ಪುಟ:ನಾಸ್ತಿಕ ಕೊಟ್ಟ ದೇವರು.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೮೪

ನಾಸ್ತಿಕ ಕೊಟ್ಟ ದೇವರು

ಕೊಟ್ಟ ತಂತಿಯ ಒಕ್ಕಣೆಯನ್ನು ಗಿರಿಜೆಯಿಂದ ತಿಳಿದಿದ್ದರೂ ಆಕೆ ಅಂದರು:
"ಅವರಿಗೇನಾಗೆದೆ?"
ಪ್ರಸಾದ ತಿವಿಯುವ ನೋಟದಿಂದ ತಂದೆಯನ್ನು ನೋಡಿದ.
ವಿಶ್ವನಾಥಯ್ಯ ಪತ್ನಿಯನ್ನು ದುರದುರನೆ ದಿಟ್ಟಿಸಿ, "ಪೂರ್ತಿಮಾಡು. ಧಾಡಿ-ಅಂತ," ಎಂದು ಗುಡುಗಿದರು.
ಪ್ರಸಾದ ದಡದಡನೆ, ಹಿಂದೆ ತನ್ನದಾಗಿದ್ದ ಈಗ గిరిಜೆ ಬಳಸುತ್ತಿದ್ದ. ಕೊಠಡಿಗೆ ಸೂಟ್ ಕೇಸ್-ಕಿಟ್ ಗಳೊಡನೆ ಹೊರಟು ಹೋದ.
ಘಂಟೆಗಳು ಕಳೆದರೂ ಪ್ರಸಾದನ ಸಿಟ್ಟು ಇಳಿಯುವ ಲಕ್ಷಣ ಕಾಣಿಸಲಿಲ್ಲ.
ವಿಶ್ವನಾಥಯ್ಯನವರು ಸ್ನಾನ ಪೂಜೆ ಪತ್ರಿಕೆಗಳಲ್ಲಿ ನಿರತರಾಗಿದ್ದರು. ಊಟಕ್ಕೆ ಮುನ್ನ ಪ್ರಸಾದ ಮನೆಯಿಂದ ಹೊರಬೀಳುವ ಸಿದ್ಧತೆಯಲ್ಲಿದ್ದುದನ್ನು ಕಂಡ ಅವರು, ಕನ್ನಡಕವನ್ನು ಮೂಗಿನ ತುದಿಗಿಳಿಸಿ ಕತ್ತು ಬಾಗಿಸಿ బరిಯ ಕಣ್ಣುಗಳಿಂದ ಮಗನನ್ನು ನೋಡಿ ಅ೦ದರು:
"ಎಲ್ಲಿಗೆ ಇಷ್ಟೊತ್ನಲ್ಲಿ?”
ಹೊಸ್ತಿಲ ಮೇಲೆ ನಿಂತು ಪ್ರಸಾದ ನುಡಿದ :
"ಟಿಕೆಟು ಕೊಳ್ಳೋಕೆ! ವಾಪಸು ಹೋಗ್ಬೇಕಲ್ಲ? ಸುಳ್ಳು ತಂತಿ ಕೊಟ್ಟು ಕರೆಸಿದಿರಿ. ಸಂತೋಷವಾಯ್ತು ತಾನೆ? ನನಗೆ ರಜಾ ಇಲ್ಲ. ನಾನು ಹೊರಡ್ಬೇಕು.”
ವಿಶ್ವನಾಥಯ್ಯನವರ ಸುಕ್ಕುಗಟ್ಟಿದ ಮುಖದ ಸ್ನಾಯುಗಳು ಮಿಸುಕಿದುವು.
"ಸಾಕು ತಲೆಹರಟೆ !” ಎ೦ದು ಅವರು ಗದರಿದರು.
ತಂದೆ ಮಕ್ಕಳ ಧ್ವನಿ ಕೇಳಿ ಪ್ರಸಾದನ ತಾಯಿ ಹೊರಬಂದರು.
“ಊಟಕ್ಕಾಯ್ತು ಅಂದ್ರೆ . . . "
ಹೊರಬೀಳಲೋ ಬೇಡವೋ ಎಂದು ಪ್ರಸಾದ ಅನಿಶ್ಚತೆಯಿ೦ದ ಕ್ಷಣಕಾಲ ಹೊಯ್ದಾಡಿದ.
ನಿರೀಕ್ಷಿಸುತ್ತಲಿದ್ದ ಮಾತುಕತೆ ಮುಗಿದುಹೋಗಲೆಂದು ಆತ ಮತ್ತೆ ಮನೆಯೊಳಗೆ ಬಂದ.