ಪುಟ:ನನ್ನ ಸಂಸಾರ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಂಕರಕಥಾಸಾರ ೩೧ ರನ್ನೂ ಭಿಕ್ಷಕ್ಕೆ ಕರೆದಳು, (ಹಿಂದಿನ ಶಪಥದಂತೆ ಮಂಡನಪಂಡಿತನು ಸೋತದ್ದನ್ನೂ, ಅವನ ಕೊರಳಿನ ಮಾಲಿಕೆಯು ಬಾಡಿದ್ದನ್ನೂ ಕಂಡು ಆಕೆಯು ಈರೀತಿ ಹೇಳಿದಳು.) ಆಗ ಮಂಡನಮಿಶ್ರರು ಭಕ್ತಿಯಿಂದ ಮೇಲಕ್ಕೆದ್ದು ಆಚಾರ್ಯರಿಗೆ ನಮಸ್ಕರಿಸಿ ನಾನು ಮಾಡಿದ ಸನ್ಯಾಸಾಶ್ರಮನಿಂದೆಯನ್ನು ಕ್ಷಮಿಸಿ, ನನ್ನ ಅಜ್ಞಾನವನ್ನು ಹೋಗ ಲಾಡಿಸಿ, ಪುನೀತನನ್ನಾಗಿಮಾಡಿ ನನಗೂ ಸನ್ಯಾಸವನ್ನಿತ್ತು ತಮ್ಮ ಶಿಷ್ಯನನ್ನಾಗಿ ಮಾಡಿಕೊಳ್ಳಬೇಕು ಎಂದು ಪ್ರಾರ್ಥಿಸಲು ಶಂಕರಾಚಾರ್ಯರು ಮಂಡನಪಂಡಿತನಿಗೆ ಸನ್ಯಾಸವನ್ನು ಕೊಟ್ಟು, ಸತ್ಯಲೋಕಕ್ಕೆ ಹೋಗಬೇಕೆಂದು ಅಂತರಿಕ್ಷಕ್ಕೆ ಹಾರಿದ ಶಾರದೆಯನ್ನು ವನದುರ್ಗಾಮಂತ್ರದಿಂದ ಆ ಸಭೆಯಲ್ಲಿದ್ದ ಕೋಟ್ಯನುಕೋಟಿ ಪಂಡಿ ತರೆದುರಿಗೆ ಆಕರ್ಷಿಸಿ ಜನಗಳ ಹಿತಕ್ಕೋಸ್ಕರ ಭೂಮಿಯಲ್ಲಿ ನಿಲ್ಲಬೇಕೆಂದು ಆಕೆ ಯನ್ನು ಪ್ರಾರ್ಥಿಸಿದರು. ಆಗ ಶಾರದೆಯು ಪತ್ನಿ ಯ ಪತಿಯ ಅರ್ಧಾಂಗಿಯೆಂಬುದು ಲೋಕವಿದಿತ ವಷ್ಟೆ, ಅದರಂತೆ ನನ್ನ ಪತಿಯು ಸೋತರೆ ನಾವಿಬ್ಬರೂ ಸೋತಂತಾಗುತ್ತೇವೆಯೇ? ನಿಮಗೆ ಅರ್ಧಜಯ ಬಂದಿರುವುದಲ್ಲದೇ ಪೂರ್ಣಒಯವಲ್ಲ; ನನ್ನನ್ನು ಸೋಲಿಸಿದಹೊ ರತು ಪೂರ್ಣಜಯ ಬರಲಾರದೆಂದಳು. ಆಚಾರ್ಯರು ಮೊದಲು ವಾದಕ್ಕೊಪ್ಪದಿದ್ದರೂ ಅನಂತರ ಒಪ್ಪಿದರು, ವಾದೋ ಪಕ್ರಮವಾಯಿತು. ಶಾರದೆಯು ಆಚಾರ್ಯರನ್ನು ಕಾಮಶಾಸ್ತ್ರದಲ್ಲಿ ಪ್ರಶ್ನಿಸಲಾರಂಭಿಸಿದಳು. ಆಚಾರ್ಯರು ಸರಿಯಾದ ಉತ್ತರವನ್ನೀಯದಿದ್ದರೆ ಸರ್ವಜ್ಞತ್ವಕ್ಕೆ ಭಂಗಬ ರುವುದು ಉತ್ತರವನ್ನಿತ್ತರೆ ಯತಿಧರ್ಮಕ್ಕೆ ಭಂಗಬರುವುದು ಎಂದು ಯೋಚಿಸಿ, ಅದನ್ನು ತಿಳಿದುಕೊಂಡುಬರಲು ಒಂದುತಿಂಗಳು ವ್ಯವಧಾನವನ್ನು ತೆಗೆದುಕೊಂಡು ಸಶಿಷ್ಯರಾಗಿ ಹೊರಟರು. ಅನಂತರ ಶಂಕರರು ಅಮೃತಪುರವೆಂಬ ಪಟ್ಟಣದ ಹೊರಗೆ ನಿಂತು, ಆ ದೇಶದ ರಾಯನು ಮೃತನಾಗಿರಲು ಅವನ ಮಹಿಷಿಯರು ಪತಿಯ ಶವ ವನ್ನು ಸಕಲರಾಜ ಮರ್ಯಾದೆಗಳೊಡನೆ ಸ್ಮಶಾನಕ್ಕೆ ತೆಗೆಯಿಸಿಕೊಂಡುಹೋಗಿ ಅಳು ತ್ತಿರುವುದನ್ನು ಕಂಡು' ಶಿಷ್ಯನನ್ನು ಕುರಿತು "ಎಲೈ ಸನಂದನೇ ! ಇಲ್ಲಿ ನೋಡು; ಜಾಣೆ ಯರಾದ ಹಲವುಮಂದಿ ಯುವತಿಯರು ಸತ್ರ ತಮ್ಮ ಪತಿಯ ಸುತ್ತಲೂ ಪ್ರಲಾಪಿಸು