ಪುಟ:ನವೋದಯ.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

450

ಸೇತುವೆ

ಕ್ಕೆಲ್ಲ ಇಷ್ಟು ಮಾತು?" ಎನ್ನುವುದಕ್ಕೂ ಗಂಟೆಬಾರಿಸಬಹುದೆ_ಎಂದು ಕೇಳಲು
ಬಂದಿದ್ದ ಜವಾನ, ಅಂಜುತ್ತ ಅಂಜುತ್ತ ಮುಖ ತೋರಿಸುವುದಕ್ಕೂ ಸರಿಹೋಯಿತು.
ಉಪಾಧ್ಯಾಯರ ಕೊಠಡಿಯಲ್ಲಿ ಏನು ಗದ್ದಲವಾಗುತ್ತಿದೆಯೆಂದು ನಾಲ್ಕಾರು
ಜನ ಹುಡುಗರೂ ದೂರದಿಂದ ಇಣಿಕಿ ನೋಡಿದರು.
"ಯಾಕ್ನಿಂತಿದೀಯೋ ಹಾಗೆ? ಕತ್ತೆ! ಬಾರಿಸು ಗಂಟೆ!" ಎಂದರು ನಂಜುಂಡಯ್ಯ,
ಜವಾನನಿಗೆ.
ಗೌಡರು ಬುಸುಗುಟ್ಟುತ್ತಲೆ ಎದ್ದು, ಪುಸ್ತಕವೆತ್ತಿಕೊಂಡು ಹೊರಹೋದರು.
ನಂಜುಂಡಯ್ಯ ಅವುಡುಗಚ್ಚಿ, ಹೂಂಕರಿಸಿ, ಅಂದರು:
"ಸಂಸ್ಕೃತಿ ಇಲ್ಲದ ಮನುಷ್ಯ! ನಾವಿಬ್ಬರೂ ಹೈಸ್ಕೂಲಿಗೆ ಹೊರಟ್ಹೋದ್ಮೇಲೆ,
ತಾನೇ ಇಲ್ಲಿಗೆ ಹೆಡ್ ಮೇಸ್ಟ್ರಾಗ್ಬಹುದೂಂತ ಭಾವಿಸಿದಾನೆ. ಏನಾದರೂ ಮಾಡಿ
ಅದನ್ನು ತಪ್ಪಿಸ್ಲೇಬೇಕು."
"ಇನ್ನೂ ಒಂದು ವರ್ಷ ಇದೆಯಲ್ಲ. ಈಗ ಯಾಕ್ಸಾರ್ ಆ ವಿಷಯ?"
ಮರೆತ್ಬಿಡಿ!"
....ಜಯದೇವನಿಗೆ, ಶಾಲೆ ಅಶಾಂತಿಯ ಬೆಂಗಾಡಾದರೆ, ಮನೆ ನಲವಿನ ವಸಂತ
ವಿಹಾರವಾಯಿತು.
ಸುನಂದಾ ತನ್ನ 'ಆರೋಗ್ಯ'ವನ್ನು ಕುರಿತು ಶಂಕೆ ವ್ಯಕ್ತಪಡಿಸಿದಳು. ಮತ್ತೂ
ಒಂದು ತಿಂಗಳು ಕಳೆದಾಗ ಸಂದೇಹಕ್ಕೆ ಆಸ್ಪದವಿರಲಿಲ್ಲ. ಮಧುರವಾದುದೇನೋ
ತನ್ನ ಎದೆಯನ್ನೆಲ್ಲ ಆವರಿಸಿದಂತೆ ಜಯದೇವನಿಗೆ ಭಾಸವಾಯಿತು.
ಆತ ಹೇಳಿದ:
"ಸುನಂದಾ, ಈಗಲಾದರೂ ಕೆಲಸಕ್ಕೆ ಒಬ್ಬಳನ್ನ ಗೊತ್ತುಮಾಡೋಣ."
ಆಕೆ ಒಪ್ಪಲಿಲ್ಲ:
"ಬೇಡಿ. ಈಗಲೇ ನನಗೆ ಏನಾಗಿದೇಂತ?"
ಮತ್ತೂ ಸ್ವಲ್ಪ ದಿನ ಕಳೆದ ಬಳಿಕ ಒತ್ತಾಯಪಡಿಸಿದರಾಯಿತೆಂದು ಜಯದೇವ
ಸುಮ್ಮನಾದ.
ಆದರೆ ಹೃದಯದೊಳಗಿನ ಸುಖ, ಕಟ್ಟೆಯೊಡೆಯಲು ಯತ್ನಿಸುತ್ತಿತ್ತು.
"ಅಮ್ಮನಿಗೆ ಬರೆಯೊಲ್ವ?”
ಸುನಂದಾ ಆ ವಿಷಯ ಆಗಲೆ ಯೋಚಿಸಿದ್ದಳು.
"ಈಗ ಬೇಡಿ. ಹ್ಯಾಗಿದ್ದರೂ ಹಬ್ಬಕ್ಕೆ ಹೋಗ್ತೀವಲ್ಲ. ಆಗ ಹೇಳಿದರಾಯ್ತು."
ತಾರೀಕು ಪಟ್ಟಿಯಲ್ಲಿ, ಕೆಂಪು ಬಣ್ಣ ಬಳೆದು ನಿಂತಿತ್ತು ಹದಿನೈದನೆಯ ಅಂಕೆ.
"ಇನ್ನು ಒಂದೇ ವಾರ. ಮೇಲಿನ ಭಾನುವಾರ ಹೊರಟ್ಬಿಡೋಣ," ಎಂದ
ಜಯದೇವ.
...ನಂಜುಂಡಯ್ಯನೇ ಕೇಳಿದರು, "ಬೆಂಗಳೂರಿಗೆ ಯಾವತ್ತು ಹೊರಡ್ತೀರಾ?"__