ಪುಟ:ನನ್ನ ಸಂಸಾರ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಶಂಕರಕಥಾಸಾರ ೪೯


ಚಾರರು, ಚಿದ್ವಿಲಾಸಾಚಾರರು, ವಿಷ್ಣುಗುಪ್ತಾಚಾರರು, ಶುದ್ದ ಕೀರ್ತ್ಯಾಚಾರರು, ಭಾನುಮರೀಚ್ಯಾಚಾರರು, ಕೃಷ್ಣ ದರ್ಶನಾಚಾರರು, ಬುದ್ದಿ ವೃಧ್ಯಾಚಾರರು, ವಿರಿಂಚಿ ಪಾದಾಚಾತ್ಯರು, ಆನಂದಗಿರ್ಯಾಚಾರರು, ಹಿತ್ಸುಖಾಚಾರರು, ಶುದ್ಧಾಂತಾಚಾರರು, ಮುನೀಶ್ವರಾಚಾರರು, ಪರಮತಕಾಲಾನಲಾಚಾರರು, ದಿವಾಕರಾತಾರರು, ಲಕ್ಷ್ಮಣಾ ಚಾರರು, ತ್ರಿಪುರಕುಮಾರಾಚಾರರು, ಗಿರಿಜಾಕುಮಾರಾಚಾರರು, ಬಟುಕನಾಥಾಚಾರರು, ಶುದ್ಧಾನಂದಗಿರಾಡಾರರು, ಧೀಮದಾಚಾರರು ಇತ್ಯಾದಿ ಶಿಷ್ಯರಿಂದ ಕೂಡಿ ಸುಧನ್ವ ರಾಜನಿಂದ ಹಿಂಬಾಲಿಸಲ್ಪಡುತ್ತಾ ಮೊದಲು ಸೇತುವಿನ ಕಡೆ ಹೊರಟರು.


' ದಾರಿಯಲ್ಲಿ ಆಚಾರ್ಯರು ಮಧ್ಯಾರ್ಜುನಕ್ಷೇತ್ರಕ್ಕೆ ಬಂದು ಮಧ್ಯಾರ್ಜುನೇ ಶ್ವರನನ್ನು ಪೂಜಿಸಿ "ಸ್ವಾಮಿಾ ! ನೀನು ಸರ್ವಜ್ಞನಾದ್ದರಿಂದ ನಿಗಮಾದಿ ತಾತ್ಪರ ಗೋಚರವಾದದ್ದು, ರೈತವೇ ? ಅಥವಾ ಅದೈತವೇ ?” ಎಂದು ಪ್ರಾರ್ಥಿಸಲು, ಈಶ್ವರನು ಮಧ್ಯಾರ್ಜುನೇಶಲಿಂಗದಿಂದ ಸಾಕಾರವಾಗಿ ದರ್ಶನವನ್ನು ಕೊಟ್ಟು ತನ್ನ ಬಲಗೈಯನ್ನು ಮೇಲಕ್ಕೆತ್ತಿ ಗಂಭೀರವಾದ ಮಾತಿನಿಂದ « ಸತ್ಯ ಮದ್ಯೆತಂ” ಎಂದು ಮೂರುಸಲ ಹೇಳಿ ಅಂತರ್ಷಿತನಾದನು.
    ಈ ಮಹದ್ಯಾಪಾರವನ್ನು ನೋಡುತ್ತಿದ್ದ ಹಿನುಗೆ ಬಹಳವಾದ ಆಶ್ಚರ್ಯ ವಾಯಿತು.
    ಅನಂತರ ಆ ದೇಶದಲ್ಲಿದ್ದವರೂ ಮತ್ತು ಆ ದೇವರ ಭಕ್ತರೂ ಶ್ರೀ ಶಂಕರ ನನ್ನೇ ಸದ್ಗು ರುವನ್ನಾಗಿ ಮಾಡಿಕೊಂಡು (ಪಂಚ ಉಮಾ, ಗಣಪತಿ, ಈಶ್ವರ, ಸೂರ್ಯ, ಅಚ್ಯುತ,) ಪೂಜಾರತರಾಗಿಯೂ, ಪ್ರಾತಸ್ನಾನಾದಿಗಳಿಂದ ವಿಶುದ್ಧರಾಗಿಯೂ, ಪಂಚೆ ಯಜ್ಞ ಪರಾಯಣರಾಗಿಯೂ, ಶ್ರುತ್ಯುಕ್ತ ಕರಾನುಯಾಯಿಗಳಾಗಿಯೂ, ಶುದ್ದಾದ್ವೈತ ಪರಾಯಣರಾಗಿಯೂ, ಆದರು.
   ಹೀಗೆ ಆ ದೇಶದವರನ್ನು ಅದ್ದೆ ತಿಗಳನ್ನಾಗಿ ಮಾಡಿ ಪ್ರಮಥಗಣಯುಕ್ತನಾದ ಈಶ್ವರನಂತೆ ಆಚಾರರು ಶಿಷ್ಯಸಹಿತರಾಗಿ ರಾಮೇಶ್ವರಕ್ಕೆ ಹೋದರು.
                 ಶಾಕ್ತಮತಖಂಡನವು.
   ಆಚಾರರು ಅಲ್ಲಿರುವಾಗೈ ಗಿರಿಜಾರ್ಚಾರತರಾದ ಕೆಲವರು ಬಂದು ಆಚಾರ್ ರೆದುರಿಗೆ ವಾದಕ್ಕೆ ನಿಲ್ಲಲು ಆಚಾರರು ಅವರನ್ನು ಶ್ರುತ್ಯಪ್ರಮಾಣಗಳಿಂದ ಗೆದ್ದು ಅವರನ್ನು ಅದ್ವೈತಿಗಳನ್ನಾಗಿ ಮಾಡಿದರು.