ಪುಟ:ನನ್ನ ಸಂಸಾರ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಂಕರಕಥಾಸಾರ ೩೩

ಭಂಡೆಯ ಪೊಟರೆಯಲ್ಲಿಟ್ಟು, ಅದನ್ನು ಕಾಪಾಡುವಂತೆ ಶಿಷ್ಯರಿಗೆ ಹೇಳಿ ತಮ್ಮ ಆತ್ಮ ವನ್ನು ಅಮರುಕರಾಯನ ದೇಹಕ್ಕೆ ಪ್ರವೇಶಗೊಳಿಸಲು, ಅಮರುಕರಾಯನು ಮೂರ್ಛೆಹೋಗಿ ಎದ್ದವನಂತೆ ಎದ್ದನು. ಅದನ್ನು ನೋಡಿ ಆ ರಾಜನ ಪೂರ್ವವಯಸ್ಕರೂ ಸುಂದರಿಗಳೂ ಆದ ಪತ್ನಿಯರು, ಮತ್ತು ಮಂತ್ರಿಗಳು ಪುರೋಹಿತನಿಂದ ಅನೇಕ ಶಾಂತಿಕರ್ಮಗಳಂ ಮಾಡಿಸಿ ರಾಜನನ್ನು ಮಂಗಳ ವಾದ್ಯಘೋಷದೊಡನೆ ಪಟ್ಟಣಕ್ಕೊಯ್ದರು. ಆಚಾರ್ಯರು ನೃಪತಿಯ ಶರೀರದಲ್ಲಿ ದ್ದು ಬಹಳ ನೀತಿಯಿಂದ ರಾಜ್ಯವನ್ನಾ ಳುತ್ತಾ ಅಂತಃಪುರದ ಕಾಂತೆಯರ ಸಹವಾಸದಿಂದ ಕಾಮಶಾಸ್ತ್ರವನ್ನು ತಿಳಿದರು. ಇವರು ರಾಜ್ಯವಾಳತಕ್ಕ ಕಾಲದಲ್ಲಿ ಕಾಲಕಾಲಕ್ಕೆ ಮಳೆಯಾಗಿ ದೇಶವೆಲ್ಲಾ ಸುಭಿಕ್ಷ ವಾಗಿತ್ತು. ಆ ಭೂಮಿಪಾಲನ ಪಟ್ಟ ಮಹಿಷಿಯಾದ ಕನಕಮಂಜರಿಯೆಂಬುವಳು ಆತನ ಅಮಾ ನುಷಪ್ರಜ್ಞಾ ವಿಶೇಷಕ್ಕೆ ಆಶ್ವರ್ಯವನ್ನು ಹೊಂದಿ, ತನ್ನ ಮಂತ್ರಿಯಂ ಕರೆದು ಆಯ್ಯ! ಈ ಶರೀರವು ನಮ್ಮ ಪತಿಯದೇ ಹೊರತು ಆತ್ಮವು ಪತಿಯದಲ್ಲ. ಯಾವನೋ ಒಬ್ಬ ಯೋಗಿವರ್ಯನು ನಮ್ಮ ಪತಿಯ ದೇಹವನ್ನು ಪ್ರವೇಶಿಸಿರುವಂತೆ ತೋರುತ್ತದೆ, ಆದ್ದರಿಂದ ಈ ಪ್ರಾಂತ್ಯದಲ್ಲಿರತಕ್ಕ ಶವಗಳನ್ನೆಲ್ಲಾ ಸುಡಿಸಬೇಕೆಂದಾಜ್ಞಾಪಿಸಲು. ಅವನು ಅದರಂತೆ ಸಿಕ್ಕಿದ ಶವಗಳನ್ನು ಸುಡಿಸುತ್ತಾ ಶಂಕರಾಚಾರ್ಯರ ಶವವಿದ್ದಸ್ಥ ಳಕ್ಕೂ ಬಂದು, ಆಚಾರ್ಯರ ದೇಹವನ್ನು ನೋಡಿ ಅದನ್ನೂ ಬೆಂಕಿಯಮೇಲಿಡಿಸಿದನು. ಆಗ ಶಿಷ್ಯರು, ಆಚಾರ್ಯರ ಸಮಿಾಪಕ್ಕೆ ಬಂದು "ತತ್ತ್ವಮಸಿ, ತತ್ತ್ವಮಸಿ, ತತ್ತ್ವಮಸಿ ರಾಜE! ಎಂದು ಸ್ತೋತ್ರಮಾಡಲು ಆಚಾರ್ಯರು ಆ ದೇಹವನ್ನು ಬಿಟ್ಟು ಗಿಣಿಯರೂಪದಿಂದ ಹಾರಿಬಂದು, ತಮ್ಮ ದೇಹವು ಸುಡುತ್ತಾ ಇರುವುದುಂ ಕಂಡು ಅದರಲ್ಲಿ ಪ್ರವೇಶಮಾಡಿ- ( * ಶ್ರೀಮತ್ಪಯೋನಿಧಿ ನಿಕೇತನಚಕ್ರಪಾಣೇ | ಭೋಗೀಂದ್ರಭೋಗಮಣಿರಂಜಿತಪುಣ್ಯ ಮೂರ್ತೇ || ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿ ಪೋತ | ಲಕ್ಷ್ಮೀನೃಸಿಹ್ಮ ಮಮ ದೇಹಿ ಕರಾವಲಂಬಮ್ ||೧|| * ಭಕ್ತರಾದ ವಾಚಕರು ಆಚಾರ್ಯರಿಂದ ರಚಿತವಾದ ಈ ಕರಾವಲಂಬ ಸೋತ್ರವನ್ನು ನಿತ್ಯ ಪಾರಾಯಣದಲ್ಲಿಡುವುದು ಶ್ರೇಯಸ್ಕರವು.