ಪುಟ:ನವೋದಯ.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

378

ಸೇತುವೆ

ಹೊರಟ್ರು-ಅಂತ ಜನ ಏನಾದರೂ ಅಂದ್ಕೋತಾರೆ."
"ನಾಚ್ಕೆ ಆಗುತ್ತೇನೋ, ನನ್ನ ಕರಕೊಂಡು ಹೋಗೋಕೆ?"
"ಹಾಗಲ್ವೆ. ಇವತ್ತೇ ಬೇಡ. ಎಲ್ಲಾ ಸ್ವಲ್ಪ ಸ್ವಲ್ಪವಾಗಿ ಮಾಡೋಣ.
ಹೇಳಿದ್ದೆಲ್ಲ ಮರೆತೇ ಹೋಯ್ತೇನು? ನಾವು ಜನರ ಜತೇಲೂ ಇರ್ಬೇಕು ಅವರಿಗಿಂತ
ಸ್ವಲ್ಪ ಭಿನ್ನವಾಗಿಯೂ ಇಲ್ಬೇಕು. ಹೌದಾ?"
"ಹೋಗಿ. ನಿಮ್ಮ ಹತ್ತಿರ ಮಾತಾಡಿ ಏನು ಪ್ರಯೋಜನ?"
"ಸಾಮಾನು ಯಾವುದೂ ಮರೆತಿಲ್ಲ ತಾನೆ?"
"ಇಷ್ಟು ಸಾಕು ಇವತ್ತಿಗೆ."
"ಹೊರಡ್ತೀನಿ ಹಾಗಾದರೆ."
“ಹೂಂ."
ಜಯದೇವ ಒಂದು ನಿಮಿಷ ಸುನಂದೆಯನ್ನು ದಿಟ್ಟಿಸುತ್ತ ನಿಂತ. ಆಕೆಗೆ ನೆನ
ಪಾದಂತೆಯೆ ತೋರಲಿಲ್ಲ. ಆತ ಹೊರಡದೇ ಇದ್ದುದನ್ನು ಕಂಡು ಸುನಂದಾ
ಕೇಳಿದಳು:
"ಯಾಕ್ನಿಂತಿದೀರಾ ಇನ್ನೂ?"
"ಸಾಮಾನೆಲ್ಲ ಸಾಲ ಬರಸ್ಕೊಂಡು ಬರ್‍ಲಾ?"
"ಅಯ್ಯೋ ರಾಮ! ಮರೆತೇ ಹೋಯ್ತು ನಂಗೆ!" ಎನ್ನುತ್ತ ಸುನಂದಾ,
ಪೆಟ್ಟಿಗೆ ತೆರೆದು ಹತ್ತು ರೂಪಾಯಿನ ಒಂದು ನೋಟು ಹೊರತೆಗೆದು, ಕೇಳಿದಳು:
“ಸಾಕಾ ಇಷ್ಟು?"
"ಇನ್ನೂ ಒಂದು ನೋಟು ಕೊಟ್ಟರು."
ಇನ್ನೊಂದನ್ನು ಕೊಡುತ್ತ ಆಕೆಯೆಂದಳು:
"ಉಳಿಯೋದು ಮೂವತ್ತೆ ರೂಪಾಯಿ."
“ಸಂಬಳ ಬರೋ ತನಕ ಅಷ್ಟು ಸಾಕು."
ಜವಾನ, ಉಪಾಧ್ಯಾಯರ ಬರವನ್ನು ಇದಿರು ನೋಡುತ್ತ ಅಂಗಳದಲ್ಲೆ ಇದ್ದ.
ಜಯದೇವನೆಂದ:
“ಹಾಲಿದೆ. ಒಣಗಿದ ಸೌದೆ ಇದೆ. ನಿಮ್ಮಮ್ಮ ಕಟ್ಟಿ ಕೊಟ್ಟ ರವೆ ಇದೆ.
ಬರೋದರೊಳಗೆ ಒಂದಿಷ್ಟು ಉಪ್ಪಿಟ್ಟು ಕಾಫಿ ಮಾಡ್ತೀಯಾ?"
“ಹೂಂ."
"ಎಷ್ಟು ಜನಕ್ಕೆ ಹೇಳು?"
"ಗೊತ್ತು ಹೋಗ್ರಿ. ಮೂರು ಜನಕ್ಕೆ."
"ಬುದ್ಧಿವಂತೆ."
"ಆ ಆನಂದ ವಿಲಾಸ ದಾಟ್ಕೊಂಡು ಹೋಗಬೇಕೇನೋ ದಿನಸಿನ ಅಂಗಡಿಗೆ?"
"ಹೆದರಬೇಡ ಮಹಾರಾಯ್ತೀ. ಅಂಗಡಿ ಮೊದಲೇ ಸಿಗುತ್ತೆ. ಅಲ್ಲಿಂದಲೇ