ಪುಟ:ನಾಸ್ತಿಕ ಕೊಟ್ಟ ದೇವರು.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಯಾವ ಜನ್ಮದ ಶಾಪ?

೧೦೩

"ಒಳ್ಳೇದೇ ಆಯ್ತು, ಅನ್ನಿ. ಆದರೂ, ಮದುವೆ ಮುಗಿಸ್ಕೊಂಡು ಹೋಗಿದ್ದರೆ ಚೆನಾಗಿತ್ತು. ಅಲ್ದೆ ನಿಮ್ಮ ಮಗಳದೂನೂ . . .”
ನಿನಗೆ ಯಾತಕ್ಕೆ ಇದರ ಉಸಾಬರಿ? – ಮುಚ್ಕೊಂಡು ಹೋಗಯ್ಯ ತೆಪ್ಪಗೆ! ಎಂದು ಆಕ್ರೋಶದ ನುಡಿ ಒಳಗೆ ರೂಪುಗೊಂಡರೂ, ಅದನ್ನು ಹೊರಗೆಡವದೆ ವಿಶ್ವನಾಥಯ್ಯ ನಿಟ್ಟುಸಿರು ಬಿಟ್ಟು, ನರಸಿ೦ಗರಾಯರ ಮಗ್ಗುಲಲ್ಲಿ ನಡೆದರು.
ಹೃದಯ ತೋಡಿಕೊಳ್ಳಲು ಯಾರಾದರೇನು? ಎ೦ಬ ತೀರ್ಮಾನಕ್ಕೆ ಬಂದು, ಉಸಿರು ಕಟ್ಟಿದೆಯಲ್ಲಾ ಎಂದು, ಕೋಟಿನ ಗುಂಡಿಯನ್ನು ಬಿಚ್ಚಿದರು. ದಣಿದು ಒಳಗೆ ಕುಳಿತಿದ್ದ ಪದಗಳು ಕುಂಟುತ್ತ ಒಂದರ ಹಿಂದೆ ಒಂದಾಗಿ ಹೊರಬಂದುವು:
“ಏನು ಹೇಳ್ಲಿ ಸಾರ್? ಪ್ರಾರಬ್ಧ ...”

ರೇಗುತ್ತ ಆ ಮಾತು ಈ ಮಾತು ಆಡುತ್ತ ಇದ್ದರೆ ಚೆನ್ನು. ಮನೆಗೆ ಶೋಭೆ. ಬದಲು, ಅಂತರ್ಮುಖಿಯಾಗಿ ಮೌನ ತಳೆದರೆ?
_ಗಂಡನ ಹೊಸ ನಡತೆಯಿಂದ ಹೆಂಡತಿಗೆ ದಿಗಿಲು.
ಸಮಯ ನೋಡಿ ವಿಶ್ವನಾಥಯ್ಯನನ್ನು ಅವರಾಕೆ ಮಾತನಾಡಿಸಿದರು:
"ಕೇಳಿಸ್ತೆ ?"
ಹೇಳುವುದಕ್ಕೆ ಮುನ್ನವೇ ಆ ಪ್ರಶ್ನೆಯ ಪೀಠಿಕೆ.
ವಿಶ್ವನಾಥಯ್ಯ ತಲೆ ಎತ್ತಿ ಪತ್ನಿಯನ್ನು ನೋಡಿದರು.
“ಮಗೂ ಮದುವೆಯ ವಿಷಯ ಏನು ತೀರ್ಮಾನ ಮಾಡಿದಿರೀಂದ್ರೆ...”
"ಯಾವ ಮಗು?"
"ಗಿರಿಜಾದು."
ಕಡತದ ಮೇಲೆ ಷರಾ ಬರೆದುದನ್ನು ನಿರ್ವಿಕಾರವಾಗಿ ಓದುವವರಂತೆ ವಿಶ್ವನಾಥಯ್ಯ ಅಂದರು: