ಪುಟ:ನವೋದಯ.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

502

ಸೇತುವೆ

 ಮಾಡ್ತೀನಿ ಆ ಕೆಲಸವನ್ನ" ಎಂದಳು.
ಬಡಿಸುತಿದ್ದಾಕೆಯನ್ನು ನೋಡಿ ನಂಜುಂಡಯ್ಯ ಕೇಳಿದರು:
"ಇವರು ಸುನಂದಮ್ಮನ ತಂಗಿಯೇ?"
ಆ ಹುಡುಗಿಗೆ ನಗುಬಂತು. ಅದನ್ನು ತಡೆಯುವ ಯತ್ನದಲ್ಲಿ ಆಕೆ ತುಪ್ಪ
ಬಡಿಸುತ್ತಿದ್ದ ಚಮಚವನ್ನು ನಂಜುಂಡಯ್ಯನ ಎಲೆಗೆ ಇಳಿ ಬಿಟ್ಟಳು.
"ಈಕೆ ಸುನಂದೆಯ ಸ್ನೇಹಿತೆ," ಎಂದು ಜಯದೇವ ಪರಿಚಯ ಮಾಡಿಕೊಟ್ಟ.
"ಹಾಗೇನು?" ಎನ್ನುತ್ತ ನಂಜುಂಡಯ್ಯನೂ ನಕ್ಕು, ತುಪ್ಪದ ಚಮಚವನ್ನು
ಅನ್ನದಿಂದೆತ್ತಿ ಬದಿಗಿರಿಸಿದರು
ಹೋಟೆಲಲ್ಲೆ ಅಷ್ಟು ದಿನಗಳಿಂದ ಉಣ್ಣುತ್ತಿದ್ದ ಅವರಿಗೆ, ಜಯದೇವನ
ಮಾವನ ಮನೆಯ ಊಟ ತುಂಬಾ ಮೆಚ್ಚುಗೆಯಾಯಿತು.
* * * *
ನಂಜುಂಡಯ್ಯನೂ ಶಂಕರಪ್ಪನೂ ಊರಿಗೆ ಮರಳಿದ ಎರಡು ವಾರಗಳಲ್ಲೆ
ಜಯದೇವನೂ ಅವರನ್ನು ಹಿಂಬಾಲಿಸಿದ. ಸರ್ವೋದಯ ದಿನಕ್ಕಿಂತ ನಾಲ್ಕು ದಿವಸ
ಮುಂಚಿತವಾಗಿಯೆ ಬರಬೇಕೆಂದು ಶಂಕರಪ್ಪ ಆತನಿಗೆ ಹೇಳಿದ್ದರು:
ಈ ಸಲ ಜಯದೇವ ಪಯಣ ಬೆಳೆಸಿದುದು ಒಂಟಿಯಾಗಿಯೆ.
****
'ಧರ್ಮಪ್ರವರ್ತಕ ಚೆನ್ನಣ್ಣನವರ ಪ್ರೌಢಶಾಲಾ ಕಟ್ಟಡ'ದ ಶಂಕುಸ್ಥಾಪನೆ,
ಸರ್ವೋದಯ ದಿನ ಪೂರ್ವಾಹ್ನ, ಸಂಸ್ಥಾನದ ಮುಖ್ಯ ಸಚಿವರ 'ಅಮೃತಹಸ್ತ'
ದಿಂದ ನೆರವೇರಿತು.

೧೯


ಶಾಲೆಗಳು ಆರಂಭವಾದ ವಾತಾವರಣ ಕಲುಷಿತವಾಗಿತ್ತು. ಹಾಗಾಗಲು ಮುಖ್ಯ
ಕಾರಣ_ಒಂದು ತಿಂಗಳ ಅವಧಿಯಲ್ಲೆ ಜರಗಲಿದ್ದ ಪಂಚಾಯತ ಬೋರ್ಡು ಚುನಾವಣೆ.
ಈ ಸಂಬಂಧವಾಗಿ ಪಕ್ಷದಲ್ಲಿ ಒಮ್ಮತ ದೊರೆಯದೆ ಹೋದುದರಿಂದ ಎಲ್ಲರೂ
ಸ್ವತಂತ್ರರಾಗಿಯೆ ಸ್ಪರ್ಧಿಸಬಹುದೆಂದು ತೀರ್ಮಾನ ಕೈಗೊಳ್ಳಲಾಗಿತ್ತು. ಪ್ರೌಢ
ಶಾಲೆಯ ಶಂಕುಸ್ಥಾಪನೆ, ಮುಖ್ಯ ಸಚಿವರ ಆಗಮನ, ಮತ್ತಿತರ ಕಾರಣಗಳಿಂದ ಜನ
ರೆಡೆಯಲ್ಲಿ ಬೆಳೆದು ಬಿಟ್ಟಿತ್ತು ಶಂಕರಪ್ಪನ ವರ್ಚಸ್ಸು. ಅವರನ್ನು ಏನಾದರೂ ಮಾಡಿ
ಈ ಸಲ ಉರುಳಿಸಬೇಕೆಂದು ನಾರಾಯಣಗೌಡರು ಟೊಂಕಕಟ್ಟಿದರು.
ಪರಿಣಾಮ_ಊರೇ ಹೊಲಸೆದ್ದು ಹೋದಂತಹ ಪರಿಸ್ಥಿತಿ.ಎಂತೆಂತಹ