ಪುಟ:ನವೋದಯ.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

416

ಸೇತುವೆ

ಗೊತ್ತಿದೆ. ಆದರೆ, ತಗೊಳ್ದೇ ಇದ್ರೆ, ಮನಸ್ಸಿಗೆ ಸಮಾಧಾನವಾಗೋದಿಲ್ಲ."
"ನಿಮ್ಮ ಹೆಡ್ಮೇಸ್ಟ್ರಿಗೆ ವರ್ಗವಾಯ್ತೇನು?" ಎಂದು ಜಯದೇವ ಕೇಳಿದ.
"ಇಲ್ವಲ್ಲ. ಅವರೇ ಇದಾರೆ. ರುಮಾಲಿನೋರು."
"ನೀವಿಬ್ಬರೂ ಅನ್ಯೋನ್ಯವಾಗಿದೀರಿ. ನಿಮ್ಮನ್ನ ನೋಡಿದರೆ ಅಸೂಯೆ
ಯಾಗುತ್ತೆ."
"ಹೊಹ್ಹೋ," ಎoದು ತಿಮ್ಮಯ್ಯ ನಕ್ಕರು. ಆದರೆ ಮಾಧ್ಯಮಿಕ ಶಾಲೆಯ
ಅಧ್ಯಾಪಕವೃಂದದ ನೆನಪಾದಾಗ ಅವರ ಮುಖ ಗಂಭೀರವಾಯಿತು. ಅವರೆಂದರು:
"ನಿಮ್ಮ ಫಿತೂರಿ ಮೇಸ್ಟ್ರುಗಳ ಶಾಲೆಗಿಂತ ನಮ್ಮದೇ ವಾಸಿ. ಒಪ್ಕೊಳ್ತೀನಿ."
"ನಿನ್ನೆ ನೀವು ಬಂದಾಗ ಇಂದಿರಾ ಮನೆಗೆ ಊಟಕ್ಕೆ ಹೋಗಿದ್ವಿ. ಇಂದಿರಾ
ನಿಮಗೆ ನೆನಪಿಲ್ವೆ?"
“ಕೃಷ್ಣಪ್ರೇಮದ ರಾಧಾ! ನೆನಪಿಲ್ದೆ ಏನು?"
ಅಷ್ಟು ಹೇಳಿ ತಿಮ್ಮಯ್ಯ ಸ್ವರ ತಗ್ಗಿಸಿ ನುಡಿದರು:
"ನೀವು ಅಲ್ಲಿಗೆ ಹೋಗಿ ಒಳ್ಳೇ ಕೆಲಸಮಾಡಿದ್ರಿ. ಅವರು ನಿಜವಾಗಿಯೂ
ಸಂಭಾವಿತ ಜನ."
"ಅಂತೂ ಇಲ್ಲಿಗೆ ಬಂದ್ಮೇಲೆ ಎರಡು ಮೂರು ಕಡೆ ಊಟವಾಯ್ತುಪ್ಪ. ಲಕ್ಕಪ್ಪ
ಗೌಡರ ಮನೇಲಿ__"
ಅಲ್ಲಿ ಅವರು ಊಟಮಾಡಿದರೆಂಬ ಆಶ್ಚರ್ಯಕ್ಕಿಂತಲೂ ತನಗೆ ಹಾಗೆ ಆ ದಂಪತಿ
ಯನ್ನು ಸತ್ಕರಿಸುವ ಅವಕಾಶ ಸಿಗಲಿಲ್ಲವೆಂದು ನೊಂದು ತಿಮ್ಮಯ್ಯ, ಜಯದೇವನನ್ನು
ನಡುವೆ ತಡೆದು ಅ೦ದರು:
“ನೋಡಿದಿರಾ? ನಾನು ಅದೇನು ತಪ್ಪುಮಾಡಿದೆ ಅ೦ತ?...ಹುಂ... ನನ್ನ ಮನೆ
ಹಳ್ಳೀಲಿರೋ ಬದಲು ಇಲ್ಲೇ ಇರ್‍ತಿದ್ರೆ, ಅದು ಹ್ಯಾಗೆ ಬೇರೆಯವರ ಮನೆಗೆ
ಹೋಗ್ತಿದ್ರೋ ನೋಡ್ಕೊಳ್ತಿದ್ದೆ."
ಆ ಉದ್ವೇಗದ ಅನಂತರ ಲಕ್ಕಪ್ಪಗೌಡರ ನೆನಪಾಗಿ ತಿಮ್ಮಯ್ಯನೇ ಅಂದರು:
“ಆತ ದೊಡ್ಮನುಷ್ಯ. ನಿಮ್ಮ ಶಾಲೇಲಿ ಕರ್ಣಾರ್ಜುನ ಯುದ್ಧ ಈಗ್ಲೂ ನಡೀ
ತಿರ್‍ಬೇಕು, ಅಲ್ವೆ?"
"ಊರಿಗೆಲ್ಲ ಗೊತ್ತಾಗ್ಬಿಟ್ಟಿದೆಯೇನು ಅವರ ಜಗಳದ ವಿಷಯ?"
"ಗೊತ್ತಾಗದೆ? ಅವರೇ ಹೋಗಿ ಹೇಳ್ಕೊಂಡು ಬರ್‍ತಾರೆ."
"ಹಾಗಾದರೆ ಆ ಇಬ್ಬರಲ್ಲಿ ಯಾರು ಒಳ್ಳೆಯವರೂಂತ?"
"ಒಬ್ಬ ತ೦ಜಾವೂರು ಠಕ್ಕ, ಇನ್ನೊಬ್ಬ ಕುಂಭಕೋಣಂ ಠಕ್ಕ__ಇಬ್ಬರೂ ಸರಿ
ಯಾಗಿದಾರೆ. ಆ ಲಕ್ಕಪ್ಪಗೌಡ ನನ್ನ ಜಾತಿಯವನೇ. ಹಾಗೇಂತ ಮನಸ್ಸಿನಲ್ಲಿರೋ
ದನ್ನ ಮುಚ್ಚಿಟ್ಟುಕೊಳ್ಳೋ ಮನುಷ್ಯ ನಾನಲ್ಲ."
ಮಾನವನಲ್ಲಿ ಜಯದೇವನಿಗೆ ಇದ್ದ ವಿಶ್ವಾಸಕ್ಕೆ ಸಾಕ್ಷ್ಯಬೇಕಾಗಿತ್ತು. ಅದನ್ನು