ಪುಟ:ನವೋದಯ.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

349

"ಈ ತಿಂಗಳಲ್ಲೇ ಲಗ್ನವಿದೆ. ಮುಗಿಸಿ ಬಿಟ್ಟರೆ ಮೇಲು."
“ಆಗಲಿ. ಆಗಲಿ.”
ಶ್ರೀಪತಿರಾಯರನ್ನು ಬೀಳ್ಕೊಡಲು ಬಸ್ ನಿಲ್ದಾಣಕ್ಕೆ ಬಂದ ಜಯದೇವ
ಹೇಳಿದ:
"ಮನಸ್ಸಿಗೆ ಬೇಸರವಾಯ್ತಲ್ವೆ?"
"ಇದೆಲ್ಲಾ ಸ್ವಾಭಾವಿಕ ಕಣಪ್ಪ.”
"ನಮ್ಮ ತಂದೆ ಒಪ್ಪಿದಾರೇಂತ್ಲೇ ಭಾವಿಸಿ. ಅವರ ಒಪ್ಪಿಗೆ ತಗೊಂಡು ಭಾನು
ವಾರದೊಳಗೆ ಬಂದ್ಬಿಡ್ತೀನಿ."
"ಅಷ್ಟು ಮಾಡು."
"ನಮ್ಮ ಚಿಕ್ಕಮ್ಮ ಮದುವೆಗೆ ಬರದೆ ಇದ್ದರೆ ನೀವು ಬೇಜಾರು ಮಾಡ್ಕೊ
ಬಾರ್‍ದು.”
“ಏನೇನಿಲ್ಲ. ಜನರಿಗೂ ಅಷ್ಟು ಗೊತ್ತಿಲ್ವೆ? ಒಂದು ಮದುವೆಗೇಂತ ಎಲ್ರೂ
ಮನೆ ಬಿಟ್ಟು ಬರೋಕಾಗುತ್ಯೆ?!"
ಆ ಸರಸೋಕ್ತಿ ಕೇಳಿ ಜಯದೇವ ಮುಗುಳುನಕ್ಕ.
...ಕೊನೆಗೆ ನಡೆದುದೂ ಅಷ್ಟೆ. ಗಂಡನ ಮನೆಗೆ ಹೋಗಿದ್ದ ಸತ್ಯವತಿ ಬರುವ
ಪ್ರಶ್ನೆ ಇರಲಿಲ್ಲ. ಮಾಧುವಿನೊಡನೆ ಗೋವಿಂದಪ್ಪನವರು ಬಂದಿಳಿದರು. ನೆರೆದವರ
ದೃಷ್ಟಿಯಲ್ಲಿ ಜಯದೇವ ತಾಯಿ ಇಲ್ಲದ ತಬ್ಬಲಿ. (ಸತ್ಯ ಸಂಗತಿಯೇ.) ವಧುವಿನ
ಕಡೆಯ ನೆಂಟರಿಷ್ಟರಿಗಂತೂ ಲೆಕ್ಕವಿರಲಿಲ್ಲ. ಎಷ್ಟೇ ವೆಚ್ಚವಿಲ್ಲವೆಂದರೂ ಸಾವಿರದೈ
ನೂರು ರೂಪಾಯಿ ಮಟಮಾಯವಾಯಿತು. ಸುನಂದೆ ಜಯದೇವರು ನವದಂಪತಿ
ಯಾದರು.
ಆ ಸಡಗರದ ಕಾವು ಆರುವುದಕ್ಕೆ ಮುನ್ನವೆ ‍ಫಲಿತಾಂಶ ಹೊರಬಿತ್ತು.
ಮೊದಲ ವರ್ಗದಲ್ಲಿ ಉತ್ತೀರ್ಣಳಾಗಿದ್ದಳು ಸುನಂದಾ. ಜಯದೇವ ವೇಣು
ವಿನ ಮೇಲ್ಪಂಗ್ತಿಯನ್ನೆ ಅನುಸರಿಸಿದ್ದ.
ತಾಯಿ ತಂದೆ ಸಮೀಪದಲ್ಲಿ ಇದ್ದುದನ್ನು ಗಮನಿಸದೆ, ಜಯದೇವನ ತೋಳನ್ನು
ಸುನಂದಾ ಚಿವುಟಿದಳು.
"ಆಯ್," ಎಂದ ಜಯದೇವ.
ಆತನ ಅತ್ತೆ ಮಾವ ತಲೆ ಎತ್ತಿದಾಗ, ದಂಪತಿ ದೂರದೂರವಾಗಿ ಗಂಭೀರ
ವಾಗಿಯೇ ನಿಂತಿದ್ದರು. ಆದರೆ, ಅಂತಹ ಆಟ ಆ ಹಳಬರಿಗೇನು ಹೊಸದೆ?
ಜಯದೇವ ಹೇಳಿದ:
"ಇಂಟರ್ನಲ್ಲಿ ಫಸ್ಟ್ ಕ್ಲಾಸ್ ಬರೋದು ಸುಲಭ. ಬಿ.ಎಸ್ ಸೀಲಿ ಹಾಗಲ್ಲ."
"ಗೊತ್ತು ಮಹಾ," ಎಂದಳು ಸುನಂದಾ.
ವೃದ್ಧ ದಂಪತಿ ನಕ್ಕರು.