ಪುಟ:ನಾಸ್ತಿಕ ಕೊಟ್ಟ ದೇವರು.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೬

ನಾಸ್ತಿಕ ಕೊಟ್ಟ ದೇವರು

ಹಾಗೆಯೇ ಮುಂದಕ್ಕೂ...
ಆ ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ. ಅಲ್ಲಿಂದ ಇನ್ನೊಂದಕ್ಕೆ ಬಳಸಿಕೊಂಡು.
ಮೈಲೂರು, ಚಿತ್ರಾವತಿ, ಭಧ್ರಾನಗರ,ಬಹುಮನಿಪುರ . . .
ಎಲ್ಲೆಡೆಗಳಲ್ಲೂ ಅದೇ ವೈಭವಯುತ ಸ್ವಾಗತ.
ಜನ ಮಾತನಾಡಿಕೊಂಡರು:
' ಕುರುಡನಿಗೆ ದೃಷ್ಟಿ ಬಂದಂತಾಯ್ತು.'
' ಕತ್ತಲೇಲಿ ಬೆಳಕು ಕಂಡ ಹಾಗಾಯ್ತು.'
' ಇನ್ನು ಅಕ್ಕಿಯ ಅಭಾವ ಇಲ್ಲವಲ್ಲ!'

****

ಅಂತೂ ಕೊನೆಗೊಮ್ಮೆ ರೈಲುಗಾಡಿ__ಹಗಲು ಇರುಳುಗಳ ಬಳಿಕ__ಒಂದೆಡೆ ತಂಗಬೇಕಾಯಿತು. ಅದಕ್ಕೆ ಕಾರಣವಿಷ್ಟೆ. ಅಲ್ಲಿಂದ ಮುಂದೆ ಹಾದಿ ಇರಲಿಲ್ಲ. ಅದೇ ಕೊನೆಯ ನಿಲ್ದಾಣ. ಭಾಗ್ಯನಗರದ ಕಾರ್ಯಕ್ರಮವನ್ನು ಮೀರಿಸಲೆತ್ನಿಸುವಂತಹ ಸಮಾರಂಭ ಏರ್ಪಟ್ಟಿತ್ತು ಆ ಊರಲ್ಲಿ. ಮಂತ್ರಿವರ್ಯರು ಮಾತ್ರ ಇರಲಿಲ್ಲ, ಅಷ್ಟೆ.
ಆಯಾಸಗೊಂಡು ಬಸವಳಿದಿದ್ದ ಗಾರ್ಡು, ಚಾಲಕರು ಕೆಳಗಿಳಿದರು. ತಮ್ಮ ಕೆಲಸ ಮುಗಿಯಿತೆಂದು ಅವರಿಗೆ ಸಮಾಧಾನವಾಗಿತ್ತು. ಅವರು ಮುಗುಳು ನಗಲಿಲ್ಲ. ಮಂತ್ರಿಗಳಂತೆ ಮುಗುಳು ನಕ್ಕು ಅವರಿಗೆ ಅಭ್ಯಾಸವಿರಲಿಲ್ಲ.
ಅಲ್ಲಿಯೂ ಒಬ್ಬಿಬ್ಬರು ಕೇಳಿದರು:
'ಎಲ್ಲಿದ್ದಾರೆ? ಎಲ್ಲಿದೆ?'
ಉತ್ತರವಿದ್ದೇ ಇತ್ತು:
'ಎಷ್ಟೊಂದು ಊರು ದಾಟಿ ಬಂದಿರೋದು! ಏನ್ಕಥೆ! ರೈಲುಗಾಡಿಯಾದರೂ ಇಲ್ಲೀತನಕ ಬಂತಲ್ಲಾ ಅಂತ ನಾವು ಸಂತೋಷಪಡ್ಬೇಕು.'
ಕೆಲವರಿಗೆ ಸಮಾಧಾನವಾಯಿತಾದರು ಅಲ್ಲೊಂದು ಇಲ್ಲೊಂದು ಸ್ವರ ಮತ್ತೂ ಕೆಳಿಸಿತು:
' ಎಲ್ಲಿ ದೇವರು? ಅನ್ನ ದೇವರು?'