ಪುಟ:ನಾಸ್ತಿಕ ಕೊಟ್ಟ ದೇವರು.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೬

ನಾಸ್ತಿಕ ಕೊಟ್ಟ ದೇವರು

ಸಾಹೇಬರು ನೇರವಾಗಿ, ವಿಶಾಲ ಬ೦ಗಲೆಯ ಒಳಭಾಗಕ್ಕೆ ನಡೆದರು. ಅವರು ಊಹಿಸಿದ್ದಂತೆಯೇ, ಬೈಠಕುಖಾನೆಯಿಲ್ಲಿ ದಿಕ್ಕುಗೆಟ್ಟವರಂತೆ ಕುಳಿತಿದ್ದರು ಅವರ ಪತ್ನಿ.
ನಾಗಪ್ಪ, ಮಲ್ಲಿಯನ್ನು ಹುಡುಕುತ್ತ ಹಿತ್ತಲ ಬಾಗಿಲಿನೆಡೆಗೆ ಸಾಗಿದ, ಬಂಗಲೆಯನ್ನು బಳಸಿ.
ಘಟನೆಯ ವಿವರೆಗಳನ್ನೆಲ್ಲ ತಿಳಿದ ಉಮಾಪತಿ, ಪತ್ನಿಯೊಡನೆ ಹೊರ ಹಜಾರಕ್ಕೆ ಬಂದರು. ಮೂವರು ಸೇವಕರನ್ನೂ ಕರೆದರು.
"ಸಿಕ್ದವರು ಕೊಟ್ಬಿಡಿ. ನಿಮಗೇನೂ ಶಿಕ್ಷೆ ವಿಧಿಸೋದಿಲ್ಲ. ಇಲ್ದೇಹೋದರೆ ಮಾತ್ರ ನಾನು ತೀವ್ರ ಕ್ರಮ ತಗೋಬೇಕಾಗುತ್ತೆ.”
ತುಸು ಕಂಪಿಸಿದಂತೆ ಕಂಡ ಆ ಅಧಿಕಾರ ವಾಣಿಯನ್ನು ಕೇಳಿದಾಗ ನಾಗಪ್ಪನಿಗೆ ನಗೆ ಬಂತು. ಆದರೂ ಆತ ತುಟಿಗಳನ್ನು ಬಿಗಿ ಹಿಡಿದು ನಿಂತ.
ದೇವರ ಸಾಕ್ಷಿಯಾಗಿ ಆ ಮೂವರೂ ನುಡಿದರು, ತಮಗೆ ಏನೂ ತಿಳೀದು ಅಂತ. ವಿಚಾರಣೆ ಇಷ್ಟು ಸುಲಭವಾಗಿ ಮುಗಿದು ಹೋಯಿತಲ್ಲ ಎ೦ದು ಸಾಹೇಬರು ಅಧೀರರಾಗುವುದಕ್ಕೆ ಮುನ್ನವೇ ನಾಗಪ್ಪನೆಂದ:
" ಒಸಿ ನಾ ಇಚಾರಿಸ್ತೀನಿ ಬುದ್ದಿ. ಲೋ ಸಿದ್ದ, ಬಾ ಇಲ್ಲಿ.”
ಸಿದ್ದ ಮಾಲಿ. ಹುಡುಗ. ಹತ್ತಿರ ಬಂದ ಅವನ ಕತ್ತು ಬಗ್ಗಿಸಿ ನಾಗಪ್ಪ ಎರಡು ಗುದ್ದು ಹಾಕಿದ. ಪ್ರತಿಭಟಿಸಬೇಕೆನಿಸಿತು ಉಮಾಪತಿಯವರಿಗೆ. ಆದರೂ ಅವರು ಅಸಹಾಯರಾಗಿ ಸುಮ್ಮನಿದ್ದರು.
ಸಿದ್ದ ಬೊಬ್ಬಿಟ್ಟ, ಅಷ್ಟೆ.
ನಾಗಪ್ಪ ಅಡುಗೆಯವನ ಕಡೆ ತಿರುಗಿ ಗದರಿದ:
"ನಂಜಪ್ಪನವರೇ, ಸತ್ಯ ಏಳ್ಬುಡಿ! ಈ ನಾಗಪ್ಪನ ಕೈಲಿ ಸಿಕ್ಹಾಕೊಂಡೀರಾ!"
ನಂಜಪ್ಪನೆಂದ:
ಹೆಂಡ್ತಿ ಸತ್ತು ಇಪ್ಪತ್ತು ವರ್ಷ ಆಗೋಯ್ತು. ಯಾರಿಗಪ್ಪ ಕೊಡ್ಲಿ ಬೆಂಡೋಲೇನಾ?”
ನಾಗಪ್ಪ ಅಬ್ಬರಿಸಿದ :