ಪುಟ:ನನ್ನ ಸಂಸಾರ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಶಂಕರಕಥಾಸಾರ

                                            ೬೫

ಮತಾನುಯಾಯಿಗಳಾಗಿದ್ದರು. ಉಳಿದವರೆಲ್ಲರೂ ಶಂಕರಚರಣಸೇವಾಧುರೀಣರೆನಿ ಸಿದರು. ಈ ಪ್ರಕಾರವಾಗಿ ಆಚಾರ್ಯರು ಆಸೇತುಓಮಾಚಲದಮಧ್ಯದಲ್ಲಿರುವ ಕರ್ಮ ಭೂಮಿಯಲ್ಲಿ ಪ್ರಧಾನಮಲ್ಲ ನಿಬರ್ಹಣನ್ಯಾಯದಿಂದ ೬೩೨೦ ಮಂದಿಗಳನ್ನು ವಾದದ ಲ್ಲಿ ಸೋಲಿಸಿದರು, ಆಗ ಕರ್ಮಯೋಗ್ಯವಾದೀಭರತಖಂಡವು ಜ್ಞಾನಮಯವಾಗಿತ್ತು, ಹೀಗೆ ಪರಮಾತ್ಮನು ಭೂಮಿಯಲ್ಲಿ ಮನುಷ್ಯಾವತಾರವಂಗೈದು ಜನಗಳ ಮನಸ್ಸಿನಲ್ಲಿ ಅಡಗಿದ್ದ ಅಜ್ಞಾನಾಂಧಕಾರವನ್ನು ಜ್ಞಾನವೆಂಬಸೂರ್ಯನ ಬೆಳಕಿನಿಂದ ಹತ್ತೀರಾಶಿಗೇ ಬಿದ್ದ ಬೆಂಕಿಯಂತೆ ತೊಲಗಿಸಿದನು. ಅವರ ಶಿಷ್ಯರೂ ಮಾನವರ ದೇಹದಲ್ಲಿ ಜ್ಞಾನರತ್ನಾ ಪಹಾ ರಕ್ಕೋಸ್ಕರ ಅಡಗಿದ್ದ ಕಾಮ, ಕ್ರೋಧಾದಿತಸ್ಕರರನ್ನು ತಮ್ಮ ಸದುಕ್ಕಿಸದುಪದೇಶ ಗಳೆಂಬ ತೀಕ್ಷ್ಣಗಳಾದ ನಖಗಳಿಂದ ತಿವಿದು ಧ್ವಂಸಮಾಡಿ, ಜ್ಞಾನಮಾರ್ಗಪ್ರತಿ ಸ್ಥಾಪನೆಯಂಗೈದರು.

               ತ್ರಯೋದಶವಲ್ಲರೀ
ಭಗಂಧರಾರ್ತಿಭಂಗಮೇತ್ಯ ಪದ್ಮಪಾದತೋ ಗುರು? ನಿಕೃತ್ತ ದುರ್ಮತಸ್ತು ಗೌಡಪಾದಮುರೈರ್ಯುತಮ್ | ವಿಧಾಯ ವಾಗೃಹಶ್ವ ಪೀಠಸಂಸ್ಥಿ ತಸ್ಸು ರೇಶ್ವರಮ್ ಬದರ್ಯವನ್ಯುಪಾಂತಮಾನ ತತ್ರಸನ್ನಿವೇಶ್ಯಚ ||

ಶಂಕರಾಚಾರ್ಯರು ಹಿಂದೆ ಅಭಿನವಗುಪ್ತನೆಂಬ ಶಕ್ತ್ಯುಪಾಸಕ (ಮಂತ್ರವಾದಿ) ನನ್ನು ಸೋಲಿಸಿದ್ದರಷ್ಟೆ; ಅವನು ಆಚಾರ್ಯರ ಶಿಷ್ಯನಾಗಿ ಅವರ ಜೊತೆಯಲ್ಲಿಯೇ ಇದ್ದು ದಿಗ್ವಿಜಯಾನಂತರ ಅಭಿಚಾರ ಪ್ರಯೋಗಮಾಡಿದನು. ಇದರಿಂದ ಆಚಾರ್ಯರಿಗೆ ಭಗಂದರವೆಂಬ ಜಾಡ್ಯವು ಬಂತು, ಈ ವಿಷಯವು ಆಚಾರ್ಯರ ಶಾಟೆಯನ್ನು ಒಗೆಯುತ್ತಿದ್ದ ತೋಟ ಕಾಚಾರ್ಯರಿಗೆ ತಿಳಿಯಲು ಅವರು ಆಚಾರರಿಗೆ ತಿಳಿಸಿದರು.

ಅದಕ್ಕೆ ಆಚಾರ್ಯರು ಈ ಕರ್ಮವ್ಯಾಧಿಗೆ ಚಿಕಿತ್ಸೆಯು ಬೇಡವೆನ್ನಲು ತೋಟ ಕರೇ ಮೊದಲಾದ ಶಿಷ್ಯರು ಅನೇಕ ರಒವೈದ್ಯರನ್ನು ಕರೆತಂದರೂ ರೋಗವು ಪರಿಹಾ ರವಾಗಲಿಲ್ಲ.