ಪುಟ:ನವೋದಯ.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

461

ಮಗಳನ್ನು ಅಲ್ಲಿಯೇ ಉಳಿಸಿಕೊಳ್ಳಬೇಕೆಂಬ ಇಚ್ಛೆ ತಾಯಿಗೆ. ಆಕೆ ಅಳಿಯನ
ಇಂಗಿತ ತಿಳಿಯ ಬಯಸಿದರು.
"ನಾನೂ ನಿಮ್ಜತೇಲಿ ಬರ್ಲಾ ಜಯಣ್ಣ?"
"ಬನ್ನಿ ಅತ್ತೆ. ಆದರೆ ಇಲ್ಲಿ ನೋಡ್ಕೊಳೋರು ಯಾರು?"
"ಅದೇನೋ ನಿಜವೇ ಆದರೆ ಅಲ್ಲಿ, ಸುನಂದೇನ ನೋಡ್ಕೊಳ್ಳೋರು ಯಾರೂ
ಇಲ್ವಲ್ಲಾ."
ಆಕೆಯ ಮನಸ್ಸಿನಲ್ಲಿ ಇದ್ದುದೇನೆಂಬುದು ಜಯದೇವನಿಗೆ ಹೊಳೆಯಿತು.
ಅತ್ತೆಯ ಮಾತಿನ ಚಾತುರ್ಯಕ್ಕಾಗಿ ಆತ ತಲೆದೂಗಿದ.
ತಾನಿನ್ನು ಒಬ್ಬನೇ ಹಿಂತಿರುಗಬೇಕು ಎಂಬ ಯೋಚನೆ ಬಂದಾಗ ಮಾತ್ರ, ಆತ
ನಿಗೆ ಕಸಿವಿಸಿಯಾಯಿತು.
"ಸುನಂದೇನ ಕೇಳಿ ನೋಡಿ ಅತ್ತೆ. ಇಲ್ಲೇ ಇರ್ತಾಳೋ ಏನೋ."
ಆ ಮಗಳು ಒಪ್ಪಲೇ ಇಲ್ಲ. ಖಡಾಖಂಡಿತವಾಗಿ ಆಕೆ ಅಂದಳು:
"ಆಗೊಲ್ಲಮ್ಮ. ನಾನು ಅವರ ಜತೆ ಹೋಗಲೇಬೇಕು."
ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಜಯದೇವನೆಂದ:
"ಇನ್ನು ಏನಿದ್ದರೂ ಒಂದೂವರೆ ತಿಂಗಳು. ವರ್ಷ ಮುಗಿದೊಡನೆ ವಾಪಸು
ಬಂದ್ಬಿಡ್ತೀವಿ. ಆ ಮೇಲೆ ಸುನಂದಾ ಇಲ್ಲಿಯೇ ಇದ್ದರಾಯ್ತು."
"ಊ...." ಎಂದಳು ಸುನಂದಾ, ಅದಕ್ಕೂ ಒಪ್ಪದೆ.
ತಾಯಿ ಮಾತ್ರ, "ಹಾಗೆಯೆ ಮಾಡಪ್ಪ, ಅದೇ ಸರಿ," ಎಂದರು.
ರಜಾ ಮುಗಿಯಿತು.
ಸುನಂದೆ ಜಯದೇವರಿಬ್ಬರೇ ಪ್ರಯಾಣ ಬೆಳೆಸಿದರು. ಆದರೆ ಅವರ ಜತೆ
ಸುನಂದೆಯ ತಾಯಿ, ಮಗಳಿಗೆಂದು ತಯಾರಿಸಿದ್ದ ಬಗೆಬಗೆಯ ತಿಂಡಿಗಳ ದೊಡ್ಡ
ಬುಟ್ಟಿಯೂ ಹೊರಟಿತು.



೧೫

ನಿಲ್ದಾಣದಲ್ಲಿ ಬಸ್ಸಿನಿಂದ ಹೊರಗಿಳಿಯುತ್ತಿದ್ದಂತೆ ಜಟಕಾ ಸಾಬಿ ಕೇಳಿದ:
"ಬರ್ತೀರಾ ಬುದ್ದಿ?"
ಸುನಂದಾ ಜಯದೇವನ ಮುಖ ನೋಡಿದಳು.
"ಗಾಡಿ ಕುಲುಕುತ್ತೆ, ಬೇಡ," ಎಂದ ಆತ, ಆ ಆಯಾಸಕ್ಕಿಂತ ಸುನಂದೆಯ
ಆರೋಗ್ಯಕ್ಕೆ ಕಾಲ್ನಡಿಗೆಯೇ ವಾಸಿ, ಎಂದು.