ಪುಟ:ನವೋದಯ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

386

ಸೇತುವೆ

ಇಲ್ಲವೋ, ನಾನು ಎಚ್. ಎಮ್. ಆದಮೇಲೆ ಇಂಗ್ಲಿಷೂ ಕನ್ನಡವೂ ಸೇರಿಸಿ
ಮುನ್ನೂರು ಪುಸ್ತಕ ತರಿಸಿದೆ."
“ಓ!”
“ಆ ವೆಂಕಟರಾಯರು ನಿಧಿ ಮೇಲಿನ ನಾಗರ ಹಾವಾಗಿದ್ರು. [.'ಶಾಲೆಯೊಳಗೆ
ಮಾತುಕತೆ ಎಂದು ಬಹುವಚನದ ಸಂಬೋಧನೆ.] ದುಡ್ಡಿರೋದು ಯಾತಕ್ಕೆ ಹೇಳಿ?
ಕಾನೂನು ಪ್ರಕಾರ ಮೀಸಲಾಗಿರೋದನ್ನ ಖರ್ಚು ಮಾಡದೆ ಇದ್ದರೆ ಅದಕ್ಕೇನರ್ಥ?
ಆ ವಿಷಯದಲ್ಲೆಲ್ಲ ನಾನು ಮೀನಮೇಷ ಎಣಿಸುವವನೇ ಅಲ್ಲ."
ಜವಾನ ಬಂದು ಮೇಜಿನ ಮೇಲಿದ್ದ ಹೂದಾನಿಯನ್ನೊಯ್ದ. ಎರಡು ನಿಮಿಷ
ಗಳಲ್ಲೆ ಹೊಸ ಹೊಗೊಂಚಲಿನೊಡನೆ ಅದು ಮರಳಿ ಬಂತು.
ಜಯದೇವ ಯೋಚಿಸಿದ: ರಂಗರಾಯರಿದ್ದಾಗಲೂ ಇಂತಹ ಶಿಸ್ತು ಓರಣ
ಸಾಧ್ಯವಿರಲಿಲ್ಲವೆ? ನಂಜುಂಡಯ್ಯ ಆಗಲೂ ಆ ವಿಷಯಕ್ಕೆ ಗಮನ ಕೊಡುವುದು
ಆಗುತ್ತಿರಲಿಲ್ಲವೆ? ಆಗದೇನು? ಆದರೆ ಅವರಿಗೆ ಆಸಕ್ತಿ ಇರಲಿಲ್ಲ, ಅಷ್ಟೆ.
ಹಿಂದೆ ಆ ಕೊಠಡಿಯಲ್ಲಿ ಜಯದೇವನಿಗೆ ನಂಜುಂಡಯ್ಯನ ಪರಿಚಯವನ್ನು
ರಂಗರಾಯರು ಮಾಡಿಕೊಟ್ಟಿದ್ದರು. ಆಗಲೂ ನಂಜುಂಡಯ್ಯನವರಿಗೊಂದು ಹ್ಯಾಟಿತ್ತು.
ಬೇರೆ. ಹಳೆಯದು.
ನಂಜುಂಡಯ್ಯ ಸಿಗರೇಟು ಹಚ್ಚಿದರು. ಕಡ್ಡಿ ಎಸೆಯಲು ಮೇಜಿನ ಮೇಲೆಯೆ
ಭಸ್ಮ ಕುಂಡವಿತ್ತು ಈಗ.
ಅವರು ಕೇಳಿದರು:
"ವ್ಯವಸ್ಥೆ ನೋಡಿ ತೃಪ್ತಿಯಾಯ್ತೇನು?"
“ఓಹೋ. ಇಂಥ ಕಡೆ ಕೆಲಸ ಮಾಡೋದಕ್ಕೆ ಹಿತವಾಗಿರುತ್ತೆ; ಮನಸ್ಸಿಗೆ
ಉಲ್ಲಾಸ ಇರುತ್ತೆ."
"ಆ ವಿಷಯ ನಾನು ಭರವಸೆ ಕೊಡಲಾರೆ," ಎ೦ದರು ನಂಜುಂಡಯ್ಯ,
ಸಿಗರೇಟಿನ ಬೂದಿಯನ್ನು ಕುಂಡಕ್ಕೆ ಕೆಡವಿ.
ಅವರ ನೋಟ, ಅಂಗಳ ದಾಟಿ ಕೊಠಡಿಯ ಕಡೆ ಬರುತ್ತಿದ್ದ ಯಾರ
ಮೇಲೆಯೋ ನೆಟ್ಟಿತ್ತು.
ಒಳಕ್ಕೆ ಬಂದ ಸದ್ದು. ಮಾತಿಲ್ಲದೆಯೆ ನಮಸ್ಕಾರ ಸ್ವೀಕಾರ.
ಜಯದೇವ, ಬಂದವರು ಯಾರೆಂದು ತಿರುಗಿ ನೋಡುತ್ತಿದ್ದಂತೆಯೆ
ನಂಜುಂಡಯ್ಯನೆಂದರು:
"ಲಕ್ಕಪ್ಪ ಗೌಡರು. ಇವರು ಜಯದೇವ್."
ಕೊಡೆ ಹಿಡಿದಿದ್ದ ಲಕ್ಕಪ್ಪ ಗೌಡರು, ಕೈಗಳ ಜತೆಯಲ್ಲಿ ಅದನ್ನೂ ಎತ್ತಿ,
"ನಮಸ್ಕಾರ," ಎಂದರು.
ಜಯದೇವ ಎದ್ದುನಿಂತು ನುಡಿದ:

o