ಪುಟ:ನಾಸ್ತಿಕ ಕೊಟ್ಟ ದೇವರು.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಣ್ಣಿನ ಮಗ ಗನ್ನು ತಂದ

೧೫


"ಲೆಕ್ಕ ಪಕ್ಕ ನನಗೆ ಬರದು. ಮೇಷ್ಟ್ರು ಸರಿಯಾಗಿ ಹೇಳ್ಕೊಟ್ಟೇ ಇಲ್ಲ."
ಹಳ್ಳಿಯಲ್ಲಿ ಪಾರ್ಟಗಳಿದ್ದುವು. ಮಾರಪ್ಪನದೊಂದು ; ಈಶ್ವರಪ್ಪನದೊಂದು. ದಿನವೂ ಬೈಗಳು, ಜಗಳ. "ಒಂದಿಷ್ಟು ಹೊಲ ಕೊಡಿಸ್ತೀನಿ, ಗುಲ್ಡು ಸಾಗುವಳಿ ಮಾಡ್ಲಿ" ಎಂದಿದ್ದ ಮಾರಪ್ಪ, ಬೀರಣ್ಣನ ತಾಯಿ. ಯೊಡನೆ. ಈಶ್ವರಪ್ಪನೂ ಅಂದಿದ್ದ "ನಾನು ಕೊಡಿಸ್ತೀನಿ ಹೊಲ" ಅಂತ. ಕೊಡಿಸಿದವರು ಮಾತ್ರ ಯಾರೂ ಇಲ್ಲ.
ಸೀತಮ್ಮ ಬೇರೆ, ದೊಡ್ಡವಳಾಗಿ ಬೆಳೆದಿದ್ದಳು. ಹಳ್ಳಿಯ ಯುವಕರು ಗುಲ್ಡುವನ್ನು ತಮ್ಮ ಜಗಳಗಳಿಗೆ ಎಳೆದರು.
ತಾಯಿ ಗೋಳಾಡಿ ಎಂಥ ಮಗ ಹುಟ್ಟಿದನಪ್ಪ ತನಗೆ-ಎಂದು ಕಹಿ ಮಾತು ಆಡಿದಳು.
ಆ ಮಾರನೆಯ ಬೆಳಗ್ಗೆ ಬೀರಣ್ಣ ಹಟ್ಟಿಯಲ್ಲಿರಲಿಲ್ಲ.
ಎರಡು ತಿ೦ಗಳಾದ ಮೇಲೆ ಅವನಿಂದ ಕಾಗದ ಬ೦ತು :
"ನಾನು ಮಿಲ್ಟ್ರಿಗೆ ಭರ್ತಿಯಾಗಿದೀನಿ; ನನ್ನ ಯೋಚ್ನೆ ಬುಟ್ಬುಡಿ."

****

ಹಳ್ಳಿಯ ಪುಢಾರಿ ರಂಗಪ್ಪನ ಕಾಲು ಹಿಡಿದು, ಮಗನ ಭೇಟಿಗೆಂದು. ಅವನನ್ನು ತಾಯಿ ಕಳುಹಿದ್ದಳು. ಬೆಂಗಳೂರಿನ ದಂಡಿನ ಶಿಬಿರದಲ್ಲಿ ಗುಲ್ಡು ವನ್ನು ಆತ ಕಂಡ.
ಅವನಿಗೆ ಗುಲ್ಡು ಕೊಟ್ಟದೊಂದೇ ಉತ್ತರ :
"ಮಿಲ್ಟ್ರಿ ಸೇರ್‍ಕೊಂಡಿನ್ನಿ, ಕೈನಲ್ಲಿ ಗನ್ನಿರ್ತೈತೆ!"
ರಂಗಪ್ಪ ವಿಧಾನಸೌಧದ ಉದ್ದಗಲಕ್ಕೆ ಓಡಾಡಿ ಊರಿಗೆ ಮರಳಿದ.
"ನನ್ನ ಯೋಚ್ನೆ ಬುಟ್ಬುಡಿ" ಎಂದು ಬರೆದಿದ್ದನಲ್ಲ ಗುಲ್ಡು?
ಅವರ ಯೋಚನೆ ಮಾತ್ರ ಇವನನ್ನೆಂದೂ ಬಿಟ್ಟಿರಲಿಲ್ಲ.
ಸಿಪಾಯಿ ಗುಲ್ಡು ಹದಿನೈದು ರೂಪಾಯಿಗಳನ್ನು ಮನಿಯಾರ್ಡರ್ ಮಾಡುತ್ತಿದ್ದ ತಾಯಿಗೆ. ಹದಿನೈದು ರೂಪಾಯಿ! ಮಗ ಹತ್ತಿರವಿಲ್ಲದ ದುಃಖವನ್ನು ಸ್ವಲ್ಪಮಟ್ಟಿಗೆ ಶಮನ ಮಾಡುವ ಸಾಮರ್ಥ್ಯವಿತ್ತು ಅದಕ್ಕೆ.
ಮುಂದೆ ಒಂದು ವರ್ಷದಲ್ಲಿ ಗುಲ್ಡು ಕಂಡ ಜಗತ್ತು ಎಷ್ಟೊಂದು ವಿಶಾಲವಾಗಿತ್ತು! ಮಿಲಿಟರಿ ಬದುಕೊಂದು ಬೇರೆಯೇ ಲೋಕ. ಆ