ಪುಟ:ನವೋದಯ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

388

ಸೇತುವೆ

ಸುಧಾರಿಸ್ಕೊಂಡು ಹೋಗೋಣ". ಎಂದರು.
"ಇವತ್ತು ಗುರುವಾರ. ಮೊದಲನೇ ಪಿರೇಡು ಇತಿಹಾಸ-ಏಳನೆ ತರಗತಿಗೆ.
ತಮ್ಮದು ಸಾರ್", ಎಂದು ಲಕ್ಕಪ್ಪ ಗೌಡರೆಂದರು, ಜಯದೇವನನ್ನು ಉದ್ದೇಶಿಸಿ.
“ಸರಿ."
"ಹಾಗಾದರೆ ತಗೊಳ್ಳಿ ಪುಸ್ತಕ. ಅಶೋಕನವರೆಗೆ ಮಾಡಿದೀನಿ. ಅಲ್ಲಿಂದ
ಮುಂದುವರಿಸಿ. ನಾನು ನೋಟ್ಸ್ ಮಾಡ್ಕೊಳ್ಳೋ ಪಧ್ಧತಿ ಇಲ್ಲ. ಕ್ಲಾಸ್ನಲ್ಲೇ ಮುಖ್ಯ
ವಿಷಯ ಹೇಳಿ ಬರೆಸ್ತೀನಿ."
ಜಯದೇವ ಇನ್ನೂ ಯುವಕನೆಂದೇ, ಆತನಿಗಿಂತ ವಯಸ್ಸಿನಲ್ಲಿ ಪ್ರಾಯಶಃ
ಹತ್ತು ವರ್ಷ ದೊಡ್ಡವರಾದ ಲಕ್ಕಪ್ಪ ಗೌಡರು, ಹಿರಿಮೆಯ ಧ್ವನಿಯಲ್ಲಿ ಮಾತನಾಡಿ
ದರು. ಅದನ್ನು ಗುರುತಿಸುವುದು ಸೂಕ್ಷ್ಮ ಸ್ಪರ್ಶಿಯಾದ ಜಯದೇವನಿಗೆ ಏನೇನೂ
ಕಷ್ಟವಾಗಿರಲಿಲ್ಲ.
ಜವಾನ ಬಂದು ಮುಖ್ಯೋಪಾಧ್ಯಾಯರ ಮುಖ ನೋಡಿದ.
ಕೈಗಡಿಯಾರದತ್ತ ದೃಷ್ಟಿ ಹರಿಸಿ ಅವರೆಂದರು:
"ಹೂಂ ಬಾರಿಸು".
ಎರಡನೆಯ ಬಾರಿ ಢಣ್ ಢಣ್ ಎನ್ನುತ್ತಲೆ, ಶಾಲೆಯಲ್ಲಿ ನೀರವತೆ ನೆಲೆಸಿತು.
ಆ ನೀರವತೆಯನ್ನು ಮುಕ್ತಾಯಗೊಳಿಸುತ್ತ ನೂರು ಕಂಠಗಳಿಂದ ಧ್ವನಿ
ಹೊರಟಿತು:
"ಜನಗಣಮನ ಅಧಿನಾಯಕ ಜಯಹೇ..."
ಹುಡುಗರ ಪ್ರಾರ್ಥನೆಯಷ್ಟೇ ಅಲ್ಲ. ಅದು ರಾಷ್ಟ್ರಗೀತ ಕೂಡ. ಎಲ್ಲರೂ
ಎದ್ದು ನಿಂತು ಗೌರವಿಸಬೇಕಾದ ಹಾಡು. ಆದರೆ ಉಪಾಧ್ಯಾಯರ ಕೊಠಡಿಯಲ್ಲಿ ಆ
ಮೂವರು ಕುಳಿತೇ ಇದ್ದರು. ಏಳಲೆಂದು ಜಯದೇವ ತವಕಗೊಂಡ. ಆದರೆ
ಉಳಿದಿಬ್ಬರಿಗೆ ಅದರ ಕಡೆ ಗಮನವೇ ಇರಲಿಲ್ಲ.
ಹುಡುಗರ ಪ್ರಾರ್ಥನೆಯ ನಡುವೆ ತಮ್ಮ ಮಾತು ಕೇಳಿಸದೆ ಹೋಗಬಾರದೆಂದು
ಗಟ್ಟಿಯಾದ ಧ್ವನಿಯಲ್ಲಿ ಲಕ್ಕಪ್ಪಗೌಡರೆಂದರು:
"ನಾನು ಆಗ್ಲೆ ಹೇಳ್ಲಿಲ್ವೆ? ಪಾಠ ಹಂಚಿಕೊಳ್ಳೋದು ಏನು ಮಹಾ ಕೆಲಸ!
ಎರಡೇ ನಿಮಿಷದಲ್ಲಿ ಮಾಡಿ ಮುಗಿಸಿದೆವೊ ಇಲ್ವೊ?"
ಅದಕ್ಕೆ ಕಡಮೆಯಾಗದಂತೆ ತಮ್ಮ ಧ್ವನಿಯನ್ನೂ ಏರಿಸಿ ನಂಜುಂಡಯ್ಯ
ನುಡಿದರು:

"ಇನ್ನು ಮುಂದೆ ಹೀಗೆಲ್ಲಾ ಮಾಡೋದಕ್ಕೆ ಆಗೊಲ್ಲ ಲಕ್ಕಪ್ಪಗೌಡರೆ.: ಇಬ್ಬರೇ
ಇದ್ದಾಗ ಏನೋ ಒಂದು ರೀತಿ. ಮೂರು ಜನ ಇದೀವಿ ಅಂದ್ಮೇಲೆ ಆಗಾಗ್ಗೆ ನಾವು
ಟೀಚರ್ಸ್ ಮೀಟಿಂಗು ಮಾಡ್ಲೇ ಬೇಕು."
"ದಿನಾ ನಾವು ಮೀಟ್ ಮಾಡ್ತಾ ಇರ್ತೀವಲ್ಲ.ಇಷ್ಟು ಮೀಟಿದರೆ ಸಾಲದೋ?