ಪುಟ:ನಾಸ್ತಿಕ ಕೊಟ್ಟ ದೇವರು.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಪ್ಪು ಎಣಿಕೆ

೪೯

"ಬೆಳಗ್ಗೆ ನಾನು ಹೋಗ್ತೀನಿ.ಧೈರ್ಯವಾಗಿ ಇದ್ಬಿಡು. ನಿನ್ನ ಬೆಡ್ ರೂಂ ಹೊರಗಡೆ ಮುಸುರೆಯವಳು ಮಲಕ್ಕೊಳ್ಳಿ. ಆ ನಾಗಪ್ಪನಿಗೂ ಇಲ್ಲೇ ಇರೂಂತ ಹೇಳ್ತೀನಿ.”
"ನಾಗಪ್ಪ ಧೈರ್ಯವಂತ."
"ಅವನು ಪ್ರಚಂಡ.. ನೀನು ಮಾತ್ರ ಹುಷಾರಾಗಿರು.”
ಸಾಹೇಬರಾಡಿದ್ದ ಮಾತು ನಾಗಪ್ಪನಿಗೆ ಕೇಳಿಸಿತ್ತು, ಮಾರನೆಯ ದಿನ ಅವರು ಹೊರಟು ಹೋದಮೇಲೆ ಅವನು ಬಹಳ ಹೊತ್ತು ಯೋಚಿಸಿದ. ಇನ್ನು ಕೆಲವೇ ವರ್ಷಗಳೊಳಗೆ ಫಲವತ್ತಾದ ಹೊಲ ಕೊಂಡು ಭವ್ಯವಾದ ಮನೆ ಕಟ್ಟಿಸುವ ಕನಸನ್ನು ಅವನು ಕಂಡಿದ್ದ. ಮನಸ್ಸು ಮಾಡಿದ್ದರೆ ಆ ಮೂರು ವರ್ಷಗಳಲ್ಲೇ ಒಂದಿಷ್ಟು ಉಳಿಸಬಹುದಾಗಿತ್ತು.ಆದರೆ ಖಯಾಲಿ ಖರ್ಚುಗಳಿಗಾಗಿ ಹಣವೆಲ್ಲಾ.ವ್ಯಯವಾಗಿತ್ತು. ಈಗ ಕೆಲಸವೇ ಹೋಯಿತೆಂದರೆ ಬರಿಗೈ.ಭಿಕಾರಿಯಾಗಿ ಬದುಕು ಆರಂಭಿಸಿದ್ದ ಸ್ಥಿತಿಗೇ ಪುನಃ ಪ್ರವೇಶ. ಇದೆಂಥಾ ಸಾಹೇಬ್ರು ಎಂಥಾ ಅಮ್ಮಾವ್ರು. . .ಥುತ್. . .
ಇನ್ನು ಆರು ದಿನವಂತೂ ಈ ಹೆಂಗಸು ತನ್ನ ಕೈದಿಯಿದ್ದ ಹಾಗೆ. ಇವಳ ಕತ್ತು, ಹಿಸುಕಿ ಆಭರಣಗಳನ್ನೆಲ್ಲ ದೋಚಿಕೊಂಡು ಪರಾರಿಯಾಗಬಹುದು. ಆದರೆ ಮನೆಯಲ್ಲಿರುವ ಹೆಂಡತಿ ಮಕ್ಕಳ ಗತಿ? ಅವರ ಹಾದಿ ಅವರು ನೋಡಿಕೊಳ್ಳುತ್ತಾರೆ. ಬೇಕಿದ್ದರೆ ಇವಳೊಬ್ಬಳನ್ನು, . . ಸಿಕ್ಕಿಹಾಕಿಕೊಂಡರೊ? ಫಾಸಿ ಶಿಕ್ಷೆ! ಇಷ್ಟಕ್ಕೂ ಆಭರಣಗಳೇನೂ ಇಲ್ಲಿ ఇల్లದೆ ಹೋದರೆ? ಮಲ್ಲಿ ಹೇಳಲಿಲ್ಲವೇ?–ಒಂದು ದಿನವೂ ಬೆಲೆಬಾಳುವಂಥವನ್ನೇನೂ ಈಕೆ ತೊಟ್ಟುಕೊಂಡಿಲ್ಲ. ಊರಲ್ಲೇ ಬಿಟ್ಟು ಬಂದಿದ್ದರೋ ಏನೋ. ಅಥವಾ ಆಭರಣಗಳೇ ಇಲ್ಲವೋ? ಇದೇ ಈಗ ಆಫೀಸರಾದವನ ಕೈಯಲ್ಲಿ ಇನ್ನೇನಿದ್ದೀತು ?
ಇವರು ಎಂಥ ಜನವೋ? ಇವರ ಚರಿತ್ರೆಯೇನೋ? ಅಮ್ಮಾವ್ರ ಬಾಯಿ ಬಿಡಿಸಲು ಮಲ್ಲಿ ಸಮರ್ಥಳಾಗಿರಲಿಲ್ಲ. ಅಲ್ಲಿ ಯಾವಾಗಲೂ ಬೀಗ ಬಿಗಿದೇ ಇರುತ್ತಿತ್ತು. ನೋಟಕ್ಕೇನೋ ದರ್ಪಿಷ್ಟೇ. ವಾಸ್ತವವಾಗಿ ಪುಕ್ಕಲೇ ಇರಬೇಕು. ಮೈಯಲ್ಲಿ ಇಷ್ಟೂ ಮಾಂಸವಿಲ್ಲದ ಎಳೇಕಡ್ಡಿ. ಮಲ್ಲಿಗೆ ಇವಳೆಲ್ಲಿ ಸಮ. . . .