ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಸಬ್ಬೋಧ ಚಂದ್ರಿಕೆ ದುಷ್ಟರೋಗಕ್ಕೆ ದೇಹವು ಬಲಿಯಾದರೂ ಚಿಂತೆಯಿಲ್ಲ, ಹಾದಿತಪ್ಪಿ ನಡೆಯುವ ಜನರನ್ನು ಹಾದಿಗೆ ಹಚ್ಚಿಯೇ ತೀರುವೆನೆ೦ದು ಹೆಣಗುವ ಸದ್ದು ರುವಿನ ಕಾರುಣಿ ಕತೆಯನ್ನು ಎಂದು ವರ್ಣಿಸೋಣ! ಇಲ್ಲಿ ವಾಚಕರಿಗೆ ಒಂದು ಮಾತಿನ ಶಂಕ ಯು ಬರುವಹಾಗಿದೆ, ಶ್ರೀ ಶೇಷಾಚಲಸದ್ದು ರುಗಳು ಮಹಾಸಮರ್ಥರಿದ್ದ ಬಳಿಕ ಲೋಕೋದ್ಧಾರದ ಕಾಂಕ್ಷೆಯಿಂದಾಗಲಿ, ಜನರ ಪ್ರಾರ್ಥನೆಯಿಂದಾಗಲಿ ತಮ್ಮ ದೇಹವನ್ನು ಮತ್ತೆ ನಾಲ್ಕು ಒಪ್ಪತ್ತು ಇಟ್ಟು ಕೊಳ್ಳುವದಕ್ಕಾಗಿ ಬೇನೆಯನ್ನು ಕೆಲದಿನಗಳ ಮಟ್ಟಿಗಂದರೂ ತಮ್ಮ ದೇಹವ ಆಕ್ರಮಿಸದಂತೆ ಯಾಕೆ ತಡೆದುನಿಲ್ಲಿ ಸ ಅಲ್ಲೆ೦ಬ ಶಂಕೆಯಿಂದ ಅವರು ಪ್ರಶ್ನೆ ಮೂಡಿದರೂ ಮಾಡಬಹುದು; ಆದರೆ ಅವರ ಪ್ರಶ್ನೆ ವನ್ನು ಅಯೋಗ್ಯವೆಂದು ತಿರಸ್ಕರಿಸಲಾಗುವದಿಲ್ಲ. ಶ್ರೀ ಶೇಷಾಚಲಸದ್ದು ರುಗಳು, ತಮಗೆ ಶರಣು ಬಂದವರ ಕುಷ್ಟ ರೋಗ, ಉದರರೋಗ, ಕ್ಷಯರೋಗ ಮೊದಲಾದ ಮಹಾ ಮಹಾ ರೋಗಗಳ ದೂರಮಾಡಿ ರುವದನ್ನು ನೆನಿಸಿದರೆ, ಅವರಿಗೆ ತಮ್ಮ ರೋಗವನ್ನು ಕೆಲದಿನಗಳ ಮಟ್ಟಿಗಾದರು ತಡೆದು ನಿಲ್ಲಿ ಸುವದು ಅಸಾಧ್ಯವಿಲ್ಲ ೮೦ದು ಹೇಳಬೇಕಾಗುತ್ತದೆ; ಅದರೆ ಧರ್ಮ ಮೂರ್ತಿಯಾ-ಧರ್ಮಾಧೀನನ ಆದ ಸದ್ದು ರುವು ತಾನಾಗಿ ಸಿದ್ದವಾಗಿ ಸಕಾಲಕ್ಕೆ ಬಂದಿದ್ದ ಕರ್ಮವಿಪಾಕವನ್ನು ತಡೆ ದಿದ್ದರೆ ವೈಷಮ್ಮ ದೋಷಕ್ಕೆ ಗುರಿಯಾಗುತ್ತಿದ್ದನು ; ಅಂದ ಬಳಿಕ ಮಹಾಜ್ಞಾನಿ ಯಾದ ಆತನು ಹಾಗೆ ಮೂಡಿ ತನ್ನ ಧರ್ಮಕ್ಕೆ ವ್ಯತ್ಯಯವನ್ನು ಯಾಕೆ ತಂದುಕಂ ಡಾನು? ಆ ಸಾಧು ಶ್ರೇಷ್ಟ ನು ತನ್ನ ಸಾಧುಧರ್ಮಕ್ಕೆ ಬಾಧೆ ತರಲಿಚ್ಚಿಸದೆ, ಸಕಾಲ ದಲ್ಲಿ ಅತಿಥಿಯಾಗಿ ಬಂದರೋಗಕ್ಕೆ ದೇಹವನ್ನು ತಾನಾಗಿ ಸಂತೋಷದಿಂದ ಇಡು ಪಡಿದನು! ಶ್ರೀ ಶೇಷಾಚಲ ಸದ್ದು ರುವು ಸಕಲ ಚರಾಚರಾತ್ಮಕ ಜಗತ್ತು ಈಶ್ವರ ಸ್ವ ರೂಪವೆಂದು ಭಾವಿಸಿದಂತೆ, ರೋಗವನಾ ದರೂ ಈಶ, ರಸ್ವ ರೂಪವೆಂತಲೇ ಭಾವಿಸಿದನು; ಮೇಲಾಗಿ ಸದ್ದು ರುವು ಅತಿಥಿಸೇವಾತತ್ಪರನು, ಅಂದಬಳಿಕ ಸಕಶ ಲದಲ್ಲಿ ಅತಿಥಿಯಾಗಿ ಬಂದ ರೋಗರೂಪನಾದ ಈಶ್ವರನನ್ನು ತಡೆಯುವದುಹ್ಯಾಗೆ ನಿರಾಕರಿಸುವದು ಹ್ಯಾಗೆ? ಆ ರೋಗರಪಾತಿಥಿಯ ದೇಹಶೆSಷಣ ಕಾರ್ಯಕ್ಕೆ ಏಘ ಮಡುವದಾದ ರೂಹ್ಯಾಗೆ? ಪ್ರಿಯವಾಚಕರೇ, ಧರ್ಮದ ರ್ತಿಯಾದ ಸದು ರುವಿಗೆ ಈ ಪ್ರಸಂಗದಲ್ಲಿ ಒದಗಿದ ತೊಂದರೆಗಳನ್ನು ಮನಸ್ಸಿನಲ್ಲಿ ತಂದುಕೊಳ್ಳದೆಯಿರ ಬೇಡಿ೦ಕಂಡಿರಾ ! ಶ್ರೀ ಸದ್ದು ರುವು ಸಕಾಲಕ್ಕೆ ಬಂದ ರೋಗರೂಪನಾದ ಈಶ್ವರ ಸರಪಾತಿಥಿಯನ್ನು ನಿರಾಕರಿಸಬಾರದಾಯಿತು ; ಈಗ ದೇಹವಿಡಬೇಡಿರೆಂದು ಹೇಳಿಕೊಳ್ಳುವ ಈಶ್ವರಪ್ಪ ರಪ ರಾದ ಜನರ ಆಜ್ಞೆಯನ್ನು ಮೀರಬಾರದಾಯಿತು;