ಪುಟ:ನಾಸ್ತಿಕ ಕೊಟ್ಟ ದೇವರು.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪

ನಾಸ್ತಿಕ ಕೊಟ್ಟ ದೇವರು

"ಏನಿಲ್ಲ ಭಾಯಿಸಾಬ್! ನಾನು ಊರ್‍ಗೆ ಬರ್‍ಬೇಕಂತೆ."
"ಯಾವಾಗ ಬರೆದ ಕಾಗದ ?"
"ಎರಡು ವಾರವಾಯ್ತು."
"ಹೋಗುವಿಯಂತೆ. ನಿನಗೆ ಲೀವ್ ಕೊಟ್ಟೇ ಕೊಡ್ತಾರೆ."
"ಅದಲ್ಲ! ಯಾರಿಗೆ ಬೇಕು ಲೀವು? ನಮ್ಮ ಹಳ್ಳೀ ಜನಕ್ಕೆ ಬುದ್ಧಿ ಇಲ್ಲಾಂತ ಬೇಸರ."

****

ಅವನ ಹಳ್ಳಿ ಮಣ್ಣೂರು. ಕನ್ನಡ ರಾಜ್ಯದ ಮಂಡ್ಯದಿಂದ ಊರು ಬಸ್ಸಿನಲ್ಲಿ, ಹದಿನೆಂಟು ಮೈಲಿ ಪ್ರಯಾಣ ಮಾಡಬೇಕು ಆ ಹಳ್ಳಿ ಯನ್ನು ತಲುಪಲು.
ಬೀರಣ್ಣ, ತಂಗಿ ಸೀತಮ್ಮ, ಬಾಲ್ಯದಲ್ಲೇ ತಂದೆಯನ್ನು ಕಳೆದು ಕೊಂಡವರು. ತಾಯಿ, ಕೂಲಿ ನಾಲಿ ಮಾಡಿ ಬದುಕು ಸಾಗಿಸುವ ಬಡವೆ.ಹಳ್ಳಿಯ ಸಾಲೆಗೆ ಅವಳ ಮಕ್ಕಳು ಸ್ವಲ್ಪ ದಿನ ಮಣ್ಣು ಹೊತ್ತಿದ್ದರು. ಬೀರಣ್ಣ ಅರೆ ಹೊಟ್ಟೆಯಲ್ಲಿದ್ದರೂ ಹೃಷ್ಟಪುಷ್ಟನಾಗಿದ್ದ. ಆಟ ಅವನಿಗೆ ಇಷ್ಟ. ಪಂದ್ಯಾಟದಲ್ಲಿ ಮೊದಲಿಗ. ಪಾಠ ಸೇರುತ್ತಿರಲಿಲ್ಲ. ಮಾಧ್ಯಮಿಕ ಶಾಲೆಯ ಕೊನೆಯ ವರ್ಷದಲ್ಲಿದ್ದಾಗ ಅವನ ಮೇಷ್ಟ್ರು ಗುಡುಗಿದರು :
"ದಡ್ಡ ಶಿಖಾಮಣಿ! ನೀನೊಬ್ಬ ಗುಲ್ಡು ಕಣೋ. ಯಾವ ದಂಡಕ್ಕೆ ಬರ್‍ತೀಯಾ ಶಾಲೆಗೆ? ಹೋಗು! ಎಮ್ಮೆ ಕಾಯೋಕೆ ಹೋಗು!"
ಹಾಗೆ ಹೊರಟ ಬೀರಣ್ಣ ಮತ್ತೆ ವಿದ್ಯಾಭ್ಯಾಸದ ಉಸಾಬರಿಗೆ ಹೋಗಲಿಲ್ಲ.
ಅವನ ಹೆಸರು ಮಾತ್ರ ಅಂದಿನಿಂದ 'ಗುಲ್ಡು'ಎಂದಾಯಿತು.
ತಾತ್ಸಾರದಿಂದ ಹಾಗೆ ಕರೆಯುವವರಿದ್ದರು. ಆದರೂ ಬೀರಣ್ಣನಿಗೆ ಆ ಹೆಸರು ಅಪ್ರಿಯವಾಗಿ ತೋರಲಿಲ್ಲ.
ಯಾರಾದರೂ ತನ್ನ ತಂಟೆಗೆ ಬಂದರೆ ಅವನೆನ್ನುತ್ತಿದ್ದ:
"ನಾನು ಯಾರು ಗೊತ್ತೇನ್ರೊ? ಗುಲ್ಡು! ಹುಷಾರ್!"
ಹಳ್ಳಿಯ ಉಳ್ಳವರ ಹೊಲ ಎತ್ತುಗಳನ್ನು ಗಲ್ಡು ಮೇಯಿಸ ಹೊರಟ. ಒಂದೆರಡು ಸಲ ಕೆಲವು ತಪ್ಪಿಸಿಕೊಂಡುವು. ಎಣಿಕೆಯಲ್ಲಿ ಕಡಮೆ ಬಂದು ಯಾರಾದರೂ ಗದರಿದಾಗ ಗುಲ್ಡು ಎನ್ನುತ್ತಿದ್ದ: