೀಹರ್ಷರೂಪದಿಂದ ಹುಚ್ಟಿದರು. ಪ್ರಮಥಗಣಾಂಶದಿಂದ ಕ್ರಕ ಚಕಾಪಾಲಿಕರೂ ವಿಷ್ವಕ್ಸೇನಾದ್ಯಂಶಗಳಿಂದ ವೈಖಾನಸಪಾಂಚರಾತ್ರರೂ ಅವತರಿಸಿದರು. ಹೀಗೆ ದೇವಲೋಕವೇ ಭೂಲೋಕವಾಗಿಯೂ, ದೇವತೆಗಳೇ ಮನುಷ್ಯರಾ ಗಿಯೂ ಅವತರಿಸಿದರು. -+ಇಜೆ-- ತುರೀಯವಲ್ಲರೀ. -+ Gಇ-- ಧರ್ಮಗ್ಲಾನಿ ಮಪಾಚಿಕೀರ್ಷುರವನೌ ಕಾತ್ಯಾಯನೀವಲ್ಲಭಃ ಪ್ರಾದುರ್ಭೂಯ ಮಹೀಸುರೇಷು ವಿಹರ್ರ್ರ ಷಡ್ಡರ್ಶನೈಃ ಕಂದು ಕೈಃ |ಗೃಹ್ಣಾನೋ ಜನನೀನಿಯೋಗ ಮಮಿತಗ್ರಾಹಗ್ರಹಚ್ಛದ್ಮನಾ ಬಾಲ್ಯೆ ಪ್ರೌರಜನಂ ಚಕಾರ ಭವತಾತ್ ಸ ಶ್ರೇಯಸೇ ದೇಶಿಕಃ || ೧ || K ಶ್ರೀ ಶಂಕರ ಕೌಮಾರವರ್ಣನ ವು. - ರ್ತಿಕಮಾಸದಲ್ಲೊಂದುದಿನ ಆ ಅಗ್ರಹಾರದ ಬ್ರಾಹ್ಮಣರು ಸ್ವಯಂ ಭುಲಿಂಗೇಶ್ವರನಿಗೆ ಪೂಜೆಯಲ್ಲಿ ಸಮರ್ಪಿಸಿದ ಬಿಲ್ವ ಪುಷ್ಪಮಾಲಿಕೆ