ಪುಟ:ನನ್ನ ಸಂಸಾರ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಕರಕಥಾಸಾರ ೬೩

      ಅದಕ್ಕೆ ದೇಶಿ=ರು "ಏಕಮೇವಾದ್ವಿತೀಯಂ ಬ್ರಹ್ಮ' ಎಂಬಂತೆ ನಿತ್ಯಸ್ವರೂ ಪನಾದ ಪರಮಾತ್ಮನು ಓರ್ವನೇ; ಅವನಿಂದಲೇ ತ್ರಿಮೂರ್ತಿಗಳೂ ಹುಟ್ಟುತ್ತಾರೆ. ಮತ್ತು ಲಯಹೊಂದುತ್ತಾರೆ ಕಲೆಗಳಿಗೆ ಎಕಲೆಗಳು ಹೇಗೋಹಾಗೆಯೇ ಆ ತ್ರಿಮೂರ್ತಿಗಳಿಂದಲೂ ಉತ್ಪನ್ನರಾದವರಿದಾರೆ; ರುದ್ರನಲ್ಲಿ ಏಕಾದಶರುದ್ರರೆಂದು ಪ್ರಸಿದ್ಧರಾದ ಹನ್ನೊಂದುಜನ ಅಂಶಭೂತರುಂಟು; ಪರಬ್ರಹ್ಮನಿಗಿರುವ ಶಕ್ತಿಯು, ತ್ರಿಮೂರ್ತಿಗಳಿಗೆ ಹೇಗಿಲ್ಲವೋ ಹಾಗೆಯೇ ತ್ರಿಮೂರ್ತಿಗಳಿಗಿರುವ ಶಕ್ತಿಯು, ತದಂಶೀಯರಿಗಿಲ್ಲವು; ಆದ್ದರಿಂದ ನಿಮ್ಮ ಮಲ್ಲಾರಿಗೆ ಅಷ್ಟು ಪ್ರಾಶಸ್ತ್ಯವು ಹೇಗೆ ಬಂದೀತು? ಶ್ವವೇಷವನ್ನು ಧರಿಸುವದು; ನಿತ್ಯಕರ್ಮವನ್ನು ಬಿಡುವುದು; ತ್ರಿಕಾಲದಲ್ಲಿಯೂ ನಾಟ್ಯಾಸಕ್ತರಾಗಿರುವುದು; ಇತ್ಯಾದಿ ಬ್ರಾಹ್ಮಣ್ಯ ವಿಘಾತಕಗಳಾದ ಕರ್ಮಾಚರಣೆಯುಳ್ಳ ನಿಮ್ಮ ಮುಖಾವಲೋಕನದಿಂದ ಸೂರ್‍ಯದರ್ಶನವನ್ನು ಮಾಡಬೇಕು” ಎಂದು ಹೇಳಿ, ನಮಸ್ಕರಿಸಿ ಕ್ಷಮಾಪಣೆಯಂ ಬೇಡಿದ ಅವರಿಗೆಲ್ಲಾ ಪ್ರಾಯಶ್ಚಿತ್ತವಂ ಮೂಡಿಸಿ ಅವರನ್ನೆಲ್ಲಾ ಶುದ್ಧಾದ್ವೈತಿಗಳಾದ ಬ್ರಾಹ್ಮಣರನ್ನಾಗಿ ಮಾಡಿದರು.
    ಅನಂತರ ಆಚಾರ್‍ಯರು, ಉದಯನಾದಿ ನ್ಯಾಯವಾದಿಗಳನ್ನೂ, ತಪ್ತಮುದ್ರಾ ಧಾರಿಗಳಾದ ವೈಷ್ಣವರನ್ನೂ, ಲಿಂಗಧಾರಿಗಳಾದ ಶೈವರನ್ನೂ, ವಾಮಾಚಾರಪ್ರವಿಷ್ಟರಾದ ಶಾಕ್ತರನ್ನೂ, ರಕ್ತಗಂಧಾರ್ಚನೆಯನ್ನು ಮಾಡುತ್ತಿದ್ದ ಸೌರರನ್ನೂ, ನರ ಬಲಿಯಂ ಸಮರ್ಪಿಸುವ ಕಾಪಾಲಿಕರನ್ನೂ, ಉಚ್ಛಿಷ್ಟಭಕ್ಷಕರಾದ ಗಾಣಾಪತ್ಯರನ್ನೂ ವಾದದಲ್ಲಿ ಸೋಲಿಸಿ, ಸಪ್ರಮಾಣವಾಗಿ ಅನುಭವನಿದರ್ಶನವಂ ತೋರಿಸಿ ಎಲ್ಲರನ್ನೂ ವಶಪಡಿಸಿಕೊಂಡರು.
    ಇಲ್ಲಿಂದ ಆಚಾರ್‍ಯರು  'ಯಮಂಹ ಯಜ್ಞೋಗಚ್ಛತಿ' ಎಂದು ಹೇಳಿ ವಾದಕ್ಕೆ ಬಂದ ಕಾಮಕರ್ಮನೇ ಮೊದಲಾದ ಯಮೋಪಾಸಕರನ್ನೂ, ಇಂದ್ರಾದ್ಯಷ್ಟದಿ ಕ್ಪಾಲಕೋಪಾಸಕರನ್ನೂ, ಸಾಂಖ್ಯಮತೋದ್ಭವರಾದ ಪ್ರಧಾನವಾದಿಯೇ ಮೊದಲಾದವರನ್ನೂ , ಪಿತೃದೇವತೋಪಾಸಕರಾದ ಶಂಖಪಾದನೇ ಮೊದಲಾದವರನ್ನೂ ಮತ್ತು ಬೇತಾಳೋಪಾಸಕರನ್ನೂ ಸೋಲಿಸಿ ಪಶ್ಚಿಮದೇಶಕ್ಕೆ ಹೋದರು.
    ಆಚಾರ್‍ಯರು ಅಲ್ಲಿ ಶಿಷ್ಯರಿಗೆ ಭಾಷ್ಯಪ್ರವಚನ ಮಾಡಿಸುತ್ತಿದ್ದ ಸಮಯದಲ್ಲಿ ಹರದತ್ತನೆಂಬುವನು ಬಂದು ಶೈವಸೂತ್ರಭಾಷ್ಯಕರ್ತನೂ, ಸ್ವಗುರುವೂ, ಆದ ನೀಲಕಂಠನನ್ನು ಪ್ರಶಂಸಮಾಡಲು ಆಚಾರ್‍ಯರು ಆ ನೀಲಕಂಠನನ್ನು ವಾದದಲ್ಲಿ ಸೋಲಿಸಲು