ಪುಟ:ನವೋದಯ.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

436

ಸೇತುವೆ

"ಗೊತ್ತಿಲ್ಲ! ನೀನ್ಯಾಕೆ ಹೆದರ್ಕೋತಿಯಾ?"
ಸುನಂದಾ ಮುಗುಳು ನಕ್ಕಳು.
ಜಯದೇವ ಹೊರಡುವ ಹಿಂದಿನ ದಿನ ನಂಜುಂಡಯ್ಯ ಹೇಳಿದರು:
"ಸೋಮವಾರ ಅರ್ಧ ದಿನವೂ ರಜಾ ಬೇಕಾಗೊಲ್ಲ. ಶಾಲೆ ಶುರುವಾಗೋದ
ರೊಳಗೇ ನೀವು ಬಂದ್ಬಿಡ್ತೀರಾ."
"ಹೌದು."
"ನೀವು ಕೆಲಸಕ್ಕೆ ಸೇರಿದ್ಮೇಲೆ ಒಂದು ದಿವಸವೂ ರಜಾ ತಗೊಂಡಿಲ್ವಲ್ಲಾ ಜಯ
ದೇವ್ ಹಾಗಾದರೆ?"
"ಇನ್ನು ದೀಪಾವಳಿ ಬರುತ್ತಲ್ಲಾ ಸಾರ್. ಆಗ ತಗೊಳ್ಳೋದು ಇದ್ದೇ ಇದೆ."
"ಗೊತ್ತು!"
ಸಮ್ಮೇಳನದಲ್ಲಿ ಆಗಬಹುದಾದ ಚರ್ಚೆಗಳ ಪ್ರಸ್ತಾಪ ಬಂತು.
"ನಮ್ಮದೇನಾದರೂ ನಿರ್ಣಯ ಮಂಡಿಸ್ಬೇಕೆ ಲಕ್ಷಪ್ಪಗೌಡರೆ?" ಎಂದು ಜಯ
ದೇವ ಕೇಳಿದ.
"ಸಮ್ಮೇಳನ ಅಂದ್ಮೇಲೆ ಠರಾವುಗಳು ಇದ್ದೇ ಇರ್ತವೆ," ಎಂದರು
ನಂಜುಂಡಯ್ಯ, ಪರಿಹಾಸ್ಯದ ಧ್ವನಿಯಲ್ಲಿ.
"ನಮ್ಮ ಶಾಲೆಗೆ ಇನ್ನೊಬ್ಬರು ಉಪಾಧ್ಯಾಯರು ಬೇಕೂಂತ ನಿರ್ಣಯ ಪಾಸು
ಮಾಡಿಸಿ," ಎಂದರು ಲಕ್ಕಪ್ಪಗೌಡರು, ಬಹಳ ದಿನಗಳ ಬಳಿಕ ಒಮ್ಮೆ ನಗುತ್ತ.
ಆ ಸಂಜೆ ಆಕಸ್ಮಿಕವಾಗಿ ಕಾಣಲು ಸಿಕ್ಕಿದ ತಿಮ್ಮಯ್ಯ, ಜಯದೇವನ ಪ್ರಯಾಣ
ವಿಷಯ ತಿಳಿದಗ ಅಂದರು:
"ಕೇಳ್ದೋರು ನಡುಗಿ ಹೋಗ್ಬೇಕು. ಅಂಥಾದ್ದೊಂದು ಭಾಷಣ ಹೊಡೆದ್ಬನ್ನಿ
ಜಯದೇವರೆ. ಅವರಿಗೆ ಭೂತ ರಾಜ್ಯದ ಕಥೆ ಹೇಳಿ!"
...ಬಸ್ಸಿನಲ್ಲಿ ಕುಳಿತು ಆ ಊರು ತಲುಪುವವರೆಗೊ ನಿರೀಕ್ಷೆಯೇ_ಸಮ್ಮೇಳನ
ಹಾಗಿರಬಹುದು, ಹೀಗಿರಬಹುದು, ಎಂದು. ಜಿಲ್ಲೆಯ ವಿದ್ಯಾಧಿಕಾರಿ ಅಧ್ಯಕ್ಷರು.
ಸಂಸ್ಥಾನದ ವಿದ್ಯಾಸಚಿವರೇ ಉದ್ಘಾಟನೆಗೆ ಬರಲು 'ದಯವಿಟ್ಟು ಒಪ್ಪಿರುವರೆಂದು
ಸಮ್ಮೇಳನದವರು ಪ್ರಕಟಿಸಿದ್ದರು. ಪ್ರತ್ಯೇಕ ಭಾಷಣದ ಸಾಧ್ಯತೆಯೇನೂ ಜಯ
ದೇವನಿಗೆ ತೋರಲಿಲ್ಲ. ಮೂರು ಠರಾವುಗಳನ್ನೇನೋ ಮಂಡಿಸಬೇಕೆಂದು ರಾತ್ರೆಯೇ
ಆತ ಗುರುತು ಮಾಡಿಕೊಂಡಿದ್ದ. ಉಪಾಧ್ಯಾಯರ ಮೂಲ ವೇತನ ಹೆಚ್ಚಿಸಬೇಕು;
ವರ್ಷವನ್ನು ಹಿಂದಿದ್ದಂತೆಯೇ ಬೇಸಗೆ ಮುಗಿದು ಆರಂಭಿಸಬೇಕು; ಉಪಾಧ್ಯಾಯರ
ಮಕ್ಕಳಿಗೆಲ್ಲಾ ಪ್ರೌಢ ಶಾಲೆಯ ಹಂತದವರೆಗೂ ಉಚಿತ ಶಿಕ್ಷಣ ಕೊಡಬೇಕು_ಹೀಗೆ
ಮೂರು ನಿರ್ಣಯಗಳು. ಅವುಗಳನ್ನು ಮಂಡಿಸುತ್ತ ತಾನು ಹೃದಯ ತೆರೆದು ಮಾತ
ನಾಡಬೇಕು. "ಬಾಂಧವರೇ! ಹಣ ಸಂಪಾದನೆಗೋಸ್ಕರ ನಾವು ಈ ವೃತ್ತಿಗಿಳಿದವರಲ್ಲ.
ಆದರೂ ಈ ಪ್ರಪಂಚದಲ್ಲಿ ಹಣವಿಲ್ಲದೆ ಬದುಕುವುದು ಸಾಧ್ಯವಿಲ್ಲ. ಮನುಷ್ಯರಾಗಿ