ಪುಟ:ನಾಸ್ತಿಕ ಕೊಟ್ಟ ದೇವರು.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಪ್ಪು ಎಣಿಕೆ

೪೫

ತಮ್ಮ ತಾಯಿಯಾಗಲೀ ಅಥವಾ ಅತ್ತೆಯೇ ಆಗಲೀ ಸ್ವಲ್ಪ ಕಾಲದ ಮಟ್ಟಿಗೆ ಬಂದಿದ್ದರೆ ಎಷ್ಟು ಒಳಿತಾಗುತ್ತಿತ್ತು! ಆದರೆ ವೀಣಾಗೆ ಇಷ್ಟವಿರಲಿಲ್ಲ. ಮದುವೆಯಾದ ಹೊಸತಿನಲ್ಲಿ ಇಬ್ಬರೇ ಇದ್ದರೆ ಚೆನ್ನು–ಎಂಬುದು ಅವಳ ಅಭಿಪ್ರಾಯವಾಗಿತ್ತು. ಅಭಿಪ್ರಾಯವಲ್ಲ, ಬಯಕೆ. ಇದೂ ಒಂದು ರೀತಿಯಲ್ಲಿ ಮೇಲು-ಎಂದು ಅಂದುಕೊಂಡಿದ್ದರು. ಆದರೆ ವಸ್ತುಸ್ಥಿತಿ....
ನಾಗಪ್ಪ ತನ್ನ ಕಾಲಬುಡದಲ್ಲಿದ್ದ ಕಪ್ಪು ಪೆಟ್ಟಿಗೆಗಳನ್ನು ನೋಡಿದ. ಕಚೇರಿಯ ಕಾಗದ ಪತ್ರಗಳು. ಎದುರು ಸೀಟಿನಲ್ಲಿದ್ದ ಫೈಲುಗಳ ಕಟ್ಟನ್ನು ನೋಡಿದ. ಎಲ್ಲಕ್ಕೂ ಮೇಲೆ ಇರಿಸಿದ್ದ ಆ ನೋಟ್.
ಅದೇನೋ ಕರಾಮತ್ತು ನಡೆದಿದೆ ಎಂದು ಅವನು ಬಲ್ಲ. ಆದರೆ ಈ ಜನ ತನಗೇನು ಮಾಡಬಲ್ಲರು? ತಾನಿಲ್ಲದೆ ಹೇಗೆ ನಡೆದೀತುಕಚೇರಿ?
ಎದುರಿಗಿರುವ ಫೈಲನ್ನು ತಾನು ಎತ್ತಿ ಹೊರಕ್ಕೆಸೆದುಬಿಟ್ಟೆ ಅಂದರೆ?
ಜೀಪು ಬಂಗಲೆಯ ಆವರಣವನ್ನು ಹೊಕ್ಕಿತು. ಇಳಿದು ಮುಂದಕ್ಕೆ ನಡೆದ ಸಾಹೇಬರನ್ನು ಫೈಲುಗಳ ಕಟ್ಟಿನೊಡನೆ ನಾಗಪ್ಪ ಹಿಂಬಾಲಿಸಿದ.
ಪ್ರತಿಯೊಂದೂ ಶಾಂತವಾಗಿತ್ತು. [ಗದ್ದಲವಾಗಲು ಎಳೆಯ ಮಕ್ಕಳಿದ್ದುವೆ ಆ ಮನೆಯಲ್ಲಿ?]
"ನಾಗಪ್ಪ-”ನಡೆಯುತ್ತಲಿದ್ದಂತೆ ತಿರುಗಿ ನೋಡದೆಯೇ ಸಾಹೇಬರೆಂದರು.
"ಬುದ್ದಿ..."
"ಅಮ್ಮಾವ್ರ ಬೆಂಡೋಲೆ ಕಳೆದುಹೋಗಿದೆಯಂತಲ್ಲಪ್ಪ."
“ ಹೌದ್ರಾ ಬುದ್ದಿ? ಅದೆಂಗಾಯ್ತು?”
"ಅದ್ನೇ ಒಂದಿಷ್ಟು ವಿಚಾರಿಸ್ಬೇಕು ಈಗ.”
"ಇಚಾರ್‍ಸನ ಬುದ್ದಿ.”
ಆತ ಅರಸು. ಈತ ಮಹಾಪ್ರಧಾನಿ. ಇವನಲ್ಲವೆ ವಿಚಾರಿಸಬೇಕಾದವನು?
ಅನಂತ ಸಾಧ್ಯತೆಗಳಿದ್ದ ಅಪೂರ್ವ ಅವಕಾಶ.
ಆದರೂ ನಾಗಪ್ಪನಿಗೆ ಸ್ವಲ್ಪ ಕಸಿವಿಸಿ ಎನಿಸಿತು, ತನ್ನ 'ಸಂಬಂಧಿಕ'೪ಾದ ಮುಸುರೆಯ ಮಲ್ಲಿಯನ್ನು ನೆನೆದು.