ಪುಟ:ನವೋದಯ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

440

ಸೇತುವೆ

[ಉಪಾಧ್ಯಾಯರೆಲ್ಲ ವಿದ್ಯಾರ್ಥಿಗಳಾಗಿದ್ದರು ಆ ಘಳಿಗೆಯಲ್ಲಿ.]
ಸ್ವಾಗತಾಧ್ಯಕ್ಷರಿಗೆ ಆಗಲೆ ತಮ್ಮ ತಪ್ಪು ಹೊಳಿದಿತ್ತು. ತಿದ್ದೋಣವೆಂದರೆ,
ಉದ್ಘಾಟನೆಮಾಡಲು ಹೊಸತಾಗಿ ಗೊತ್ತಾಗಿದ್ದ ಮಹಾನುಭಾವರ ಹೆಸರೇ ಅವರ
ನಾಲಗೆಯ ತುದಿಗೆ ಬರಲಿಲ್ಲ. ಆ ಗೊಂದಲದಲ್ಲಿ ಅವರ ಕೈಗಳು ನಡುಗಿದುವು.
ವಿದ್ಯಾಧಿಕಾರಿಯ ಹೆಸರನ್ನೋದುವಾಗಲೂ ಅವರು ತಡವರಿಸಿದರು. ಅನಂತರದ ಕೆಲ
ಸಾಲುಗಳಲ್ಲೂ ಪದೋಚ್ಚಾರ ಪದೇ ಪದೇ ತಪ್ಪಿತು.
ಉದ್ಘಾಟಕರು ಮೊದಲು ಮಾತನಾಡಿದುದು ತಮ್ಮ ಅನರ್ಹತೆಯನ್ನು ಕುರಿತೇ.
ಮಾನ್ಯ ಸಚಿವರು ಮಾಡಬೇಕಾಗಿದ್ದ ಪವಿತ್ರ ಕೆಲಸಕ್ಕೆ ತಮ್ಮನ್ನು ನಿಯೋಜಿಸುವುದೆಂದ
ರೇನು? "ಇಂಥದೊಂದು ಯೋಗ ಇತ್ತೂಂತ ಕಾಣುತ್ತೆ." "ಅಥವಾ, ಹಾಳೂರಿಗೆ
ಉಳಿದವನೇ ಗೌಡ ಎಂದರೂ ಸರಿಹೋದೀತು."
ಆಗ ಸಭಿಕರು ಕೆಲವರು ನಕ್ಕರು. ಬೇರೆಯೂ ಕೆಲವರು ನಗಬೇಕೆಂದಿದ್ದರು.
ಆದರೆ, ವಿದ್ಯಾಧಿಕಾರಿ ಪುನಃ ಎಲ್ಲಿ 'ಸೈಲೆನ್ಸ್' ಎನ್ನುವರೋ ಎಂದು ಅವರಿಗೆ
ದಿಗಿಲಾಗಿತ್ತು.
ಉದ್ಘಾಟಕರು ಇನ್ನೂ ಕೆಲ ವಿಷಯಗಳನ್ನು ಸಭಿಕರಿಗೆ ತಿಳಿಸಿಕೊಟ್ಟರು. ವಿದ್ಯಾ
ವಿಹೀನರು ಪಶು ಸಮಾನ. ಅ೦ದಮೇಲೆ, ಮೃಗವನ್ನು ಮಾನವನಾಗಿ ಮಾರ್ಪಡಿಸುವ
ಮಹಾತ್ಮನೇ ಉಪಾಧ್ಯಾಯನೆನ್ನಬಹುದು. ಸ್ವಾತಂತ್ರ್ಯ ಬಂದ ಮೇಲಂತೂ ಅವನ
ಜವಾಬ್ದಾರಿ ಹೆಚ್ಚಿದೆ. ದಾನಗಳ ಈ ಕಾಲದಲ್ಲಿ ವಿದ್ಯಾದಾನವೇ ಶ್ರೇಷ್ಟವಾದದ್ದು.
ಅದನ್ನು ಮಾಡುತ್ತಿರುವ ಆಗರ್ಭ ಶ್ರೀಮಂತನೇ ಉಪಾಧ್ಯಾಯ......
ಭಾಷಣ ತಮಾಷೆಯಾಗಿ ತೋರಿತು ಜಯದೇವನಿಗೆ. ಅದು ವ್ಯಂಗ್ಯಸರಣಿ
ಯಾಗಿದ್ದರೆ ಸಂತೋಷಪಡುವುದು ಸಾಧ್ಯವಿತ್ತು. ಆದರೆ ಉದ್ಘಾಟಕರು ಹಾಗೆ ಭಾವಿ
ಸಿರಲಿಲ್ಲ. ಸತ್ಯವಾದ ಮಾತನ್ನೆ ತಾವು ಆಡುತ್ತಿದ್ದವರಂತೆ, ಗ೦ಭೀರವಾಗಿ, ಪದಗಳನ್ನು
ತೂಗಿ ತೂಗಿ, ಅವರು ಭಾಷಣಕೊಟ್ಟರು.
ಚಪ್ಪರ ತುಂಬಿಯೇ ಇತ್ತು. ನೂರಕ್ಕೂ ಮಿಕ್ಕಿ ಪ್ರತಿನಿಧಿಗಳು. ನೂರಕ್ಕೂ
ಮಿಕ್ಕಿ ಇತರ ಜನ. ಉಪಾಧ್ಯಾಯರ ಸಮ್ಮೇಳನ ನೋಡಲು ಹೇರಳ ಸಂಖ್ಯೆಯಲ್ಲಿ
ನೆರೆದಿದ್ದ ಎಳೆಯ ವಿದ್ಯಾರ್ಥಿಗಳು ಬೇರೆ.
ಸಂದೇಶಗಳ ವಾಚನವಾದ ಬಳಿಕ ಅಧ್ಯಕ್ಷರೆದ್ದರು.
ಪ್ರಾಸ್ತಾವಿಕ ಭಾಷಣವನ್ನು ಮುಖ್ಯ ಭಾಷಣವಾಗಿಯೆ ಅಧ್ಯಕ್ಷರು ಮಾರ್ಪಡಿಸಿ
ದರು. [ ಬೆಂಗಳೂರಿನಿಂದ ತರಿಸಿದ್ದ ದೊಡ್ಡ ಹಾರ ಅವರ ಕತ್ತನ್ನು ಅಲಂಕರಿಸಿತು.]
ಅದು ವಿದ್ಯಾಸುಧಾರಣೆಯ ವರದಿ, ವಿದ್ಯಾಮಂದಿರಗಳಿಗೋಸ್ಕರ ಭೂದಾನ
ಮಾಡುವಂತೆ ಧನಿಕರಿಗೆ ಕರೆ, ಹೊಸ ದೃಷ್ಟಿಯಿಂದ ಸೇವಾ ತತ್ಪರತೆಯಿಂದ ದುಡಿಯು
ವಂತೆ ಉಪಾಧ್ಯಾಯರಿಗೆ ಆದೇಶ.......
"ಶಿಸ್ತು. ಶಿಸ್ತು ಮುಖ್ಯ. ಹರುಕು ಚಿಂದಿ ಉಟ್ಕೊಂಡು, ಗಡ್ಡ ಬಿಟ್ಕೊಂಡು,