ಪುಟ:ನವೋದಯ.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

447

"ನಿರ್ಣಯ ಮಂಡಿಸೋದಕ್ಕೆ ಬಿಟ್ಟಿದ್ರೆ ಅವರದೇನು ನಷ್ಟವಾಗ್ತಿತ್ತು?" ಎಂದು
ರೇಗಿದಳು.
"ಬಡವ ಬಾಯಿ ಬಿಡೋದಕ್ಕೆ ಅವಕಾಶಕೊಡಬಾರದು ಅನ್ನೋದು ಅವರ
ಧೋರಣೆ ಕಣೇ."
"ಸ್ವಾತಂತ್ರ್ಯ ಬಂದ್ಮೇಲೂ ಹೀಗ್ಮಾಡೋದೆ?"
"ಸ್ವಾತಂತ್ರ್ಯ ಬಂದರೂ ಮನಸ್ಸಿಗೆ ಹಿಡಿದಿರೋ ಕಿಲುಬು ಅಷ್ಟು ಬೇಗ್ನೆ ಎಲ್ಲಿಗೆ
ಹೋಗುತ್ತೆ ಹೇಳು? ಹಳೇ ಮರ್ಜಿಯ ಜನ ಈಗಲೂ ಇದಾರೆ."
ಇನ್ನು ಗೋಪ್ಯವಾದ ಬೇರೆ ವಿಷಯ ಎನ್ನುವಂತೆ, ಸುನಂದಾ ಮೆಲ್ಲನೆ
ಕೇಳಿದಳು:
"ಮೇಡಮ್‍ಗಳು ಯಾರೂ ಬಂದಿರ್‍ಲಿಲ್ವ ಸಮ್ಮೇಳನಕ್ಕೆ?"
"ಓಹೋ. ಬಂದಿದ್ರು. ಅವರಲ್ಲಿ ಒಬ್ಬಾಕೆ ನಿನ್ನ ಹಾಗೇ ಇದ್ಲು ಕಣೇ."
"ಮಾತಾಡಿಸಿದಿರಾ?"
"ಮನೆಗೆ ಹೋದ್ಮೇಲೆ ಮಾತನಾಡಿಸಿದರಾಯ್ತೂಂತ ಸುಮ್ನಿದ್ದೆ."
ಸುನಂದಾ ನಗುತ್ತಾ ಗಂಡನ ಎದೆಯ ಮೇಲೆ ಕೈಯಾಡಿಸಿದಳು.
...ಲಕ್ಕಪ್ಪಗೌಡರು ಒಂದು ವಾರ ರಜಾ ಪಡೆದು ಊರಿಗೆ ಹೋದರು. ಅಲ್ಲಿ
ಅವರ ತಂಗಿಯ ಮದುವೆ ಗೊತ್ತಾಗಿತ್ತು. ಶಾಲೆಯಲ್ಲಿ ಉಳಿದವರು ಇಬ್ಬರೇ.
ನಾಲ್ಕು ತರಗತಿಗಳನ್ನು ನಡೆಸಿಕೊಂಡು ಹೋಗುವುದು ಅವರಿಗೆ ಪ್ರಯಾಸದ ಕೆಲಸ
ವಾಯಿತು.
ಆದರೆ, ಕೆಲ ದಿನಗಳ ಮಟ್ಟಿಗಾದರೂ ಲಕ್ಕಪ್ಪಗೌಡರಿಲ್ಲವಲ್ಲಾ ಎಂದು ಸಂತೋಷ
ಪಟ್ಟರು ನಂಜುಂಡಯ್ಯ.
ಅವರೆಂದರು:
"ಆತ ಇದ್ದರೆ ಮಾತುಮಾತಿಗೂ ಆತಂಕ. ಈಗ ಸರಾಗವಾಗಿ ಉಸಿರನ್ನಾದರೂ
ಆಡಿಸಬಹುದು."
ಇಂತಹ ಮಾತುಗಳು ಬಂದಾಗಲೆಲ್ಲ ಉಸಿರಾಡಲು ಕಷ್ಟವಾಗುತ್ತಿದ್ದುದು
ಜಯದೇವನಿಗೆ.
ಒಂದು ದಿನ, ಬಹಳ ಹಸನ್ಮುಖಿಯಾಗಿ ನಂಜುಂಡಯ್ಯ ಶಾಲೆಗೆ ಬಂದರು.
"ಜಯದೇವ್! ನಮ್ಮ ಹೈಸ್ಕೂಲಿಗೆ ಮೂರು ಎಕರೆ ಭೂಮಿ ಉಚಿತವಾಗಿ
ಸಿಕ್ತು."
"ಹೌದೆ? ಸಂತೋಷ!"
"ಧರ್ಮಪ್ರವರ್ತಕ ಚೆನ್ನಣ್ಣನವರ ದಾನ. ಹೈಸ್ಕೂಲು ಕಟ್ಟಡಕ್ಕೋಸ್ಕರ
ನಿವೇಶನ ಅಂತ ಭೂದಾನ ಮಾಡಿದಾರೆ"
"ಯಾವ ಕಡೆಗಿದೆ ಸಾರ್, ಜಾಗ?"