ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ನೋವು ೧೧೧
ಸವಿಯಾದ ಹಾಲನ್ನು ಕುಡಿದು, ಇಂಥ ಭಾಗ್ಯ ಹಳ್ಳಿಗಳಲ್ಲಷ್ಟೇ ಲಭ್ಯ ಎಂದು ಭಾವಿಸುತ್ತ ಗಜಾನನೆ ಲೋಟ ಕೆಳಗಿಟ್ಟು,ಅಂಗೈಯ ಹಿಂಬದಿಯಿಂದ ತುಟಿಗಳನ್ನ ಒರೆಸಿಕೊಳ್ಳುತ್ತಿದ್ದಾಗ,
ಗೌಡರು ಒದು ಮುಗಿಸಿ ತಲೆ ಎತ್ತಿದರು.
"ಹಿಂಥಾ ಅರ್ಜಿಯೆಲ್ಲ ಯಾತಕ್ಕೆ ? ಫೀಸುಗೀಸು ಒಂದೂ ಕೊಡ್ಬೇಕಾಗಿಲ್ಲ ಸೋಮಿ, ಈ ರೀತಿ ಯವಾರ ಪಟ್ನದಲ್ಲೇ ಸರಿ. ಕಣಿವೇಹಳ್ಳಿ ಸ್ಥಿತಿ ಅಷ್ಟು ಕೆಟ್ಟಿಲ್ಲ." ಗೌಡರ ಮಾತು ಕೇಳಿ ಸಂತುಷ್ಟನಾದ ಗಜಾನನ ಅಂದ : " ತಾವು ಹ್ಯಾಗೆ ಅಪ್ಪಣೆ ಕೊಡಿಸ್ತೀರೋ ಹಾಗೆ. ನನ್ನ ಅರ್ಜಿಗೆ ಉತ್ತರ ಅಂತ ತಾವೇನಾದರೂ-" "ಉತ್ತರವೂ ಇಲ್ಲ ಏನೂ ಇಲ್ಲ.ನಮ್ಮ ಮಾತು ಸಾಲ್ದೇನೋ ?" "ಸಾಕು." " ಈಗಿನ ಕಾಲ ಧರ್ಮ, ಓಟ್ಲು ಬೇಕು ಅಂತಾರೆ. ಇರ್ತದೆ. ಕಾಫಿ ಕುಡೀಬ್ಯಾಡಿ, ಶೋಕಿ ಮಾಡ್ಬ್ಯಾಡಿ–ಅಂತ ಅಳ್ಳಿಯೋರಿಗೆ ಯೋಳೋಕಾತದಾ ?" ಗೌಡರು ನಕ್ಕರು. ಅವರ ಮೀಸೆ ಆ ಹಾಸ್ಯವನ್ನು ಸವಿದು ಕುಣಿಯಿತು. ಗೌಡರ ತೃಪ್ತಿಯಲ್ಲಿ ತಾನೂ ಭಾಗಿ ಎಂದು ತೋರಿಸಲು ಗಜಾನನ ಮೌನವಾಗಿ ನಕ್ಕ. ಉಸಿರೆಳೆದು, ಗಜಾನನನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿ ಗೌಡರು ಕೇಳಿದರು : "ಓಟ್ಲಿಗೆ ನೀವೇ ಮಾಲಿಕರೊ ?” "ಹೌದು.” "ಈ ಮುಂಚೆ ಬಂದಿದ್ರಲ್ಲ, ಆಯಪ್ಪ ನಿಮ್ಮ ಸಂಬಂಧಿಕರೊ ?" “ವಿಷ್ಣುಮೂರ್ತಿಗಳು ನನಗೆ ದೂರದ ಸಂಬಂಧ." "ನಿಮಗೆಷ್ಟು ಜನ ಮಕ್ಕಳು ?" “ಒಂದೇ.ಕೈಗೂಸು." “ಗಂಡೋ ?” "ಅಲ್ಲ, ಹೆಣ್ಣು." [ಗಜಾನನನೆಂದುಕೊಂಡ : ಹೆಸರು ವಿನೋದಾ ಎಂದರೆ ಏನೆನ್ನುವರೊ ಗೌಡರು ?] "ಹು೦. ಎಷ್ಟು ವರ್ಷವಾಯ್ತು ಮದುವೆಯಾಗಿ ?" "ಹೋದ ವರ್ಷ." ಗೌಡರು ಯೋಚನಾಮಗ್ನರಾದರು. ಗಜಾನನ ಬಗೆಗಲ್ಲ. ತಮ್ಮ ಮಕ್ಕಳ ನೆನಪಾಗಿ. "ಈಗ ಎಲ್ರೂ ಮದುವೆ ತಡವಾಗೇ ಮಾಡ್ಕೊಂತಾರೆ," ಎಂದರು, ಕ್ಷಣಕಾಲ ನೆಲ ನೋಡಿ. ಮತ್ತೆ ಮುಖದ ಮೇಲೆ ಗೆಲುವು ತಂದುಕೊಂಡು ಅವರೆಂದರು : "ಎಲ್ಲಾ ಏರ್ಪಾಟು ಮಾಡ್ಕೊಂಡು ಹೋಗೋಕೆ ಬಂದಿದೀರೋ?" "ಹ್ಹ, ಹೋಟ್ಟು ಶುರುವಾಗೋಕ್ಮುಂಚೆ ಇನ್ನೊಂದ್ಸಲ ಬಂದು ಹೋಗ್ತೀನಿ,
ಸಾಮಾನು ತರಬೇಕಲ್ಲ. ಟಾರು ರಸ್ತೆಯಿಂದ ಇಲ್ಲಿಗೆ ಬರೋದೆ ಕಷ್ಟದ್ದು.”
"ಯಾವ ದಿವಸ ಅಂತ ಹೇಳಿ,–ಆಳುಗಳ್ನ ಕಳಿಸಾನ.”