ಪುಟ:ನವೋದಯ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ನವೋದಯ

329

ಯಾರೆ೦ಬುದು ತಿಳಿಯದೆ ಹೋದರೂ ಜಯದೇವ ವ೦ದನೆ ಸ್ವೀಕರಿಸಿದ.
ಆ ಯುವಕನೆಂದ:
"ನಂಜುಂಡಯ್ನೋರು ಆಗಲೆ ಬಂದಿದ್ರು ಸಾರ್. ನೀವು ಬಂದ ತಕ್ಷಣ ಮನೆ
ಕಡೆಗೆ ಕಳಿಸ್ಕೊಡ್ಬೇಕೂಂತ ಹೇಳಿದ್ರು. ಸಂಸಾರ ಸಮೇತ ನೀವಲ್ಲಿಗೇ ಹೋಗ್ಬೇಕಂತೆ
ಸಾರ್."
ಸಂಸಾರ ಸಮೇತ ಎಂದಾಗ ಅವನ ಕಣ್ಣುಗಳು ಮಿನುಗಿದುವು; ಸುನಂದೆಯನ್ನು
ಆದರದಿಂದ ಕoಡುವು.
ಜಯದೇವನನ್ನು ಮನೆಗೆ ಕರೆದ ಆ ಇನ್ನೊಬ್ಬನೆಂದ:
"ಹಾಗಾದರೆ ನಾನು ಬರ್ತೀನಿ ಮೇಸ್ಟ್ರೇ, ನಮಸ್ಕಾರ."
"ನಮಸ್ಕಾರ. ನಾವು ನಂಜುಂಡಯ್ಯನವರಲ್ಲಿಗೆ ಹೋಗ್ತೀವಿ."
ಯುವಕ ಮತ್ತೂ ಹೇಳಿದ:
"ಜಟಕ ಬರೋವರೆಗೂ ಕಾಯ್ತೀರಾ ಸಾರ್?"
"ಈಗ ಜಟಕಾ ಇದೆಯೇನಯ್ಯ ಈ ಊರಲ್ಲಿ?"
"ಹೂ೦ ಸಾರ್, ಒಂದು ವರ್ಷವಾಯ್ತು. ಹುಸ್ನೆ ಸಾಬಿ ಜಟಕಾ ಕಟ್ಟಿದ್ದಾನೆ."
ಆ ಊರಲ್ಲಿ ಜಟಕಾ ಓಡಾಡುವುದು ಅಪೂರ್ವ ದೃಶ್ಯವೇ. ಆದರೆ, ಅದನ್ನು
ನೋಡಲೆಂದು ಕಾದಿರುವುದು ಸಾಧ್ಯವಿರಲಿಲ್ಲ.
"ಜಟಕಾ ಬರೋದು ಎಷ್ಟು ಹೊತ್ತಾಗುತ್ತೋ ಏನೋ?"
"ಅದೇನೋ ನಿಜ ಸಾರ್. ಒಂದೊಂದ್ಸಲ ಈ ಬಸ್ ಬರೋ ಹೊತ್ತಿಗೆ
ಇರುತ್ತಾನೆ. ಒಂದೊಂದ್ಸಲ ಪತ್ತೇನೆ ಇರೋದಿಲ್ಲ."
ಜಯದೇವ ಸುನಂದೆಯತ್ತ ನೋಡಿದ. "ಏನು ಮಾಡೋಣ್ವೆ?" ಎ೦ದು
ಕೇಳಲಿಲ್ಲ. ಕೆಲಸವಿಲ್ಲದೆ ಅಲೆಯುತ್ತಿದ್ದ ಹುಡುಗರು ಬೇರೆ ಮೂವರು ನಾಲ್ವರು
ಅವರನ್ನು ಸುತ್ತುಗಟ್ಟಿ, ಮಿಕಿಮಿಕಿ ಮುಖ ನೋಡುತ್ತ ನಿಂತರು. ಆವರೆಗೂ ಅಲ್ಲಿ
ನಿಂತಿದ್ದ ಬಸ್ಸು ಹೊರಟಿತು. ಹೋಟೆಲಿನಿಂದ ಹೊರ ಬರುತ್ತಿದ್ದವರೆಲ್ಲ ಸಾಮಾನು
ಗಳೊಡನೆ ನಿಂತಿದ್ದ ಜೋಡಿಯನ್ನು ಕುತೂಹಲದಿಂದ ನೋಡಿದರು.
ಸಾಮಾನು ಸರಂಜಾಮಗಳೊಡನೆ ನೇರವಾಗಿ ನಂಜುಂಡಯ್ಯನವರ ಮನೆಗೆ
ಹೋಗುವುದು ಜಯದೇವನಿಗೆ ಇಷ್ಟವಿರಲಿಲ್ಲ.
ಆತ ಕೇಳಿದ:
"ಈ ಬೆಡ್ಡಿಂಗ್ ಮತ್ತು ಗೋಣಿಚೀಲ ಸ್ವಲ್ಪ ಹೊತ್ತು ಇಲ್ಲೆ ಇಡಬಹುದಾ?"
"ಅದಕ್ಕೇನ್ಸಾರ್? ನನ್ನ ಅಂಗಡಿ ಪಕ್ಕದಲ್ಲೇ ಇಟ್ಕೋತೀನಿ. ನೆರಳಿದೆ."
ಡಬ್ಬದ ತಗಡಿನ ಛಾವಣಿ ಇದ್ದ ಬೀಡಾ ಬೀಡಿ ಅಂಗಡಿ ಇತ್ತು ಅಲ್ಲೇ.
ಆದರೆ ಸಾಮಾನುಗಳನ್ನು ಕೆಳಕ್ಕಿಳಿಸಿದ ಆಳು ಹೇಳಿದ:

42