ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



10
ಕಾದಂಬರಿ ಸಂಗ್ರಹ

ವರನ್ನು ಪ್ಲೇಗು ತಗಲಿದ ಹುಡುಗಿಯೊಡನೆ ಬಲವಂತವಾಗಿ ಊರು ಬಿಟ್ಟು ಹೊರಡಿಸಿ ಬಿಟ್ಟರು. ಅವರು ಧೈರ್ಯವನ್ನು ಹೊಂದಿ ಕ್ಷೀರಪುರಕ್ಕೆ ಮೂರು ಮೈಲಿ ದೂರದಲ್ಲಿದ್ದ ನಾಗಪುರಕ್ಕೆ ತಮ್ಮನೆಂಟರೊಬ್ಬರ ಮನೆಗೆ ಹೋಗೋಣವೆಂದುಹೊರಟರು. ನಾಗಪುರಕ್ಕೂ ಬಂದದ್ದಾಯಿತು. ಇವರು ಅಲ್ಲಿಗೆ ಹೋದುದು ಮಹಾನವಮಿಯ ದಿನ ಮಧ್ಯಾಹ್ನ ನಾಲ್ಕು ಘಂಟೆ ಸಮಯ, ಇವರು ಬಂದ ವಿಷಯವನ್ನು ಎಷ್ಟೋ ಗುಟ್ಟಿನಲ್ಲಿಟ್ಟಿರಬೇಕೆಂದು ಮಾಡಿಕೊಂಡಿದ್ದಾಗ್ಯೂ ಸಾಯಂಕಾಲ ೮ ಘಂಟೆಯೊಳಗಾಗಿ ಊರಿಗೆಲ್ಲವೂ ಈ ಸುದ್ದಿ ತಿಳಿದೇ ಹೋಯಿತು. ಮೊದಲು ವಿನಾಯಕ ಶಾಸ್ತ್ರಿಗಳು ಇಳಿದುಕೊಳ್ಳಕ್ಕೆ ತಕ್ಕ ಸ್ಥಳವೇ ದೊರೆಯಲಿಲ್ಲ. ಹೇಗೋ ಕಷ್ಟಪಟ್ಟು ಸಾಯಂಕಾಲ ಏಳುಗಂಟೆ ಹೊತ್ತಿಗೆ ಬಂಧುವೊಬ್ಬನ ಮನೆಯ ಬೀದಿ ಬಾಗಲಲ್ಲಿ ರೋಗಿಯನ್ನು ಮಲಗಿಸಿಕೊಂಡು ತಾವೂ ಕೂತುಕೊಂಡರು. ೯ ಘಂಟೆ ಹೊತ್ತಿಗೆ ಇಳಿದಿದ್ದ ಮನೆ ಬಾಗಲಿಗೆ ದೊಣ್ಣೆಗಳನ್ನು ಹಿಡಿದುಕೊಂಡು ಒಂದು ಭಯಂಕರವಾದ ಮನುಷ್ಯರ ಗುಂಪು ಬಂದಿತು. ಅವರಲ್ಲಿ ಒಬ್ಬೊಬ್ಬರು ಒಂದೊಂದುರೀತಿ ಗಳಹುವುದಕ್ಕಾರಂಭಿಸಿದರು. ಹತ್ತು ಘಂಟಿಯೊಳಗಾಗಿ ಈ ಊರನ್ನು ಒಟ್ಟು ರೋಗಿಯನ್ನು ಹೊರಕ್ಕೆ ತೆಗೆದುಕೊಂಡು ಹೋದರೆ ಸರಿ, ಇಲ್ಲವಾದರೆ ಬಹಳ ಅನರ್ಥವಾಗುವುದೆಂದು ಗುಂಪಿಗೆ ಗುಂಪೇ ಕೂಗತೊಡಗಿತು. ವಿನಾಯಕ ಶಾಸ್ತ್ರಿಗಳ ಮನೆಯವರ ಮನಸ್ಸು ಈಗ ಹೇಗಿದೆಯೆಂಬುದು ಅನುಭವದವಿನಹ ಗೊತ್ತಾಗಲಾರದಾದ್ದರಿಂದ ಅದನ್ನು ಹೇಳುವುದಿಲ್ಲ. ಅಂತು ವಿನಾಯಕ ಶಾಸ್ತ್ರಿಗಳು ಆ ಊರನ್ನೂ ಬಿಟ್ಟು ಹೊರಡಲೇಬೇಕಾಯಿತು. ಅವರ ಕಷ್ಟ ಜಗದೀಶ್ವರನೊಬ್ಬ ಬಲ್ಲ. ಅವರಿಗೆ ಏನೂ ತೋರದೆ ಹಣೆಯಲ್ಲಿ ಒರದಂತಾಗಲೆಂದು ಯೋಚಿಸಿ ಸ್ವಸ್ಥಳವಾದ ಹರಪ್ರರಕ್ಕೆ ಪ್ರಯಾಣ ಮಾಡಲು ನಿಷ್ಕರ್ಮಿಸಿದರು. ರಾತ್ರಿ ಹನ್ನೆರಡು ಗಂಟೆ ಹೊತ್ತಿಗೆ ವಿನಾಯಕ ಶಾಸ್ತ್ರಿಗಳು ಎರಡು ಬಂಡಿಗಳನ್ನು ಹೊಡಿಸಿಕೊಂಡು ಬಂದು ಅದರಲ್ಲೊಂದರಲ್ಲಿ ರೋಗಿಯನ್ನೂ ಸಮೀಪದಲ್ಲಿ ತಮ್ಮ ತಾಯಿಯನ್ನೂ ಕುಳ್ಳಿರಿಸಿ ಇನ್ನೊಂದರಲ್ಲಿ ಕಡಮೆಯವರೆಲ್ಲರೂ ಕುಳಿತು ಪ್ರಯಾಣ ಮಾಡಿದರು.

ಗಾಡಿಯು ಮೆಲ್ಲ ಮೆಲ್ಲನೆ ಹೋಗುತ್ತಿತ್ತು. ರೋಗಿಯ ಸಂಕಟವೂ ಆರ್ತನಾದವೂ ಕ್ಷಣೇಕ್ಷಣೇ ಹೆಚ್ಚುತ್ತಿತ್ತು. ಈ ಭಯಂಕರ ಘಟನೆಯನ್ನು ನೋಡಿದವರ ಎದೆಯು ಒಡೆದು ಹೋಗುವಂತಿತ್ತು. ನಾಗಪುರಕ್ಕೂ ಹರಪುರಕ್ಕೂ ಹತ್ತು ಮೈಲು ದೂರ. ವಿಜಯದಶಮಿಯದಿನ ಬೆಳಗಿನಝಾವ ನಾಲ್ಕು ಗಂಟೆ ಸಮಯದಲ್ಲಿ ಈ ಪ್ರಯಾಣಿಕರ ಬಂಡಿಗಳು ನಾಗಪುರ ಹರಪುರಗಳ ಮಧ್ಯ ದಾರಿಯಲ್ಲಿರುವ ಒಂದು ಕೆರೆಯ ಏರಿಯ ಮೇಲೆ ಬರುತ್ತಿದ್ದಾಗ ಲಕ್ಷ್ಮೀ ದೇವಿಯು ಈ ಭೂಲೋಕವನ್ನು ಬಿಟ್ಟು