ಪುಟ:ನವೋದಯ.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

505

"ನೀವೆಲ್ಲರೂ ಈ ವರ್ಷ ಪಾಸಾದರೆ ಏನಾಗುತ್ತೆ ಗೊತ್ತೆ?"
ಒಬ್ಬನೆಂದ:
"ಗೊತ್ತು ಸಾರ್. ನಮ್ಮೂರ ಹೈಸ್ಕೂಲಿನಲ್ಲಿ ಮೊದಲನೇ ವರ್ಷದ ವಿದ್ಯಾರ್ಥಿ
ಗಳಾಗ್ತೀವಿ."
"ಈ ಇಡೀ ಕ್ಲಾಸೇ ಮುಂದಿನ ವರ್ಷ ಹೈಸ್ಕೂಲಿಗೆ ಹೋದರೆ ಚೆನ್ನಾಗಿರುತ್ತೆ
ಅಲ್ವೆ?"
ಎಷ್ಟೋ ಕಂಠಗಳು ಒಟ್ಟಾಗಿ ಹೇಳಿದುವು:
"ಹೌದು ಸಾರ್."
"ಹಾಗಾದರೆ ಎಲ್ಲರೂ ಪಾಸಾಗೋ ಹಾಗೆ ಶ್ರಮಪಟ್ಟು ಓದ್ತೀರೇನು?"
ತರಗತಿಗೆ ತರಗತಿಯೇ ಉತ್ತರವಿತ್ತಿತು.
"ಓದ್ತೀವಿ ಸಾರ್."
ನಂಜುಂಡಯ್ಯ ಮಾತ್ರ ಗೊಣಗಿದರು:
"ಯಾಕೋ, ಹುಡುಗರಿಗೆ ಪಾಠ ಮಾಡೋಕೆ ಮನಸ್ಸಾಗ್ತಾ ఇల్ల. ಎದ್ದರೆ
ನಿಂತರೆ ಕಟ್ಟಡದ ನಕಾಶೆ ಕಣ್ಣ ಮುಂದೆ ಕಟ್ಟುತ್ತೆ. ಜೂನ್ ನೊಳಗೆ ರಿಲೀವ್
ಮಾಡೀಂತ ರಾಜಿನಾಮೆ ಪತ್ರ ಕಳಿಸ್ಬಿಡ್ತೀನಿ."
"ಕಟ್ಟಡದ ನಿಧಿ ಎಷ್ಟರ ವರೆಗೆ ಬಂತು?" ಎಂದು ಜಯದೇವ ಕೇಳಿದ.
"ಆರು ಸಾವಿರದಷ್ಟು ಕೂಡಿದೆ. ಕಟ್ಟಡ ಶುರುಮಾಡೋದಕ್ಕೆ ಇಷ್ಟು ಸಾಕು.
ಆ ಮೇಲೆ ಸರಕಾರದವರಿಂದ ಸಹಾಯ ಹಣ ಬರುತ್ತೆ. ಯುಗಾದಿಯ ಮಾರನೇ ದಿವಸ
ಕಟ್ಟಡದ ಕೆಲಸ ಶುರು."
...ಇಂದಿರೆಯ ಮನೆಯ ಕೆಲಸದಾಕೆ, ಉಪ್ಪಿನಕಾಯಿ, ಸಾಂಬಾರು ಪುಡಿ. ಚಟ್ಣಿ
ಪುಡಿ, ಹಪ್ಪಳ ಮತ್ತಿತರ ಸಾಮಗ್ರಿಗಳ ದೊಡ್ಡದೊಂದು ಮೂಟೆಯನ್ನು ತಂದು
ಜಯದೇವನ ಮನೆಯಲ್ಲಿರಿಸಿದಳು.
"ಸುನಂದವ್ವ ಕಾಜ್ಗ ಬರ್ದವ್ರಾ ಕೇಳ್ಕೊಂಡ್ಬಾ ಅಂದ್ರು," ಎಂದಳು ಆಕೆ.
"ಬರೆದಿದಾರೆ, ಆರೋಗ್ಯವಾಗಿದಾರೆ-ಅಂತ ಹೇಳು."
"ಬುದ್ಧಿಯೋರಿಗೆ ಏನಾರ ಬೇಕಾರೆ ಏಳ್ಕಳಿಸ್ಬೇಕಂತೆ."
"ಹೂನವ್ವಾ."
ನಂಜುಂಡಯ್ಯನೊಡನೆ ಕೇಳಿ ಉತ್ತರ ಪಡೆಯಬಹುದಾಗಿದ್ದ ಪ್ರಶ್ನೆಯೊಂದಿತ್ತು.
ಅದನ್ನು ಈಕೆಯೊಡನೆಯೂ ಕೇಳಬಹುದೆಂದು ಆತನೆಂದ:
"ಇಂದಿರಮ್ಮ ಪಾಠ ಹೇಳಿಸ್ಕೊಳ್ಳೋಕೆ ಹೋಗ್ತಿದಾರೆ-ಅಲ್ವ?"
"ಓಗ್ತವ್ರೆ ಬುದ್ಧಿ."
"ಸರಿ, ಹೋಗು."

64